ಗೃಹ ಸಚಿವರ ತವರಿನಲ್ಲಿ ನಿಜಕ್ಕೂ ಪೊಲೀಸ್ ಇಲಾಖೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆಯಾ?..ರಾಜಕೀಯ ಹಗೆ ಮತ್ತು ಪ್ರತಿಕಾರಕ್ಕೆ ಎಫ್.ಐ.ಐರ್ ಎಂಬುದೇ ಅಸ್ತ್ರವಾಗಿದೆಯಾ?
ಗೃಹ ಸಚಿವರ ತವರಿನಲ್ಲಿ ನಿಜಕ್ಕೂ ಪೊಲೀಸ್ ಇಲಾಖೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆಯಾ?..ರಾಜಕೀಯ ಹಗೆ ಮತ್ತು ಪ್ರತಿಕಾರಕ್ಕೆ ಎಫ್.ಐ.ಐರ್ ಎಂಬುದೇ ಅಸ್ತ್ರವಾಗಿದೆಯಾ?
![ಗೃಹ ಸಚಿವರ ತವರಿನಲ್ಲಿ ನಿಜಕ್ಕೂ ಪೊಲೀಸ್ ಇಲಾಖೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆಯಾ?..ರಾಜಕೀಯ ಹಗೆ ಮತ್ತು ಪ್ರತಿಕಾರಕ್ಕೆ ಎಫ್.ಐ.ಐರ್ ಎಂಬುದೇ ಅಸ್ತ್ರವಾಗಿದೆಯಾ?](https://malenadutoday.com/uploads/images/202301/image_750x_63d3735a55ddb.jpg)
ಪ್ರಜ್ಞಾವಂತ ಮತದಾರರ ಕ್ಷೇತ್ರವೆಂಬ ಹೆಗ್ಗಳಿಕೆ ಪಡೆದಿರುವ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ವೈಚಾರಿಕ ತಳಹದಿಯ ಮೇಲೆ ಆರೋಗ್ಯಕರವಾದ ರಾಜಕಾರಣ ನಡೆದುಕೊಂಡು ಬಂದಿದೆ. ಸೈದ್ದಾಂತಿಕ ಭಿನ್ನಾಭಿಪ್ರಾಯಗಳು ಏನೇ ಇದ್ದರೂ, ರಾಜಕೀಯ ನಾಯಕರು ತಮ್ಮದೇ ಧಾಟಿಯಲ್ಲಿ ಅದಕ್ಕೆ ಪ್ರತಿಕ್ರೀಯಿಸುವ ಮನಸ್ಥಿತಿ ಹೊಂದಿದ್ದಾರೆ. ಇದಕ್ಕೆ ಆರಗಾ ಜ್ಞಾನೇಂದ್ರರಾಗಲಿ ಅಥವಾ ಕಿಮ್ಮನೆ ರತ್ನಾಕರ್ ಅವರಾಗಲಿ ಹೊರತಾಗಿಲ್ಲ. ಆದರೆ ಆರಗಾ ಜ್ಞಾನೇಂದ್ರರವರು ಗೃಹ ಸಚಿವರಾಗುತ್ತಿದ್ದಂತೆ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ರಾಜಿ ಸಂಧಾನವಾಗಬೇಕಾದ ವಿಷಯಗಳು, ಕೇಸ್ ಆಗದಂತ ಪ್ರಕರಣಗಳು ಉಗುರಿಗೆ ಹೋಗುವ ವಿಷಯಕ್ಕೆ ಕೊಡಲಿ ತೆಗೆದುಕೊಂಡರು ಎಂಬಂತೆ ಗಂಭೀರವಾಗುತ್ತಿದೆ.
.ಗೃಹ ಸಚಿವರ ತವರು ಕ್ಷೇತ್ರ ಎಂದ ಮೇಲೆ ಪೊಲೀಸರ ಮೇಲೆ ತೂಗುಗತ್ತಿ ತೂಗುತ್ತಿರುತ್ತದೆ ಎಂಬುದು ವಾಸ್ತವದ ಕಟುಸತ್ಯ. ಎಲ್ಲ ವಿಷಯಗಳಿಗೂ ಗೃಹ ಸಚಿವರು ಮೂಗು ತೂರಿಸುವುದಿಲ್ಲ ನಿಜ. ಆದ್ರೆ ಅವರ ಸುತ್ತಮುತ್ತಲಿನ ವ್ಯವಸ್ಥೆ ಪೊಲೀಸ್ ಇಲಾಖೆಯನ್ನು ಆಪೋಷಣೆ ತೆಗೆದುಕೊಂಡಂತೆ ಕಾಣುತ್ತಿದೆ. ಯಾವುದೇ ಎಫ್.ಐ.ಆರ್ ಗಳು ಹಾಕಬೇಕೆಂದ್ರೂ,,ಪೊಲೀಸರು ಪೇಚಿಗೆ ಸಿಲುಕವಂತ ಪರಿಸ್ಥಿತಿ ಎದುರಾಗಿದೆ.