ಕೆಎಸ್‌ ಈಶ್ವರಪ್ಪರ ಉಚ್ಚಾಟನೆ | ಬಿಎಸ್‌ವೈ ಹೇಳಿದ್ದೇನು| ಆಶೀರ್ವಾದ ಸಿಗದಿರುವುದೇ ನೋವಿನ ಸಂಗತಿ : ರಾಘವೇಂದ್ರ

Expulsion of KS Eshwarappa What BSY said Not being blessed is painful: Raghavendra KS Eshwarappa expelled from BJP

ಕೆಎಸ್‌ ಈಶ್ವರಪ್ಪರ ಉಚ್ಚಾಟನೆ | ಬಿಎಸ್‌ವೈ ಹೇಳಿದ್ದೇನು|  ಆಶೀರ್ವಾದ ಸಿಗದಿರುವುದೇ ನೋವಿನ ಸಂಗತಿ : ರಾಘವೇಂದ್ರ
KS Eshwarappa expelled from BJP

SHIVAMOGGA | MALENADUTODAY NEWS | Apr 23, 2024    

ಶಿಕಾರಿಪುರದಲ್ಲಿ ಕೆಎಸ್‌ ಈಶ್ವರಪ್ಪರವರ ಉಚ್ಚಾಟನೆ ಸಂಬಂಧ ಬಿಎಸ್‌ ಯಡಿಯೂರಪ್ಪ ಹಾಗೂ ಸಂಸದ ಬಿವೈ ರಾಘವೇಂದ್ರರವರು ಮಾತನಾಡಿದ್ದಾರೆ. 

ಹುಚ್ಚರಾಯಸ್ವಾಮಿ ದೇವರ ಜಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿವೈ ರಾಘವೇಂದ್ರ ರವರು ನೂರಕ್ಕೆ ನೂರು ಈ ಸಲ ಜನರು ಬಿಜೆಪಿಗೆ ಆಶೀರ್ವಾದ ಮಾಡುತ್ತಾರೆ. ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣದಲ್ಲಿ  ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ತುಷ್ಟೀಕರಣ ರಾಜಕಾರಣಕ್ಕಾಗಿ ಜನರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದೆ. ಇದಕ್ಕೆ ಜನರೇ ಉತ್ತರ ಕೊಡುತ್ತಾರೆ. 

ಭವಿಷ್ಯದ ತಮಿಳುನಾಡು ಮುಖ್ಯಮಂತ್ರಿ ಕೆ. ಅಣ್ಣಾಮಲೈ ನಾಳೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿಗೆ ಬರುತ್ತಿದ್ದಾರೆ. 10 ಸಾವಿರಕ್ಕೂ ಹೆಚ್ಚು ಜನಸ್ತೋಮ ಸೇರುವಂತಹ ಸಭೆ ಅಲ್ಲಿ ನಡೆಯಲಿದೆ. ಅಲ್ಲಿಂದ ಶಿವಮೊಗ್ಗದ ಮಿಳಘಟ್ಟದಲ್ಲಿ ಸಮಾವೇಶ ನಡೆಯಲಿದೆ. 

ಕೆಎಸ್‌ ಈಶ್ವರಪ್ಪನವರ ಆಶೀರ್ವಾದವನ್ನು ಇದುವರೆಗಿನ ಎಲ್ಲಾ ಚುನಾವಣೆಯಲ್ಲಿ ಪಡೆದಿದ್ದೇನೆ. ಆದರೆ ಈ ಭಾರಿ ಅವರ ಆಶೀರ್ವಾದವನ್ನು ಪಡೆಯಲಾಗುತ್ತಿಲ್ಲ ಎಂಬ ನೋವು ನನಗಿದೆ ಎಂದರು. 

ಇನ್ನೂ ಇದೇ ವೇಳೆ ಮಾತನಾಡಿದ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪನವರು, ಸಂಸದ ರಾಘವೇಂದ್ರ ಈ ಭಾರೀ ಹೆಚ್ಚಿನ ಮತಗಳಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಆದರೆ ಕೆಎಸ್‌ ಈಶ್ವರಪ್ಪನವರ ವಿಚಾರದಲ್ಲಿ ನಾನೇನು ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.