ಜೀವ ಪರ ಸರ್ಜಿ ಬಿಜೆಪಿ ಪರ ಆಗಲು ಕಾರಣವಾಗಿದ್ದು ವಿನಯ್ ಗುರೂಜಿಯಾ?

ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪರವರನ್ನು ಸಹ ಭೇಟಿ ಮಾಡಿದ್ದರು, ಅಲ್ಲದೆ ಡಾ.ಧನಂಜಯ್ ಸರ್ಜಿಯವರ ಕುಟುಂಬವನ್ನು ಸಹ ಭೇಟಿ ಮಾಡಿದ್ದರು.

ಜೀವ ಪರ ಸರ್ಜಿ ಬಿಜೆಪಿ ಪರ ಆಗಲು ಕಾರಣವಾಗಿದ್ದು ವಿನಯ್ ಗುರೂಜಿಯಾ?

 ಶಿವಮೊಗ್ಗ  ನಗರ ಕ್ಷೇತ್ರದಲ್ಲಿ ಖುದ್ದು ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿ, ಪಕ್ಷಗಳ ಟಿಕೆಟ್ ಹಾಗೂ ಸ್ವತಂತ್ರ್ಯ ಅಭ್ಯರ್ಥಿಯಾಗುವ ಹುಮ್ಮಸ್ಸು ತೋರಿದ್ದ ಡಾ. ಧನಂಜಯ್ ಸರ್ಜಿ ನಿನ್ನೆ ಅಧಿಕೃತವಾಗಿ ಬಿಜೆಪಿ ಸೇರಿದ್ಧಾರೆ. 

ಜೀವಪರ ಸರ್ಜಿ ಎಂದೇ ಟ್ಯಾಗ್​​ಲೈನ್​ ಹಾಕಿಕೊಂಡಿದ್ದ ಡಾ.ಸರ್ಜಿ ಇದೀಗ ಬಿಜೆಪಿ ಪರವಾಗಿದ್ದಾರೆ. ಉಳಿದ ಅಭ್ಯರ್ಥಿಗಳಿಗೆ ಕಾಂಪಿಟೇಶನ್​ ಕೊಡುತ್ತಾರೆ. ಹಾಗೊಂದು ವೇಳೆ ಅದೃಷ್ಟ ಕೈಗೂಡಿದರೇ, ನಗರಕ್ಕೊಂದು ಹೊಸ ಎಂಎಲ್​ಎ ಸಿಗಬಹುದು ಎಂದೇ ಜನರು ಮಾತನಾಡಿಕೊಳ್ತಿದ್ರು.

ಇದನ್ನು ಸಹ ಓದಿ : ಸರ್ಕಾರಿ ಅಧಿಕಾರಿಗಳೇ ಹುಷಾರ್ |  ರಹಸ್ಯ ಕ್ಯಾರ್ಯಾಚರಣೆ ​ ಹೆಸರಿನಲ್ಲಿ ಹೆದರಿಸುವವರಿದ್ದಾರೆ?  

ಆದರೆ ಈ ನಡುವಿನ ಸೈಲೆಂಟ್ ಆಫರೇಷನ್​ನಲ್ಲಿ ಸರ್ಜಿಯವರನ್ನ ಬಿಜೆಪಿ ಪರ ವಾಲಿಸಿಕೊಂಡಿದ್ದಾರೆ ಕೇಸರಿ ಪಕ್ಷದ ನಾಯಕರು. ಇದಕ್ಕೆ ಅವಧೂತ ಗೌರಿಗದ್ದೆಯ ವಿನಯ್​ ಗುರೂಜಿಯವರ (Sri Vinaya Guruji Ashrama - Gowrigadde) ಸಂಧಾನ ಕಾರಣವಾಯ್ತಾ ಎಂಬ ಪ್ರಶ್ನೆಗಳು ಸಹ ಇದೀಗ ಕೇಳಿಬಂದಿದೆ. 

ಇದಕ್ಕೆ ಉತ್ತರವಾಗಿ ಕೆಲವು ಮೂಲಗಳ ಪ್ರಕಾರ, ವಿನಯ್​ ಗುರೂಜಿಯವರ ಸಂಧಾನ ನಡೆದಿದ್ದು ನಿಜ ಎನ್ನಲಾಗ್ತಿದೆ.  ಕಳೆದ ವಾರವಷ್ಟೆ ಶಿವಮೊಗ್ಗಕ್ಕೆ ಬಂದಿದ್ದ ವಿನಯ್​ ಗುರೂಜಿಯವರು (vinay guruji predictions), ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪರವರನ್ನು ಸಹ ಭೇಟಿ ಮಾಡಿದ್ದರು, ಅಲ್ಲದೆ ಡಾ.ಧನಂಜಯ್ ಸರ್ಜಿಯವರ ಕುಟುಂಬವನ್ನು ಸಹ ಭೇಟಿ ಮಾಡಿದ್ದರು. 

ಇದನ್ನು ಸಹ ಓದಿ : ಶಿರಾಳಕೊಪ್ಪದಲ್ಲಿ ಗೋಡೆ ಬರಹ / ಎಸ್​ಪಿ ಹೇಳಿದ್ದೇನು? / ನಡೆದಿದ್ದೇನು?

ಈ ವೇಳೆ ಗೋಪಾಳದಲ್ಲಿರುವ ಉದ್ಯಮಿಯೊಬ್ಬರ ಮನೆಯಲ್ಲಿ ವಿನಯ್​ ಗರೂಜಿ ಸರ್ಜಿಯವರ ಜೊತೆ ಸಭೆ ನಡೆಸಿದ್ದಾರೆ. ಈ ವೇಳೆ ಅವರ ಮನವೊಲಿಸಿ, ಬಿಜೆಪಿ ಸೇರುವಂತೆ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.

ಇದನ್ನು ಸಹ ಓದಿ  : ಪಿಕಪ್​ಗೆ ಹೊರಟಿದ್ದ ಟೂರಿಸ್ಟ್ ಗಾಡಿ ಆಕ್ಸಿಡೆಂಟ್​, ಪಲ್ಟಿಯಾಗಿ ಮೋರಿಗೆ ಬಿದ್ದ ಬಸ್​

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link