ಚನ್ನಗಿರಿ ನಲ್ಲೂರು ಕ್ಯಾಂಪ್‌ | ಇರಿತಕ್ಕೊಳಗಾದ ಸಂತ್ರಸ್ತರ ಭೇಟಿ ಬಳಿಕ ಕೆಎಸ್‌ ಈಶ್ವರಪ್ಪ ಹೇಳಿದ್ದೇನು?

Channagiri Nallur Camp | What did KS Eshwarappa say after meeting the stabbing victims?

ಚನ್ನಗಿರಿ ನಲ್ಲೂರು ಕ್ಯಾಂಪ್‌ | ಇರಿತಕ್ಕೊಳಗಾದ ಸಂತ್ರಸ್ತರ ಭೇಟಿ ಬಳಿಕ ಕೆಎಸ್‌ ಈಶ್ವರಪ್ಪ ಹೇಳಿದ್ದೇನು?
Channagiri Nallur Camp

SHIVAMOGGA | MALENADUTODAY NEWS |  Apr 20, 2024  

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ನಲ್ಲೂರು ನಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಗಾಯಗೊಂಡ ಯುವಕರನ್ನ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರನ್ನ ಮಾಜಿ ಡಿಸಿಎಂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆಎಸ್‌ ಈಶ್ವರಪ್ಪ ಭೇಟಿಯಾಗಿ ಸಾಂತ್ವನ ಹೇಳಿ ಆರೋಗ್ಯ ವಿಚಾರಿಸಿದ್ದಾರೆ. 

ನಲ್ಲೂರು ಕ್ಯಾಂಪ್​ನಲ್ಲಿ  (Channagiri Nallur Camp ) ರಾಮನವಮಿ ಆಚರಣೆ ವೇಳೆ ನಡೆದ ಗಲಾಟೆ ವೇಳೆ ಹನುಮಂತ ಹಾಗೂ ಗೋಪಿ ಎಂಬವರಿಗೆ ಚಾಕುವಿನಿಂದ ಇರಿಯಲಾಗಿದೆ. ಇಬ್ಬರು ಗಾಯಾಳುಗಳನ್ನ ಶಿವಮೊಗ್ಗದಲ್ಲಿರುವ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಭೇಟಿಕೊಟ್ಟ ಕೆಎಸ್‌ ಈಶ್ವರಪ್ಪ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಆಕ್ರೋಶ ಹೊರಹಾಕಿದ್ರು.