ಶಿರಾಳಕೊಪ್ಪದಲ್ಲಿ ಗೋಡೆ ಬರಹ / ಎಸ್ಪಿ ಹೇಳಿದ್ದೇನು? / ನಡೆದಿದ್ದೇನು?
ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್, ಗೋಡೆಬರಹ ಪ್ರಕರಣದಲ್ಲಿ, ಕರೆಂಟ್ ಕಂಬವೊಂದರ ಮೇಲೆ ಬರೆಯಲಾದ ಬರಹ, ಆ ಸಂಘಟನೆ ನಿಷೇಧಗೊಳ್ಳುವುದಕ್ಕೂ ಹಿಂದಿನದ್ದು ಎಂದು ತಿಳಿಸಿದ್ದಾರೆ. ಅಲ್ಲದೆ ಇದಕ್ಕೆ ಪೂರಕವಾದ ಸಾಕ್ಷ್ಯಗಳು ಸಿಕ್ಕಿದ್ದು, ಅದರ ವಿವರಗಳನ್ನು ಸಹ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು (shikaripura) ಶಿರಾಳಕೊಪ್ಪದಲ್ಲಿ (shiralakoppa) JOIN CFIಎಂದು ಎಲ್ಲಾ ಕಡೆಗಳಲ್ಲಿ ಬರೆಯಲಾಗಿದೆ ಎಂಬ ಸುದ್ದಿ ಮೊನ್ನೆಯಿಂದಲೂ ಹರಿದಾಡುತ್ತಿದೆ. ನಿನ್ನೆ ಈ ಸುದ್ದಿ ರಾಜ್ಯದೆಲ್ಲಡೆ ಸುದ್ದಿ ಮಾಡಿತ್ತು. ನಿಷೇಧಿತ ಸಂಘಟನೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾಗೆ ಸೇರ್ಪಡೆಗೊಳ್ಳಿ ಎಂಬಂತಹ ಬರಹಗಳು ಯಾರದ್ದೋ ಕುಕೃತ್ಯ ಎಂದು ವರದಿಯಾಗಿತ್ತು.
ಇದನ್ನು ಸಹ ಓದಿ : ಸರ್ಕಾರಿ ಅಧಿಕಾರಿಗಳೇ ಹುಷಾರ್ | ರಹಸ್ಯ ಕ್ಯಾರ್ಯಾಚರಣೆ ಹೆಸರಿನಲ್ಲಿ ಹೆದರಿಸುವವರಿದ್ದಾರೆ?
ಆದರೆ ಈ ಬಗ್ಗೆ ಪೊಲೀಸ್ ಮೂಲಗಳು ಬೇರೆಯದ್ದೆ ಮಾಹಿತಿಯನ್ನು ನೀಡಿದೆ. ಈ ಸಂಬಂಧ ಪ್ರೆಸ್ ಗ್ರೂಪ್ನಲ್ಲಿ ಮಾಹಿತಿ ನೀಡಿರುವ ಎಸ್ಪಿ ಜಿಕೆ ಮಿಥುನ್ ಕುಮಾರ್, ಗೋಡೆಬರಹ ಪ್ರಕರಣದಲ್ಲಿ, ಕರೆಂಟ್ ಕಂಬವೊಂದರ ಮೇಲೆ ಬರೆಯಲಾದ ಬರಹ, ಆ ಸಂಘಟನೆ ನಿಷೇಧಗೊಳ್ಳುವುದಕ್ಕೂ ಹಿಂದಿನದ್ದು ಎಂದು ತಿಳಿಸಿದ್ದಾರೆ. ಅಲ್ಲದೆ ಇದಕ್ಕೆ ಪೂರಕವಾದ ಸಾಕ್ಷ್ಯಗಳು ಸಿಕ್ಕಿದ್ದು, ಅದರ ವಿವರಗಳನ್ನು ಸಹ ನೀಡಿದ್ದಾರೆ.
ಇದನ್ನು ಸಹ ಓದಿ : ಪಿಕಪ್ಗೆ ಹೊರಟಿದ್ದ ಟೂರಿಸ್ಟ್ ಗಾಡಿ ಆಕ್ಸಿಡೆಂಟ್, ಪಲ್ಟಿಯಾಗಿ ಮೋರಿಗೆ ಬಿದ್ದ ಬಸ್
ಈ ಸಂಬಂಧ ಎರಡು ವಿಡಿಯೋಗಳು ಲಭ್ಯವಾಗಿದ್ದು ಒಂದು 04/09/2022 ತಾರೀಖು ಮತ್ತೊಂದು 12/09/2022 ರಂದು ನಡೆದ ಗಣಪತಿ ವಿಸರ್ಜನಾ ಮೆರವಣಿಗೆಯ ವಿಡಿಯೋಗಳಾಗಿವೆ. ಈ ವಿಡಿಯೋಗಳಲ್ಲಿ ಸ್ಪಷ್ಟವಾಗಿ ಕರೆಂಟ್ ಕಂಬದ ಮೇಲೆ ಬರಹ ಇರುವುದು ಕಾಣುತ್ತಿದೆ.
ಹೀಗಾಗಿ ಇದು, ಈಗ ಯಾರೋ ನಡೆಸಿದ ಕುಕೃತ್ಯವಲ್ಲ, ಈ ಮೊದಲೇ ಇದ್ದ ಬರಹವಾಗಿದೆ ಎಂಬುದು ಸ್ಪಷ್ಟವಾಗಿದೆ. ಆದಾಗ್ಯು ಘಟನೆಯನ್ನು ನಿನ್ನೆ ಮೊನ್ನೆ ನಡೆದಿದೆ ಎಂಬಂತೆ ಬಿಂಬಿಸಿ ವೈರಲ್ ಮಾಡಿದ್ದು ಯಾರು? ಘಟನೆಯ ಹಿಂದಿರೋ ಉದ್ದೇಶ ಮತ್ತು ಫೋಟೋಗಳನ್ನು ಹಂಚಿದ್ದರ ಹಿಂದಿರುವ ವ್ಯಕ್ತಿಗಳ ಬಗ್ಗೆ ಪೊಲೀಸ್ ಇಲಾಖೆ ತಲಾಶ್ ನಡೆಸ್ತಿದೆ.
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link
#ಶಿರಾಳಕೊಪ್ಪದಲ್ಲಿ #ಗೋಡೆಬರಹ / @Shivamogga_SP ಹೇಳಿದ್ದೇನು? / ನಡೆದಿದ್ದೇನು - https://t.co/0YIlihGKYw#shivamogga #shikaripura #shiralakoppa pic.twitter.com/28QKGO9L6O — malenadutoday.com (@CMalenadutoday) December 5, 2022