ಜಿಂಕೆ ಶಿಕಾರಿ! ಮೂವರು ಎಸ್ಕೇಪ್ ! ಮಂಡಗದ್ದೆ ರೇಂಜ್ನಲ್ಲಿ ತಮಿಳುನಾಡು ಮೂಲದವನ ಬಂಧನ!
The forest staff of Mandagadade range, who conducted a raid on charges of poaching deer, arrested a man from Tamil Nadu
![ಜಿಂಕೆ ಶಿಕಾರಿ! ಮೂವರು ಎಸ್ಕೇಪ್ ! ಮಂಡಗದ್ದೆ ರೇಂಜ್ನಲ್ಲಿ ತಮಿಳುನಾಡು ಮೂಲದವನ ಬಂಧನ!](https://malenadutoday.com/uploads/images/202312/image_870x_657fbce2652a9.webp)
SHIVAMOGGA| Dec 18, 2023 | ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಮಂಡಗದ್ದೆ ಅರಣ್ಯ ವಲಯದ ಅಧಿಕಾರಿಗಳು ಜಿಂಕೆಯನ್ನು ಶಿಕಾರಿ ಮಾಡಿದ್ದ ಆರೋಪದ ಮೇರೆ ಓರ್ವನನ್ನ ಅರೆಸ್ಟ್ ಮಾಡಿದ್ದಾರೆ. ಈ ವೇಳೆ ಮೂವರು ಆರೋಪಿಗಳು ನಾಪತ್ತೆಯಾಗಿದ್ದಾರೆ.
ಮಂಡಗದ್ದೆ ವಲಯದ ಗ್ರಾಮವೊಂದರಲ್ಲಿ ಜಿಂಕೆ ಶಿಕಾರಿಯಾಗಿದೆ ಎಂಬ ಮಾಹಿತಿಯನ್ನ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಅಪರಿಚಿತ ವ್ಯಕ್ತಿಗಳು ಹಾಕಿಕೊಟ್ಟಿದ್ದಾರೆ. ಮಾಹಿತಿ ಮೂಲ ಆಧರಿಸಿ ಹೊರಟ ಅರಣ್ಯ ಅಧಿಕಾರಿಗಳು, ನಿಗದಿತ ಸ್ಥಳದಲ್ಲಿ ದಾಳಿ ನಡೆಸಿದ್ದಾರೆ.
ಈ ವೇಳೆ ಮೂವರು ಆರೋಪಿಗಳು ನಾಪತ್ತೆಯಾಗಿದ್ದು, ಓರ್ವ ಅರಣ್ಯ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದಾರೆ. ಈತ ತಮಿಳುನಾಡು ಮೂಲದವರು ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನೂ ಈ ಸಂಬಂಧ ಮಂಡಗದ್ದೆ ವಲಯಾರಣ್ಯ ವಿಭಾಗದಲ್ಲಿ ಪ್ರಕರಣ ದಾಖಲಾಗಿದೆ.
ಡಿಸಿಎಫ್ ಶಿವಶಂಕರ್, ಎಸಿಎಫ್ ಪ್ರಕಾಶ್ ಮಾರ್ಗದರ್ಶನದಲ್ಲಿ ತಂಡ ಕಾರ್ಯಾಚರಣೆ ನಡೆಸಿದೆ. ಡಿಆರ್ ಎಫ್ಓ ಸುಹಾಸ್, ಗಸ್ತು ಅರಣ್ಯ ಪಾಲಕರಾದ ದುರುಗಪ್ಪ, ಮಹಾದೇವ ಕಣ್ಣೂರ, ವಾಹನ ಚಾಲಕ ನವೀನ್ ಮುಂತಾದವರು ಇದ್ದರು.