ಉಚ್ಚಾಟನೆ ಬೆನ್ನಲ್ಲೆ ಸಮರ | ಬಿಎಸ್‌ವೈ ಬೆಂಬಲಕ್ಕೆ ಶಾಸಕ ಚನ್ನಬಸಪ್ಪ | ಬೆನ್ನಿಗೆ ಚೂರಿ , ಮೈ ಉರಿಯುತ್ತೆ ಎಂದರಾ?

MLA Channabasappa & Jyoti Prakash in support of BSY

ಉಚ್ಚಾಟನೆ ಬೆನ್ನಲ್ಲೆ ಸಮರ | ಬಿಎಸ್‌ವೈ ಬೆಂಬಲಕ್ಕೆ ಶಾಸಕ ಚನ್ನಬಸಪ್ಪ | ಬೆನ್ನಿಗೆ ಚೂರಿ , ಮೈ ಉರಿಯುತ್ತೆ ಎಂದರಾ?
MLA Channabasappa, Jyoti Prakash

SHIVAMOGGA | MALENADUTODAY NEWS | Apr 23, 2024  

ಕೆಎಸ್‌ ಈಶ್ವರಪ್ಪರವರ ಬಂಡಾಯದ ಬಗ್ಗೆ ಬಿಜೆಪಿ ಅಧಿಕೃತವಾಗಿಯೇ ಅಸಮಾಧಾನ ಹೊರಹಾಕಲು ಆರಂಭಿಸಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ನಿನ್ನೆ ತಮ್ಮ ನಿವಾಸದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಮುಖಂಡರ ಸಭೆ ನಡೆಸಿದ್ದಾರೆ. ತಮ್ಮ ಸಮುದಾಯದ ಮತ ಹಾಕಿಸುವುದರ ಜೊತೆಗೆ ಬೇರೆ ಸಮುದಾಯದವರ ಮನವೊಲಿಸಿ ಮತಚಲಾವಣೆ ಮಾಡಿಸುವಂತೆ ಬಿಎಸ್‌ವೈ ಕರೆ ನೀಡಿದರು. ಜೊತೆಯಲ್ಲಿ ವಿವಿಧ ಸಮುದಾಯದಗಳ ಮುಖಂಡರನ್ನ ಮಾತನಾಡಿಸಿದ ಬಿಎಸ್‌ವೈ ಮತಯಾಚನೆ ಮಾಡಿದರು. 

ಈ ವೇಳೆ ಯಾರ್ಯಾರು ಏನೇನು ಮಾತನಾಡಿದರು ಎಂಬುದನ್ನ ನೋಡುವುದಾದರೆ, ಸಮುದಾಯದವರು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಬೇರೆ ಪಕ್ಷದ ಅಭ್ಯರ್ಥಿಯ ಹೆಸರು ನಾನು ಹೇಳಲ್ಲ. ಅವರು ಏನು ಬೇಕಾದರೂ ಮಾತನಾಡಲಿ. ನಾವು ಮತ ಹಾಕಿಸುವ ಕಡೆಗೆ ಗಮನ ಕೊಡಬೇಕು ಎಂದು ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಕರೆಕೊಟ್ಟಿದ್ದಾರೆ. 

ಇನ್ನೂ ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಸ್‌. ಜ್ಯೋತಿಪ್ರಕಾಶ್ ಯಡಿಯೂರಪ್ಪ ಅವರಿಗೆ ಹಲವರು ಬೆನ್ನಿಗೆ ಚೂರಿ ಹಾಕಿದ್ದಾರೆ. ಆದರೂ ಎದೆಗುಂದದೇ ಪಕ್ಷ ಕಟ್ಟಿದ್ದಾರೆ. ಇಡೀ ಸಮಾಜ ಅವರ ಬೆಂಬಲಕ್ಕೆ ನಿಲ್ಲಬೇಕು ಎಂದರು. 

ಇನ್ನೂ ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಎಸ್‌ ಎನ್‌ ಚನ್ನಬಸಪ್ಪ ರವರು ಯಡಿಯೂರಪ್ಪ ಅವರ ಜೊತೆಯಲ್ಲಿ ಬೆಳೆದ ವ್ಯಕ್ತಿ ಇವತ್ತು ಅವರ ಬಗ್ಗೆ ಬಹಳ ಹಗುರವಾಗಿ ಮಾತಾಡುತ್ತಾನೆ. ಅವರ ಮಾತು ಕೇಳಿದರೇ ಮೈ ಉರಿಯುತ್ತದೆ. ಚುನಾವಣೆ ಕಾರಣ ಯಡಿಯೂರಪ್ಪ ಸಹಿಸಿಕೊಂಡಿದ್ದಾರೆ. ಇದನ್ನು ಅವರೇ ಮುಕ್ತಾಯ ಮಾಡಬೇಕು. ಇಲ್ಲವೇ ನಾವೇ ಅಂತ್ಯ ಹಾಡಬೇಕು‌. ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ ಎಂದು ರಾಜ್ಯಮಟ್ಟದ ಪತ್ರಿಕೆಯೊಂದು ವರದಿ ಮಾಡಿದೆ.