ಸಿಕ್ಕಿದವರನ್ನೆಲ್ಲಾ ಕಚ್ಚಿದ ಸಾಕಿದ ನಾಯಿ! 6 ವರ್ಷದ ಬಾಲಕಿಗೆ ಗಂಭೀರ ಗಾಯ! ಭದ್ರಾವತಿಯಲ್ಲಿ ಹಂದಿ ಶಿಕಾರಿ ಮತ್ತು ಸುಮುಟೋ ಕೇಸ್!

The police arrested two persons who were on their way to Bhadravathi in Shivamogga for a shikari. A girl was attacked by a dog in B. Beeranahalli ಶಿವಮೊಗ್ಗದ ಭದ್ರಾವತಿಯಲ್ಲಿ ಶಿಕಾರಿಗೆ ಹೊರಟಿದ್ದವರನ್ನ ಪೊಲೀಸರು ಬಂಧಿಸಿದ್ದಾರೆ. ಬಿ.ಬೀರನಹಳ್ಳಿಯಲ್ಲಿ ನಾಯಿಯೊಂದು ಬಾಲಕಿ ಮೇಲೆ ದಾಳಿ ಮಾಡಿದೆ

ಸಿಕ್ಕಿದವರನ್ನೆಲ್ಲಾ ಕಚ್ಚಿದ ಸಾಕಿದ ನಾಯಿ! 6 ವರ್ಷದ ಬಾಲಕಿಗೆ ಗಂಭೀರ ಗಾಯ! ಭದ್ರಾವತಿಯಲ್ಲಿ ಹಂದಿ ಶಿಕಾರಿ ಮತ್ತು ಸುಮುಟೋ ಕೇಸ್!

KARNATAKA NEWS/ ONLINE / Malenadu today/ Sep 3, 2023 SHIVAMOGGA NEWS 

ಶಿಕಾರಿಗೆ ತಂದಿದ್ದ ಸ್ಪೋಟಕ ವಶ

ಶಿವಮೊಗ್ಗ ಜಿಲ್ಲೆ   ಭದ್ರಾವತಿ ತಾಲ್ಲೂಕಿನ  ಹೆಚ್ ಕೆ ಜಂಕ್ಷನ್ ಬಳಿ  ಸ್ಫೋಟಕ ಸಿದ್ದಪಡಿಸಿ ಶಿಕಾರಿಗೆ ಸಿದ್ದತೆ ನಡೆಸಿದ್ದರ ಸಂಬಂಧ  ಸುಮೋಟೋ ಕೇಸ್​ವೊಂದು ದಾಖಲಾಗಿದೆ. ಆ. 30 ರಂದು  ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕೇಸ್​ ದಾಖಲಾಗಿದ್ದು, ಗಸ್ತು ತಿರುಗುತ್ತಿದ್ದ ವೇಳೆ ಪ್ರಕರಣ ಬಯಲಾಗಿದೆ. ಹೆಚ್​ಕೆ ಜಂಕ್ಷನ್ ಬಳಿಯಲ್ಲಿ ಪೊಲೀಸರ ವೆಹಿಕಲ್ ನೋಡುತ್ತಿದ್ದ ಇಬ್ಬರು ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಅನುಮಾನಗೊಂಡು ಅವರನ್ನ ಬೆನ್ನಟ್ಟಿ ಒರ್ವರನ್ನ ಹಿಡಿದ ಪೊಲೀಸರಿಗೆ ಅವರು ಶಿಕಾರಿಗೆ ಹೊರಟ್ಟಿದ್ದು ತಿಳಿದುಬಂದಿದೆ. ಆತನನ್ನು ಬಂಧಿಸಿದ ಆತನ ಬಳಿಯಲ್ಲಿದ್ದ ಸ್ಫೋಟಕವನ್ನು ವಶಕ್ಕೆ ಪಡೆದಿದ್ದಾರೆ. 

6 ವರ್ಷದ ಬಾಲಕಿ ಮೇಲೆ ನಾಯಿ ದಾಳಿ

 

ಶಿವಮೊಗ್ಗ ಜಿಲ್ಲೆ ಬಿ. ಬೀರನಹಳ್ಳಿ ಪಂಚಾಯ್ತಿಯ ಹೊಳೆಬೆಳಗಲು ಗ್ರಾಮದಲ್ಲಿ ಆರುವರ್ಷದ ಪುಟ್ಟ ಮಗುವಿನ ಮೇಲೆ ಹುಚ್ಚು ನಾಯಿ ದಾಳಿ ನಡೆಸಿ ಗಾಯಗೊಳಿಸಿದೆ. ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಸ್ಥಳಿಯ ನಿವಾಸಿ ಸಾಕಿದ್ದ ನಾಯಿಯೊಂದು ಸಿಕ್ಕಸಿಕ್ಕವರ ಮೇಲೆ ದಾಳಿ ನಡೆಸಲು ಆರಂಭಿಸಿದೆ. ಒಟ್ಟು ಐವರ ಮೇಲೆ ದಾಳಿ ನಡೆಸಿದೆ. ಇನ್ನೂ ಸ್ಕೂಲ್​ವ್ಯಾನ್​ನಿಂದ ಇಳಿದು ಮನೆಗೆ ಹೋಗುತ್ತಿದ್ದಾಗ, ಬಾಲಕಿ ನಾಯಿಯ ದಾಳಿಗೆ ತುತ್ತಾಗಿದ್ದಾಳೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮಗುವನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.  


ಇನ್ನಷ್ಟು ಸುದ್ದಿಗಳು