Hosanagara / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಂಕರನಾಗ್ ಬ್ರದರ್ಸ್ ನಟಿಸಿದ್ದ ಮಿಂಚಿನ ಓಟ ಸಿನಿಮಾ ಬಹುತೇಕರು ನೋಡಿರುತ್ತಾರೆ. ಅದೇ ರೀತಿಯ ಸೀನ್ ಒಂದು ಶಿವಮೊಗ್ಗದಲ್ಲಿ ಮೊನ್ನೆ ಬುಧವಾರ ನಡೆದಿದ್ದು, ನಿನ್ನೆ ಗುರುವಾರ ವರದಿಯಾಗಿದೆ. ಜೈಲ್ಗೆ ಹೋಗಬೇಕಿದ್ದ ವಿಚಾರಣಾದೀನ ಕೈದಿಯೊಬ್ಬ ಜೀಪ್ನಿಂದಲೇ ಎಸ್ಕೇಪ್ ಆಗಿದ್ದಾನೆ.
ಹೌದು, ಹೊಸನಗರದಲ್ಲಿ ಈ ಘಟನೆ ನಡೆದಿದೆ. ಫಾರೆಸ್ಟ್ ಡಿಪಾರ್ಟ್ಮೆಂಟ್ ಸಿಬ್ಬಂದಿಯನ್ನ ತಳ್ಳಿ ಆರೋಪಿಯೊಬ್ಬ ಎಸ್ಕೇಪ್ ಆಗಿದ್ದಾನೆ. ಕಾರಾಗೃಹಕ್ಕೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಬಟ್ಟೆಮಲ್ಲಪ್ಪ ಗ್ರಾಮದಲ್ಲಿ ಆರೋಪಿ ಎಸ್ಕೇಪ್ ಆಗಿದ್ದಾನೆ
ಪ್ರಕರಣದ ವಿವರ
ಕಳ್ಳಬೇಟೆ ಆರೋಪದಡಿ ತಾಲೂಕಿನ ಆಡುಗೋಡಿ ಗ್ರಾಮದ ವೆಂಕಟೇಶ ಎಂಬಾತನನ್ನು ಅರಣ್ಯ ಸಿಬ್ಬಂದಿ ಬಂಧಿಸಿದ್ದು ಕೋರ್ಟ್ಗೆ ಪ್ರೊಡ್ಯೂಸ್ ಮಾಡಿದ್ದರು. ಜೆಎಂಎಫ್ಸಿ ಕೋರ್ಟ್ ಆತನನ್ನ ಜೆಸಿಗೆ ಒಪ್ಪಿಸಿತ್ತು. ಅದರಿಂದ ಆತನನ್ನು ಕೋರ್ಟ್ಗೆ ಬಿಡಲು ಜೀಪ್ ತಗೊಂಡು ಮೂವರು ಸಿಬ್ಬಂದಿ ಹೊರಟಿದ್ದರು. ಬಟ್ಟೆ ಮಲ್ಲಪ್ಪ ಬಳಿ ಹಸಿವಾಗ್ತಿದೆ ಊಟ ಕೊಡಿಸಿ ಎಂದ ಆರೋಪಿ ಎಸ್ಕೇಪ್ಗೆ ಸ್ಕೆಚ್ ಹಾಕಿದ್ದ. ಆದರೆ ಇದು ಅರಣ್ಯ ಸಿಬ್ಬಂದಿಗೆ ಗೊತ್ತಾಗಲಿಲ್ಲ. ಉಪವಲಯ ಅರಣ್ಯಾಧಿಕಾರಿ ಆರೋಪಿಗೆ ಊಟ ತರಲು ಹೋಟೆಲ್ಗೆ ಹೋದಾಗ, ಇತ್ತ ಜೀಪಿನಲ್ಲಿದ್ದ ಸಿಬ್ಬಂದಿಯನ್ನು ತಳ್ಳಾಡಿ, ಹಲ್ಲೆ ಮಾಡಿ ಆರೋಪಿ ಎಸ್ಕೇಪ್ ಆಗಿದ್ದಾನೆ. ಈ ಸಂಬಂಧ ಕೇಸ್ ಸಹ ದಾಖಲಾಗಿದೆ.
