ಈಶ್ವರಪ್ಪನವರಿಗೆ ದೇವರು ಒಳ್ಳೆಯದು ಮಾಡಲಿ | ಥ್ಯಾಂಕ್ಸ್‌ ಹೇಳಿದ ಮಾಜಿ ಡಿಸಿಎಂಗೆ ವಿಜಯೇಂದ್ರರವರ ಉತ್ತರ!?

May God bless Eshwarappa Vijayendra's reply to former DCM who said thank you!? KS Eshwarappa expelled from BJP

ಈಶ್ವರಪ್ಪನವರಿಗೆ ದೇವರು ಒಳ್ಳೆಯದು ಮಾಡಲಿ | ಥ್ಯಾಂಕ್ಸ್‌ ಹೇಳಿದ ಮಾಜಿ ಡಿಸಿಎಂಗೆ ವಿಜಯೇಂದ್ರರವರ ಉತ್ತರ!?
KS Eshwarappa expelled from BJP

SHIVAMOGGA | MALENADUTODAY NEWS | Apr 23, 2024   

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ  ಕೆಎಸ್‌ ಈಶ್ವರಪ್ಪ ನವರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಶಿಕಾರಿಪುರದದಲ್ಲಿ ಹುಚ್ಚರಾಯಸ್ವಾಮಿ ದೇವಸ್ಥಾನದ ಜಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈಶ್ವರಪ್ಪನವರು ಉಚ್ಚಾಟನೆಯನ್ನ ಬಯಸಿದ್ದರು ಎಂತಾದರೆ ರೋಗಿ ಬಯಸಿದ್ದು ಹಾಲ ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ  ಎಂಬಂತಾಗಿದೆ, ತುಂಬಾ ಸಂತೋಷ ಅವರಿಗೆ ದೇವರು ಒಳ್ಳೆಯದು ಮಾಡಲಿ. ಕೆಎಸ್‌ ಈಶ್ವರಪ್ಪನವರು ಹಿರಿಯರು, ಪಕ್ಷ ಸಂಘಟನೆ ಮಾಡಿದ್ದವರು. ಯಾಕೋ ಅವರು ಅಡ್ಡದಾರಿ ಹಿಡಿದಿದ್ದಾರೆ. ಅವರಿಗೆ ಪಕ್ಷದ ಕಾರ್ಯಕರ್ತರು ಅವರಿಗೆ ಕೈ ಜೋಡಿಸಿಲ್ಲ ಎಂದರು. 

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಜನರಲ್ಲಿ ಸ್ಪಷ್ಟತೆಯಿದ್ದು ಬಿ.ವೈ ರಾಘವೇಂದ್ರರವರಿಗೆ ಆಶೀರ್ವಾದ ಮಾಡುತ್ತಾರೆ. ಅತಿಹೆಚ್ಚು ಮತಗಳಿಂದ ಅವರು ಆಯ್ಕೆಯಾಗಲಿದ್ದಾರೆ ಎಂದಿದ್ದಾರೆ. ರಾಜ್ಯದ ರಾಜಕೀಯ ಚಿತ್ರಣ ಸಂಪೂರ್ಣ ಬದಲಾಗಿದೆ. ಚುನಾವಣೆಯಲ್ಲಿ ಜನರ ಕಣ್ಣಿಗೆ ಮಣ್ಣೆರಚಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನ ಆಡಳಿತವನ್ನು ನೋಡಿ ಜನ ಬೇಸತ್ತಿದ್ದಾರೆ ಎಂದು ಹೇಳಿದರು.ದೇಶದಲ್ಲಿ ಮಹಾ ಚುನಾವಣೆ ನಡೆಯುತ್ತಿದ್ದು ನರೇಂದ್ರ ಮೋದಿ ಮೂರನೇ ಬಾರಿಗೆ ದೇಶದ ಪ್ರಧಾನಿ ಆಗಬೇಕು ಎಂಬ ಉತ್ಸುಕತೆ ಜನರಲ್ಲಿದೆ. ಜೆಡಿಎಸ್ ಮತ್ತು ಬಿಜೆಪಿಯನ್ನು ಬೆಂಬಲಿಸಲು ಜನ ನಿರ್ಧರಿಸಿದ್ದಾರೆ. 

ಕಾಂಗ್ರೆಸ್ ನಿಂದ ಜನತೆಗೆ ಚಿಪ್ಪು ಸಿಕ್ಕಿರುವ ಬಗ್ಗೆ ನಾವು ಬಿಜೆಪಿಗರು ಜನರಿಗೆ ತಿಳಿಸುವುದು ಬೇರೆ. ಅದರೆ ರಾಜ್ಯದ ಜನತೆಗೆ ಈಗಾಗಲೇ ಮನವರಿಕೆ ಆಗಿದೆ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಬೆಲೆ ಏರಿಕೆಯ ಕೊಡುಗೆ ಸಿಕ್ಕಿದೆಯೇ ಹೊರತು ಮತ್ತೇನು ಜನರಿಗೆ ಸಿಕ್ಕಿಲ್ಲ. ವಿದ್ಯುತ್, ಬಸ್ ರೈತರ ಜಮೀನಿಗೆ ಹಾಕುವ ಟಿಸಿ, ಸ್ಟ್ಯಾಂಪ್ ಡ್ಯೂಟಿ ಹೀಗೆ ಪ್ರತಿಯೊಂದು ಈಗ ದುಬಾರಿಯಾಗಿದೆ. ಯಾವ ವಿಶ್ವಾಸವಿಟ್ಟು ಜನರು ಕಾಂಗ್ರೆಸ್ಸಿಗೆ ಮತ ಹಾಕಿದ್ದರು ಅದೇ ಜನ ಇವತ್ತು ರಾಜ್ಯ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು