ಶಿರಾಳಕೊಪ್ಪದಲ್ಲಿ ಗೋಡೆ ಬರಹ / ಎಸ್​ಪಿ ಹೇಳಿದ್ದೇನು? / ನಡೆದಿದ್ದೇನು?

ಶಿವಮೊಗ್ಗ ಎಸ್​​ಪಿ ಮಿಥುನ್ ಕುಮಾರ್, ಗೋಡೆಬರಹ ಪ್ರಕರಣದಲ್ಲಿ, ಕರೆಂಟ್ ಕಂಬವೊಂದರ ಮೇಲೆ ಬರೆಯಲಾದ ಬರಹ, ಆ ಸಂಘಟನೆ ನಿಷೇಧಗೊಳ್ಳುವುದಕ್ಕೂ ಹಿಂದಿನದ್ದು ಎಂದು ತಿಳಿಸಿದ್ದಾರೆ. ಅಲ್ಲದೆ ಇದಕ್ಕೆ ಪೂರಕವಾದ ಸಾಕ್ಷ್ಯಗಳು ಸಿಕ್ಕಿದ್ದು, ಅದರ ವಿವರಗಳನ್ನು ಸಹ ನೀಡಿದ್ದಾರೆ.

ಶಿರಾಳಕೊಪ್ಪದಲ್ಲಿ ಗೋಡೆ ಬರಹ / ಎಸ್​ಪಿ ಹೇಳಿದ್ದೇನು? / ನಡೆದಿದ್ದೇನು?

 ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು (shikaripura) ಶಿರಾಳಕೊಪ್ಪದಲ್ಲಿ  (shiralakoppa)  JOIN CFIಎಂದು ಎಲ್ಲಾ ಕಡೆಗಳಲ್ಲಿ ಬರೆಯಲಾಗಿದೆ ಎಂಬ ಸುದ್ದಿ ಮೊನ್ನೆಯಿಂದಲೂ ಹರಿದಾಡುತ್ತಿದೆ. ನಿನ್ನೆ ಈ ಸುದ್ದಿ ರಾಜ್ಯದೆಲ್ಲಡೆ ಸುದ್ದಿ ಮಾಡಿತ್ತು. ನಿಷೇಧಿತ  ಸಂಘಟನೆ ಕ್ಯಾಂಪಸ್​ ಫ್ರಂಟ್​ ಆಫ್ ಇಂಡಿಯಾಗೆ ಸೇರ್ಪಡೆಗೊಳ್ಳಿ ಎಂಬಂತಹ ಬರಹಗಳು ಯಾರದ್ದೋ ಕುಕೃತ್ಯ ಎಂದು  ವರದಿಯಾಗಿತ್ತು. 

ಇದನ್ನು ಸಹ ಓದಿ : ಸರ್ಕಾರಿ ಅಧಿಕಾರಿಗಳೇ ಹುಷಾರ್ |  ರಹಸ್ಯ ಕ್ಯಾರ್ಯಾಚರಣೆ ​ ಹೆಸರಿನಲ್ಲಿ ಹೆದರಿಸುವವರಿದ್ದಾರೆ? 

ಆದರೆ ಈ ಬಗ್ಗೆ ಪೊಲೀಸ್​ ಮೂಲಗಳು ಬೇರೆಯದ್ದೆ ಮಾಹಿತಿಯನ್ನು ನೀಡಿದೆ. ಈ ಸಂಬಂಧ ಪ್ರೆಸ್​ ಗ್ರೂಪ್​ನಲ್ಲಿ ಮಾಹಿತಿ ನೀಡಿರುವ ಎಸ್​ಪಿ ಜಿಕೆ ಮಿಥುನ್ ಕುಮಾರ್, ಗೋಡೆಬರಹ ಪ್ರಕರಣದಲ್ಲಿ, ಕರೆಂಟ್ ಕಂಬವೊಂದರ ಮೇಲೆ ಬರೆಯಲಾದ ಬರಹ, ಆ ಸಂಘಟನೆ ನಿಷೇಧಗೊಳ್ಳುವುದಕ್ಕೂ  ಹಿಂದಿನದ್ದು ಎಂದು ತಿಳಿಸಿದ್ದಾರೆ. ಅಲ್ಲದೆ ಇದಕ್ಕೆ ಪೂರಕವಾದ ಸಾಕ್ಷ್ಯಗಳು ಸಿಕ್ಕಿದ್ದು, ಅದರ ವಿವರಗಳನ್ನು ಸಹ ನೀಡಿದ್ದಾರೆ. 

ಇದನ್ನು ಸಹ ಓದಿ  : ಪಿಕಪ್​ಗೆ ಹೊರಟಿದ್ದ ಟೂರಿಸ್ಟ್ ಗಾಡಿ ಆಕ್ಸಿಡೆಂಟ್​, ಪಲ್ಟಿಯಾಗಿ ಮೋರಿಗೆ ಬಿದ್ದ ಬಸ್​

ಈ ಸಂಬಂಧ ಎರಡು ವಿಡಿಯೋಗಳು ಲಭ್ಯವಾಗಿದ್ದು ಒಂದು 04/09/2022  ತಾರೀಖು ಮತ್ತೊಂದು 12/09/2022 ರಂದು ನಡೆದ ಗಣಪತಿ ವಿಸರ್ಜನಾ ಮೆರವಣಿಗೆಯ ವಿಡಿಯೋಗಳಾಗಿವೆ. ಈ ವಿಡಿಯೋಗಳಲ್ಲಿ ಸ್ಪಷ್ಟವಾಗಿ ಕರೆಂಟ್ ಕಂಬದ ಮೇಲೆ ಬರಹ ಇರುವುದು ಕಾಣುತ್ತಿದೆ. 

ಹೀಗಾಗಿ ಇದು, ಈಗ ಯಾರೋ ನಡೆಸಿದ ಕುಕೃತ್ಯವಲ್ಲ, ಈ ಮೊದಲೇ ಇದ್ದ ಬರಹವಾಗಿದೆ ಎಂಬುದು ಸ್ಪಷ್ಟವಾಗಿದೆ. ಆದಾಗ್ಯು ಘಟನೆಯನ್ನು ನಿನ್ನೆ ಮೊನ್ನೆ ನಡೆದಿದೆ ಎಂಬಂತೆ ಬಿಂಬಿಸಿ ವೈರಲ್ ಮಾಡಿದ್ದು ಯಾರು? ಘಟನೆಯ ಹಿಂದಿರೋ ಉದ್ದೇಶ ಮತ್ತು ಫೋಟೋಗಳನ್ನು ಹಂಚಿದ್ದರ ಹಿಂದಿರುವ ವ್ಯಕ್ತಿಗಳ ಬಗ್ಗೆ ಪೊಲೀಸ್ ಇಲಾಖೆ ತಲಾಶ್​ ನಡೆಸ್ತಿದೆ. 

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link