KARNATAKA NEWS/ ONLINE / Malenadu today/ Jul 29, 2023 SHIVAMOGGA NEWS
ಸಾಗರ- ಹೊಸನಗರ ವಿಧಾನಸಭಾ ಕ್ಷೇತ್ರ ಶಾಸಕ ಗೋಪಾಲಕೃಷ್ಣ ಬೇಳೂರು (MLA Gopalakrishna Belur ) ರಿಪ್ಪನ್ ಪೇಟೆಗೆ ಬಂದಿದ್ದ ವೇಳೆ ಬೋಂಡಾ ಹೇಗೆ ಮಾಡಿದರೆ ರುಚಿ ಜಾಸ್ತಿ ಎಂಬುದನ್ನ ವಿವರಿಸಿದ ವಿಡಿಯೋವೊಂದು ವೈರಲ್ ಆಗಿದೆ.
ನಡೆದಿದ್ದೇನು?
ರಿಪ್ಪನ್ ಪೇಟೆ ಪ್ರವಾಸದಲ್ಲಿದ್ದ ಶಾಸಕ ಬೇಳೂರು ಗೋಪಾಲಕೃಷ್ಣ, ಮಳೆಯ ನಡುವೆ, ಅವರ ಅಭಿಮಾನಿಗಳ ಜೊತೆ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದ ಬೃಂದಾವನ ಕ್ಯಾಂಟೀನ್ ಗೆ ತೆರಳಿದ್ದರು. ಅದೇ ಹೊತ್ತಿಗೆ ಕ್ಯಾಂಟೀನ್ ಮಾಲೀಕ ಸ್ವಾಮಿ ಬೋಂಡಾ ಮಾಡುತ್ತಿದ್ದರು. ಇದನ್ನು ಗಮನಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು ಈ ಮಳೆಗಾಲದಲ್ಲಿ ಇಂತಹ ಚುರುಮುರಿ ತಿಂಡಿ ಇದ್ದರೆ ಅದರ ಗಮತ್ತೆ ಬೇರೆ ಎಂದರು. ಅಲ್ಲದೆ ಮೆಣಸಿನಕಾಯಿ ದಪ್ಪ ಇರಬೇಕು, ಅದನ್ನು ಕತ್ತರಿಸಿ ಉಪ್ಪಿನಲ್ಲಿಟ್ಟು, ನಂತರ ಕಡ್ಲೆಹಿಟ್ಟಿನೊಂದಿಗೆ ಬೆರೆಸಿ, ಎಣ್ಣೆ ಬಾಣಲಿಗೆ ಹಾಕಿ ಕರಿಯಬೇಕು. ಹೀಗೆ ಬೋಂಡಾ ಕರಿದರೆ ಅದರ ರುಚಿಯ ಮಜವೇ ಬೇರೆ ಎಂದು ಹೋಟೆಲ್ ಮಾಲೀಕರಿಗೆ ಹೇಳಿದ್ರು. ಸದ್ಯ ಅವರ ಈ ವಿಡಿಯೋ ವೈರಲ್ ಆಗುತ್ತಿದ್ದು, ಶಾಸಕರ ಬಾಯಿರುಚಿ ಬಗ್ಗೆ ಜನರು ಮಾತನಾಡಿಕೊಳ್ತಿದ್ದಾರೆ.
ಬೋಂಡಾ ಹೇಗಿದ್ರೆ ರುಚಿ ಜಾಸ್ತಿ ಎಂಬುದನ್ನ ಶಾಸಕ ಬೇಳೂರು ಗೋಪಾಲಕೃಷ್ಣರವರು ಹೇಳ್ತಾರೆ ಕೇಳಿ! #shivamogga pic.twitter.com/6fymkZuUzt
— malenadutoday.com (@CMalenadutoday) July 29, 2023
SHIVAMOGGA AIRPORT / ಶಿವಮೊಗ್ಗ-ಬೆಂಗಳೂರು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್!
ರೈಲ್ವೆ ಪ್ರಯಾಣಿಕರಿಗೆ ಸೂಚನೆ! ಜನಶತಾಬ್ದಿ ಸೇರಿ ಹಲವು ಟ್ರೈನ್ಗಳ ಸಂಚಾರದಲ್ಲಿ ವ್ಯತ್ಯಯ! ವಿವರ ಇಲ್ಲಿದೆ