ಅರಶಿನಗುಂಡಿ ಜಲಪಾತದಲ್ಲಿ ಬಿದ್ದಿದ್ದ ಭದ್ರಾವತಿ ಶರತ್ರ ಮೃತದೇಹ ಪತ್ತೆ!
Bhadravathi Sharath's body found lying in Arasinagundi fallsಅರಶಿನಗುಂಡಿ ಜಲಪಾತದಲ್ಲಿ ಬಿದ್ದಿದ್ದ ಭದ್ರಾವತಿ ಶರತ್ರ ಮೃತದೇಹ ಪತ್ತೆ!
KARNATAKA NEWS/ ONLINE / Malenadu today/ Jul 30, 2023 SHIVAMOGGA NEWS
ಕಳೆದ ಆರು ದಿನಗಳಿಂದ ಮಳೆಯ ನಡುವೆ ಕೊಲ್ಲೂರಿನ ಅರಶಿನ ಗುಂಡಿ ಫಾಲ್ಸ್ ನಲ್ಲಿ ಭದ್ರಾವತಿ ನಿವಾಸಿ ಶರತ್ ಗಾಗಿ ನಡೆಯುತ್ತಿದ್ದ ಹುಡುಕಾಟ ತಾರ್ಕಿಕ ಅಂತ್ಯ ಕಂಡಿದೆ. ಇವತ್ತು ಮಳೆ ಕಡಿಮೆಯಾಗಿದ್ದರ ಹಿನ್ನೆಲೆಯಲ್ಲಿ ಜಲಪಾತದಲ್ಲಿ ನೀರಿನ ಹರಿವು, ರಭಸ ಎರಡು ಸಹ ಕಡಿಮೆಯಾಗಿತ್ತು. ಈ ಮಧ್ಯೆ ಕಾರ್ಯಾಚರಣೆ ನಡೆಸಿದ ರಕ್ಷಣಾ ತಂಡಕ್ಕೆ ಇವತ್ತು ಫಾಲ್ಸ್ನಿಂದ 200 ಮೀಟರ್ ದೂರದಲ್ಲಿ ಶರತ್ ರವರ ಮೃತದೇಹ ಪತ್ತೆಯಾಗಿದೆ.
BIG EXCLUSIVE / ಶರತ್ಗಾಗಿ ಜ್ಯೋತಿರಾಜ್ ಹುಡುಕಾಟ! ಡ್ರೋಣ್ ಬಳಕೆ! ಹೇಗಿದೆ ನೋಡಿ ರೋಚಕ ಕಾರ್ಯಾಚರಣೆ!
ಕೊಲ್ಲೂರಿನ ಅರಿಶಿನ ಗುಂಡಿ ಜಲಪಾತ ವೀಕ್ಷಣೆಗೆ ಬಂದಾಗ ರೀಲ್ಸ್ ಮಾಡಲು ಹೋಗಿ ಜಲಪಾತಕ್ಕೆ ಬಿದ್ದು, ಕೊಚ್ಚಿ ಹೋಗಿದ್ದರು ಅವರಿಗಾಗಿ ನಿರಂತರ ಹುಡುಕಾಟ ನಡೆದಿತ್ತು. ಧಾರಾಕಾರ ಮಳೆ, ಧುಮ್ಮುಕ್ಕಿ ಹರಿಯುತ್ತಿದ್ದ ಜಲಪಾತದಿಂದಾಗಿ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು, ಈಶ್ವರ್ ಮಲ್ಪೆ ಹಾಗೂ ಜ್ಯೋತಿರಾಜ್ ತಂಡ ಸ್ಥಳದಲ್ಲಿ ಹುಡುಕಾಟ ನಡೆಸಿತ್ತು. ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಇಲಾಖೆ ರಕ್ಷಣಾ ಕಾರ್ಯಾಚರಣೆಯನ್ನ ಕೈಗೊಂಡಿತ್ತು. ಇವತ್ತು ಶರತ್ರವರ ಮೃತದೇಹ ಪತ್ತೆಯಾಗಿದ್ದು, ಬಂಡೆಯ ಕೊರಕಲಿನ ನಡುವೆ ಮೃತದೇಹ ಸಿಕ್ಕಿಹಾಕಿಕೊಂಡಿರುವುದು ಕಾಣಿಸಿದೆ.
ಅರಶಿನಗುಂಡಿ ಫಾಲ್ಸ್ನಲ್ಲಿ ಭದ್ರಾವತಿ ಶರತ್ರವರ ಮೃತದೇಹ ಪತ್ತೆ #arashinagundi pic.twitter.com/vT85lIZOTF
— malenadutoday.com (@CMalenadutoday) July 30, 2023
ಅರಶಿನ ಗುಂಡಿ ಫಾಲ್ಸ್ನಲ್ಲಿ ಜ್ಯೋತಿರಾಜ್ರಿಂದ ಶರತ್ ಗಾಗಿ ಹುಡುಕಾಟ #shivamogga #kolluru #arashinagundifalls #bhadravati pic.twitter.com/bPbuhahBpD — malenadutoday.com (@CMalenadutoday) July 28, 2023
ಕೊಲ್ಲೂರು ಸಮೀಪದಲ್ಲಿರುವ ಅರಶಿನ ಗುಂಡಿ ಜಲಪಾತದಲ್ಲಿ ಬಂಡೆ ಮೇಲೆ ನಿಂತಿದ್ದ ಯುವಕ ಕಾಲುಜಾರಿ ನೀರಿಗೆ ಬಿದ್ದಿದ್ದಾನೆ. ಆತನಿಗಾಗಿ ಹುಡುಕಾಟ ನಡೆದಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಯುವಕ ಎಂದು ತಿಳಿದುಬಂದಿದೆ. #shivamogga #bhadravati pic.twitter.com/clGUH7ubs3 — malenadutoday.com (@CMalenadutoday) July 24, 2023
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹಿಟ್ ಆ್ಯಂಡ್ ರನ್ ಯುವಕ ಬಲಿ! ಏನಿದು ಘಟನೆ?
ಫಾಲ್ಸ್ನಲ್ಲಿ ಜಾರಿ ಬಿದ್ದ ಯುವಕ ಇನ್ನೂ ನಾಪತ್ತೆ! ಬಂಡೆಗಳ ನಡುವೆ ಶರತ್ಗೆ ಹುಡುಕುತ್ತಿರುವಾಗ ನಡೆಯಿತು ಮತ್ತೊಂದು ಘಟನೆ! #shivamogga #kolluru #udupi #bhadavati pic.twitter.com/cqO9U3BNBk — malenadutoday.com (@CMalenadutoday) July 25, 2023
ಶಿವಮೊಗ್ಗ ಟಿವಿ ಟವರ್ ಗೆ ಎಫ್ಎಂ ಟ್ರಾನ್ಸ್ಮೀಟರ್ ಜೋಡಣೆ! ನಗರದಲ್ಲಿಯೇ ಕೇಳಲಿದೆ ಎಫ್ಎಂ!? ಏನಂದ್ರು ಸಂಸದರು?
ಆರು ಚಿನ್ನದ ಪದಕದ ಜೊತೆಗೆ ರಾಜ್ಯದಲ್ಲಿಯೇ ಫಸ್ಟ್ RANK ಪಡೆದ ಶಿವಮೊಗ್ಗ ಯುವತಿ!
SHIVAMOGGA AIRPORT / ಶಿವಮೊಗ್ಗ-ಬೆಂಗಳೂರು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್!
ರೈಲ್ವೆ ಪ್ರಯಾಣಿಕರಿಗೆ ಸೂಚನೆ! ಜನಶತಾಬ್ದಿ ಸೇರಿ ಹಲವು ಟ್ರೈನ್ಗಳ ಸಂಚಾರದಲ್ಲಿ ವ್ಯತ್ಯಯ! ವಿವರ ಇಲ್ಲಿದೆ