ಪಿಕಪ್ಗೆ ಹೊರಟಿದ್ದ ಟೂರಿಸ್ಟ್ ಗಾಡಿ ಆಕ್ಸಿಡೆಂಟ್, ಪಲ್ಟಿಯಾಗಿ ಮೋರಿಗೆ ಬಿದ್ದ ಬಸ್
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಬೇಗುವಳ್ಳಿ ಸಮೀಪ ಈ ಘಟನೆ ಸಂಭವಿಸಿದೆ,
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಬೇಗುವಳ್ಳಿ ಸಮೀಪ ಇವತ್ತು ಬೆಳಗ್ಗಿನ ಅಪಘಾತವೊಂದು ಸಂಭವಿಸಿದೆ. ಉಡುಪಿ ಕಡೆಗೆ ಪಿಕಪ್ಗಾಗಿ ಹೊರಟಿದ್ದ ಟೂರಿಸ್ಟ್ ಬಸ್ವೊಂದು ಪಲ್ಟಿಯಾಗಿದೆ. ಕೆ.ಎ.51 ಎಡಿ 8730 ನಂಬರ್ನ ಬಸ್ ಶಿವಮೊಗ್ಗದಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಬೇಗುವಳ್ಳಿಯ ಬಳಿಯಲ್ಲಿ ವಾಹನ ಪಲ್ಟಿಯಾಗಿದೆ.
ಬೇಗುವಳ್ಳಿಯ ಕೆರೆಯ ಬಳಿಯಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ, ಆ ಕಡೆಗೆ ಹೋಗುತ್ತಿದ್ದ ವಾಹನ ಪುನಃ ಶಿವಮೊಗ್ಗದ ಕಡೆಗೆ ತಿರುಗಿ ಪಲ್ಟಿಯಾಗಿದೆ. ಅಲ್ಲದೆ ರಸ್ತೆ ಬದಿಗೆ ಜರಿದು ಮೋರಿಗೆ ವಾಲಿಕೊಂಡು ಬಿದ್ದಿದೆ.
ಸರ್ಕಾರಿ ಅಧಿಕಾರಿಗಳೇ ಹುಷಾರ್ | ರಹಸ್ಯ ಕ್ಯಾರ್ಯಾಚರಣೆ ಹೆಸರಿನಲ್ಲಿ ಹೆದರಿಸುವವರಿದ್ದಾರೆ?
ಸದ್ಯ ಘಟನೆ ಸಂಬಂದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಪಿಕಪ್ಗೆ ಹೊರಟ್ಟಿದ್ದ ವೆಹಿಕಲ್ ಇದಾಗಿತ್ತು. ಹೀಗಾಗಿ ಬಸ್ನಲ್ಲಿ ಪ್ರಯಾಣಿಕರು ಇರಲಿಲ್ಲ. ಹೀಗಾಗಿ ಘಟನೆಯಲ್ಲಿ ಯಾರಿಗೂ ಅಪಾಯವಾಗಿಲ್ಲ. ಇನ್ನೂ ಡ್ರೈವರ್ ಗಾಯಗೊಂಡಿದ್ದಾರೆ.
ಇನ್ನೂ ನಿದ್ರೆ ಮಂಪರಿನಿಂದಾಗಿ ಈ ಘಟನೆ ಸಂಭವಿಸಿರಬಹುದು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಈ ಬಗ್ಗೆ ಇನ್ನಷ್ಟೆ ಮಾಹಿತಿ ಲಭ್ಯವಾಗಬೇಕಿದೆ
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link