ಬೀದಿ ದೀಪ ಅಳವಡಿಸುವಾಗ ಕರೆಂಟ್ ಶಾಕ್! ಓರ್ವ ಸಾವು, ಇನ್ನೊಬ್ಬರಿಗೆ ತೀವ್ರ ಪೆಟ್ಟು!
A person died due to electric shock while installing a street lightಬೀದಿ ದೀಪವನ್ನು ಅಳವಡಿಸುವಾಗ ವಿದ್ಯುತ್ ಶಾಕ್ ಹೊಡೆದು ಓರ್ವ ಸಾವನ್ನಪ್ಪಿದ್ಧಾನೆ

KARNATAKA NEWS/ ONLINE / Malenadu today/ Sep 14, 2023 SHIVAMOGGA NEWS
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು, ಹುಂಚ ಗ್ರಾಮಪಂಚಾಯ್ತಿಯಲ್ಲಿ ಬರುವ ಆನೆಗದ್ದೆಯಲ್ಲಿ ವಿದ್ಯುತ್ ತಂತಿ ತಗುಲಿ ಓರ್ವ ಸಾವನ್ನಪ್ಪಿದ್ದಾರೆ. ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ನಡೆದಿದ್ದೇನು?
ನಿನ್ನೆ ಮಧ್ಯಾಹ್ನ ಈ ಘಟನೆ ಸಂಭವಿಸಿದ್ದು, ಮೃತರನ್ನು ನಾರಾಯಣ ಎಸ್ಸಿ ಎಂದು ಗುರುತಿಸಲಾಗಿದೆ. ಆನೆಗದ್ದೆಯಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ಕಂಬದಲ್ಲಿ ಬೀದಿ ದೀಪ ಅಳವಡಿಸುವ ಕೆಲಸ ನಡೆಯುತ್ತಿತ್ತು. ಈ ವೇಳೆ ಏಣಿ ಹಾಕಿಕೊಂಡು ಕಂಬದಲ್ಲಿ ದೀಪ ಅಳವಡಿಸುತ್ತಿದ್ದಾಗ ಏಣಿ ಜಾರಿದೆ. ಅಲ್ಲದೆ ವಿದ್ಯುತ್ ತಂತಿಗೆ ಏಣಿ ತಾಗಿದೆ. ಪರಿಣಾಮ ಕರೆಂಟ್ ಹೊಡೆದು ನಾರಾಯಣರವರು ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಈ ವೇಳೆ ಏಣಿ ಹಿಡಿದುಕೊಂಡಿದ್ದ ಇನ್ನೊಬ್ಬರ ಕೈಗಳು ಸುಟ್ಟುಹೋಗಿವೆ.
ನಾರಾಯಣ್ರವರು ಒಂದು ವರ್ಷದಿಂದ ನೀರು ಗಂಟಿಯಾಗಿ ಕೆಲಸ ಮಾಡುತ್ತಿದ್ದವರು. ಅಲ್ಲದೆ ಗ್ರಾಮ ಪಂಚಾಯಿತಿ ಸೂಚನೆಯಂತೆ ಕರೆಂಟ್ ಕಂಬಗಳಿಗೆ ಬೀದಿ ದೀಪ ಅಳವಡಿಸುತ್ತಿದ್ದರು. ಅವರಿಗೆ ಶ್ರೀದರ್ ಎಂಬವರು ಸಹಾಯಕರಾಗಿದ್ದರು. ಇಬ್ಬರು ಇಲ್ಲಿನ ಜಂಬಿ ರಸ್ತೆ ಹೊಸನೀರಿನ ಟ್ಯಾಂಕ್ ಹತ್ತಿರವಿರುವ ವಿದ್ಯುತ್ ಕಂಬಕ್ಕೆ 18 ಎತ್ತರದ ಏಣಿ ಬಳಸಿ ವಿದ್ಯುತ್ ದೀಪ ಅಳವಡಿಸಲು ಮುಂದಾಗಿದ್ದಾರೆ. ಈ ವೇಳೆ ಕಬ್ಬಿಣದ ಏಣಿ ತುಸು ಜಾರಿ , ಎಲೆಕ್ಟ್ರಿಕ್ ವಯರ್ಗೆ ತಾಗಿದೆ. ಪರಿಣಾಮ ವಿದ್ಯುತ್ ಪ್ರವಹಿಸಿ ಎಣಿ ಹತ್ತಿದ್ದ ನಾರಾಯಣ್ ವಿದ್ಯತ್ ಶಾಕ್ಗೆ ಒಳಗಾಗಿದ್ದಾರೆ. ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.
ಇನ್ನಷ್ಟು ಸುದ್ದಿಗಳು
-
ಶಿವಮೊಗ್ಗ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ! ಯಾವಾಗ ಸಂಚರಿಸಲಿದೆ ಬಹುನಿರೀಕ್ಷಿತ ಟ್ರೈನ್?
-
ಗಣೇಶೋತ್ಸವ ಹಾಗೂ ಈದ್ ಮಿಲಾದ್ ! ಸೌಹಾರ್ದ ಸಭೆಯಲ್ಲಿ ಸಚಿವರು & ಶಾಸಕರ ಒಂದೇ ಮಾತು! ಏನೇನು ನಡೀತು ವಿವರ ಇಲ್ಲಿದೆ