ಚಿರತೆ ಮೇಲೆ ಕಾಡು ಹಂದಿಯ ಅಟ್ಯಾಕ್​! ನೀರು ಅರಸಿ ಬಂದು ಪ್ರಾಣ ಬಿಟ್ಟ ವನ್ಯಜೀವಿ!

Wild boar attack on leopard! Wildlife came in search of water and died!

ಚಿರತೆ ಮೇಲೆ ಕಾಡು ಹಂದಿಯ ಅಟ್ಯಾಕ್​! ನೀರು ಅರಸಿ ಬಂದು ಪ್ರಾಣ ಬಿಟ್ಟ ವನ್ಯಜೀವಿ!

KARNATAKA NEWS/ ONLINE / Malenadu today/ Jun 8, 2023 SHIVAMOGGA NEWS

ಶಿರಾಳಕೊಪ್ಪ / ಇಲ್ಲಿನ ಕೌವಲಿ ಸಮೀಪ ಚಿರತೆಯೊಂದು ಕಾಡು ಹಂದಿಯ ತಿವಿತಕ್ಕೆ ಬಲಿಯಾಗಿ ಸಾವನ್ನಪ್ಪಿದೆ.  ಶಿಕಾರಿಪುರ ತಾಲೂಕಿನ ತೊಗರ್ಸಿ ಸಮೀಪದ ಕೌವಲಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. 

ನಡೆದಿದ್ದೇನು?

ಗ್ರಾಮಕ್ಕೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದಲ್ಲಿ ಐದು ವರ್ಷದ ಚಿರತೆ ಸಾವನ್ನಪ್ಪಿರುವ ಸ್ಥಳೀಯ ರೈತರು ಗಮನಿಸಿ ಅರಣ್ಯ ಇಲಅಖೆಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು  . ಮರಣೋತ್ತರ ಪರೀಕ್ಷೆ ನಡೆಸಿ,  ಕಾಡು ಹಂದಿ ಬೇಟೆಯಾಡಲು ಹೋದ ಸಂದದರ್ಭದಲ್ಲಿ ಈ ಘಟನೆ ನಡೆದಿರಬಹುದು ಎಂದಿದ್ದಾರೆ. 

ಚಿರತೆಗೆ ಕಾಡು ಹಂದಿ  ತಿವಿದ ಕಾರಣಕ್ಕೆ ಚಿರತೆಯ ಬೆನ್ನು ಮೂಳೆ ತುಂಡಾಗಿದ್ದು, ಆ ಗಾಯದಿಂದಲೇ ನಿತ್ರಾಣಗೊಂಡು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ವನ್ಯಜೀವಿ ವೈದ್ಯರು ತಿಳಿಸಿದ್ದಾರೆ.   

ಸಾಗರ-ತಾಳಗುಪ್ಪ ನಡುವೆ ಭೀಕರ ಬೈಕ್​ ಆಕ್ಸಿಡೆಂಟ್! ಶಿರಸಿ ಮೂಲದ ಓರ್ವನ ಸಾವು!

ಸಾಗರ/ ತಾಲ್ಲೂಕಿನ ಕಾನ್ಲೆ ಕ್ರಾಸ್ ಬಳಿಯಲ್ಲಿ ಎರಡು ಬೈಕ್​ಗಳ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಓರ್ವ ಸಾವನ್ನಪ್ಪಿದ್ದಾರೆ. 

ಯಾರು ಸೂಡಾ ಅಧ್ಯಕ್ಷರು? ಯಾರು ಮುಂದಿನ ಕಾಂಗ್ರೆಸ್ ಜಿಲ್ಲಾಧ್ಯಕ್ಷರು? ಶಿವಮೊಗ್ಗದ ಪ್ರಮುಖ ಹುದ್ದೆಗಾಗಿ ಬೆಂಗಳೂರಿನಲ್ಲಿಯೇ ಜೋರು ಪೈಪೋಟಿ! ಟಿಕೆಟ್ ತಂತ್ರಗಾರಿಕೆ ಮತ್ತೆ ಗೆಲ್ಲುತ್ತಾ?

 ಹೇಗಾಯ್ತು ಘಟನೆ

ತಾಳಗುಪ್ಪ-ಸಾಗರ ರಸ್ತೆ ನಡುವಲ್ಲಿ ನಿನ್ನೆ ಸಂಜೆ  06:50 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಎರಡು ಬೈಕ್​ಗಳು ಪರಸ್ಪರ ಡಿಕ್ಕಿಯಾಗಿದ್ದು, ಶಿರಸಿ ಮೂಲದ ಮಣಿ ಎಂಬ ಯುವಕ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ಧಾನೆ. ಆತನು ಸಹ ಶಿರಸಿ ಮೂಲದ ಮಂಜುನಾಥ್​ ಎನ್ನಲಾಗಿದ್ದು, ಆತನನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬ ಬೈಕ ಸವಾರನಿಗೂ ಗಾಯಗಳಾಗಿದ್ದು, ಆತನನ್ನ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.