ಪಿಕಪ್​ಗೆ ಹೊರಟಿದ್ದ ಟೂರಿಸ್ಟ್ ಗಾಡಿ ಆಕ್ಸಿಡೆಂಟ್​, ಪಲ್ಟಿಯಾಗಿ ಮೋರಿಗೆ ಬಿದ್ದ ಬಸ್​

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಬೇಗುವಳ್ಳಿ ಸಮೀಪ ಈ ಘಟನೆ ಸಂಭವಿಸಿದೆ,

ಪಿಕಪ್​ಗೆ ಹೊರಟಿದ್ದ ಟೂರಿಸ್ಟ್ ಗಾಡಿ ಆಕ್ಸಿಡೆಂಟ್​, ಪಲ್ಟಿಯಾಗಿ ಮೋರಿಗೆ ಬಿದ್ದ ಬಸ್​
ತೀರ್ಥಹಳ್ಳಿ ಬೇಗುವಳ್ಳಿ ಸಮೀಪ ಸಂಭವಿಸಿದ ಅಪಘಾತ
ಪಿಕಪ್​ಗೆ ಹೊರಟಿದ್ದ ಟೂರಿಸ್ಟ್ ಗಾಡಿ ಆಕ್ಸಿಡೆಂಟ್​, ಪಲ್ಟಿಯಾಗಿ ಮೋರಿಗೆ ಬಿದ್ದ ಬಸ್​

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಬೇಗುವಳ್ಳಿ ಸಮೀಪ ಇವತ್ತು ಬೆಳಗ್ಗಿನ ಅಪಘಾತವೊಂದು ಸಂಭವಿಸಿದೆ. ಉಡುಪಿ ಕಡೆಗೆ ಪಿಕಪ್​ಗಾಗಿ ಹೊರಟಿದ್ದ ಟೂರಿಸ್ಟ್​ ಬಸ್​ವೊಂದು ಪಲ್ಟಿಯಾಗಿದೆ. ಕೆ.ಎ.51 ಎಡಿ 8730  ನಂಬರ್​ನ ಬಸ್​ ಶಿವಮೊಗ್ಗದಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಬೇಗುವಳ್ಳಿಯ ಬಳಿಯಲ್ಲಿ ವಾಹನ ಪಲ್ಟಿಯಾಗಿದೆ. 

ಬೇಗುವಳ್ಳಿಯ ಕೆರೆಯ ಬಳಿಯಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ, ಆ ಕಡೆಗೆ ಹೋಗುತ್ತಿದ್ದ ವಾಹನ ಪುನಃ ಶಿವಮೊಗ್ಗದ ಕಡೆಗೆ ತಿರುಗಿ ಪಲ್ಟಿಯಾಗಿದೆ. ಅಲ್ಲದೆ ರಸ್ತೆ ಬದಿಗೆ ಜರಿದು ಮೋರಿಗೆ ವಾಲಿಕೊಂಡು ಬಿದ್ದಿದೆ. 

ಸರ್ಕಾರಿ ಅಧಿಕಾರಿಗಳೇ ಹುಷಾರ್ |  ರಹಸ್ಯ ಕ್ಯಾರ್ಯಾಚರಣೆ ​ ಹೆಸರಿನಲ್ಲಿ ಹೆದರಿಸುವವರಿದ್ದಾರೆ? 

ಸದ್ಯ ಘಟನೆ ಸಂಬಂದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಪಿಕಪ್​ಗೆ ಹೊರಟ್ಟಿದ್ದ ವೆಹಿಕಲ್​ ಇದಾಗಿತ್ತು. ಹೀಗಾಗಿ ಬಸ್​ನಲ್ಲಿ ಪ್ರಯಾಣಿಕರು ಇರಲಿಲ್ಲ. ಹೀಗಾಗಿ ಘಟನೆಯಲ್ಲಿ ಯಾರಿಗೂ ಅಪಾಯವಾಗಿಲ್ಲ. ಇನ್ನೂ ಡ್ರೈವರ್ ಗಾಯಗೊಂಡಿದ್ದಾರೆ. 

ಇನ್ನೂ ನಿದ್ರೆ ಮಂಪರಿನಿಂದಾಗಿ ಈ ಘಟನೆ ಸಂಭವಿಸಿರಬಹುದು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಈ ಬಗ್ಗೆ ಇನ್ನಷ್ಟೆ ಮಾಹಿತಿ ಲಭ್ಯವಾಗಬೇಕಿದೆ

BREAKING NEWS : ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ಗೆ ​ ಶೀಘ್ರದಲ್ಲಿಯೇ ಹೊಸ ಅಧ್ಯಕ್ಷ? ಯಾರಾಗ್ತಾರೆ ಡಿಸ್ಟ್ರಿಕ್ಟ್​ ಪ್ರೆಸಿಡೆಂಟ್ ಇಲ್ಲಿದೆ ವರದಿ

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link