K.S.Eshwarappa / ಹೈಕಮಾಂಡ್ ಟಿಕೆಟ್ ಸೀಕ್ರೆಟ್! ಕೆ.ಎಸ್​.ಈಶ್ವರಪ್ಪ ಮತ್ತು ಕುಟುಂಬ ಕುರಿತು ಹೊರಬಿತ್ತು ಮತ್ತೆರಡು ಇಂಟ್ರಸ್ಟಿಂಗ್ ಸುದ್ದಿ!

K.S.Eshwarappa / High Command Ticket Secret! Two more interesting news about KS Eshwarappa and his family

K.S.Eshwarappa /  ಹೈಕಮಾಂಡ್ ಟಿಕೆಟ್ ಸೀಕ್ರೆಟ್! ಕೆ.ಎಸ್​.ಈಶ್ವರಪ್ಪ ಮತ್ತು ಕುಟುಂಬ ಕುರಿತು  ಹೊರಬಿತ್ತು ಮತ್ತೆರಡು ಇಂಟ್ರಸ್ಟಿಂಗ್ ಸುದ್ದಿ!
K.S.Eshwarappa / ಹೈಕಮಾಂಡ್ ಟಿಕೆಟ್ ಸೀಕ್ರೆಟ್! ಕೆ.ಎಸ್​.ಈಶ್ವರಪ್ಪ ಮತ್ತು ಕುಟುಂಬ ಕುರಿತು ಹೊರಬಿತ್ತು ಮತ್ತೆರಡು ಇಂಟ್ರಸ್ಟಿಂಗ್ ಸುದ್ದಿ!

MALENADUTODAY.COM/ SHIVAMOGGA / KARNATAKA WEB NEWS  

ಕರ್ನಾಟಕ ಚುನಾವಣೆ-2023 

ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಯಾರಿಗೆ ಅನ್ನೋದು ಇನ್ನು ಸಹ ನಿಕ್ಕಿಯಾಗಿಲ್ಲ. ಈ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್, ಕೊನೆಕ್ಷಣದವರೆಗೂ ಸಸ್ಪೆನ್ಸ್ ಕಾಯ್ದುಕೊಳ್ತಿದೆ. ಬಂಡಾಯ ಶಮನ ಮಾಡೋದಕ್ಕೋ ಅಥವಾ ಎದುರಾಳಿಗೆ ತಂತ್ರಗಾರಿಕೆ ಮಾಡಲು ಅವಕಾಶ ನೀಡಬಾರದು ಎಂಬ ಕಾರಣಕ್ಕೋ ಏನೋ ಗೊತ್ತಿಲ್ಲ.

ಟಿಕೆಟ್​ ವಿಚಾರದಲ್ಲಿ ತುಟಿಕ್​ಪಿಟಿಕ್ ಎನ್ನುತ್ತಿಲ್ಲ ಬಿಜೆಪಿ ಪಕ್ಷ. ಸ್ಥಳೀಯ ನಾಯಕರಿಗೂ ಬಿಜೆಪಿ ಅಭ್ಯರ್ಥಿ ಯಾರು ಎನ್ನುವುದು ಗೊತ್ತಾಗದೇ! ಈ ಕಡೆ ಕೇಳಿದವರಿಗೆ ಉತ್ತರ ಕೊಡಲು ಆಗದೇ ತಮ್ಮ ಪಕ್ಷವೇ ಹಾಗೆ ! ಪಕ್ಷದ ಸಿಕ್ರೆಟು, ಶಿಸ್ತು ಇತ್ಯಾದಿ ಅಂತಾ ಮಾತು ಬದಲಾಯಿಸ್ತಿದ್ದಾರೆ.

ಅಷ್ಟರಮಟ್ಟಿಗೆ ಹೈಕಮಾಂಡ್ ಸ್ಥಳೀಯ ಬಿಜೆಪಿಯನ್ನೆ ಗೊಂದಲದಲ್ಲಿ ಇರಿಸಿದೆ. Read / Shivamogga police /  ಆನ್​ಲೈನ್​ ಕ್ರಿಕೆಟ್​ ಬೆಟ್ಟಿಂಗ್​ ಅಡ್ಡೆ ಮೇಲೆ ಶಿವಮೊಗ್ಗ ಪೊಲೀಸರ ರೇಡ್ ! ಹೊಸಮನೆ ಸತೀಶ್​ ಸೇರಿ ಮೂವರ ಅರೆಸ್ಟ್​! 25 ಲಕ್ಷ ರೂಪಾಯಿ ಸೀಜ್​ 

ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ

ಈ ಮಧ್ಯೆ ಕೆ.ಎಸ್​.ಈಶ್ವರಪ್ಪನವರ ಪರವಾಗಿ ಕೂಗೊಂದು ಕೇಳಿಬರುತ್ತಿದೆ. ಕುಟುಂಬ ರಾಜಕಾರಣಕ್ಕೆ ಅವಕಾಶ ಇಲ್ಲ ಎನ್ನುತ್ತಿದ್ದ ಬಿಜೆಪಿ ಹಲವು ಕ್ಷೇತ್ರಗಳಲ್ಲಿ ಹಾಲಿ ಸದಸ್ಯರ ಕುಟುಂಬಸ್ಥರಿಗೆ ಟಿಕೆಟ್ ನೀಡಿದೆ

 ಬಿ.ಎಸ್. ಯಡಿಯೂರಪ್ಪ ‌ಅವರ ಪುತ್ರ ಬಿ.ವೈ. ವಿಜಯೇಂದ್ರ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮಗ ಕಟ್ಟಾ ಜಗದೀಶ್‌, ಆನಂದಸಿಂಗ್ ಬದಲಿಗೆ ಅವರ ಪುತ್ರ ಸಿದ್ಧಾರ್ಥ್‌ ಸಿಂಗ್‌ ಹೀಗೆ ರಾಜಕಾರಣಿಗಳ ಪುತ್ರರಿಗೆ ಟಿಕೆಟ್ ಕೊಟ್ಟಿರುವ ಹೈಕಮಾಂಡ್ ಕೆ.ಎಸ್​.ಈಶ್ವರಪ್ಪನವರ ವಿಚಾರದಲ್ಲಿ ಮಾತ್ರ ಅವರ ಪುತ್ರನಿಗೆ ಏಕೆ ಟಿಕೆಟ್ ಕೊಡುತ್ತಿಲ್ಲ.

ಸದ್ಯ ಇದು ಈಶ್ವರಪ್ಪನವರ ಅಭಿಮಾನಿಗಳ ಪ್ರಶ್ನೆ. ಇದಕ್ಕಾಗಿ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂದು ಪೋಸ್ಟರ್​ ಹಂಚುತ್ತಿದ್ದಾರೆ.

ಸದ್ಯ ವಾಟ್ಸ್ಯಾಪ್ ಹಾಗೂ ಇತರೇ ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟರ್ ಹರಿದಾಡ್ತಿದೆ. Read / Karnataka election/  ಸೊರಬದಲ್ಲಿ  ಅಣ್ತಮ್ಮರ ಆಸ್ತಿ ಏಷ್ಟು!? ಬೇಳೂರು ಗೋಪಾಲಕೃಷ್ಣರಿಗೆ ಸ್ವಂತ ಭೂಮಿಯಿಲ್ವಾ!? ಆಮ್​ ಆದ್ಮಿಯವರ ಆಸ್ತಿಯೆಷ್ಟು!

ಏನಿದೆ ಅದರಲ್ಲಿ!

ಭ್ರಷ್ಟಚಾರ ಹಗರಣದಲ್ಲಿ ಜೈಲು ಸೇರಿದ್ದ ಯಡಿಯೂರಪ್ಪ, ಕಟ್ಟಾ ಸುಬ್ರಮಣ್ಯ ನಾಯ್ಡು ಹಾಗೂ ಆನಂದ್‌ ಸಿಂಗ್‌ ಮಕ್ಕಳಿಗೆ ಈ ಬಾರಿಯ ಚುನಾವಣೆಯಲ್ಲಿ ಟಿಕೇಟ್ ಕೊಡಬಹುದು.

ಆದರೆ, ಯಾವುದೇ ಜೈಲು ಶಿಕ್ಷೆ ಅನುಭವಿಸದ, ಸದಾ ಪಕ್ಷದ ಸಂಘಟನೆಯಲ್ಲಿ ನಿರತರಾಗಿರುವ ಬಿಜೆಪಿ ಪಕ್ಷದ ಹಿರಿಯ ನಾಯಕ, ಹಿಂದುಳಿದ ವರ್ಗದ ನೇತಾರ, ಹಿಂದೂ ಹುಲಿ ಕೆ.ಎಸ್‌. ಈಶ್ವರಪ್ಪನವರ ಮಗನಿಗೆ ಮಾತ್ರ ಯಾವುದೇ ಕಾರಣ ನೀಡದೆ ಶಿವಮೊಗ್ಗ ನಗರದ ಟಿಕೇಟ್ ನೀಡುತ್ತಿಲ್ಲ.!

ಹೇಗಿದೆ ಬಿಜೆಪಿ ವರಿಷ್ಠರ ಈ ತಾರತಮ್ಯ ನೀತಿ..?! #ಒಂದು ಕಣ್ಣಿಗೆ ಬೆಣ್ಣೆ., ಒಂದು ಕಣ್ಣಿಗೆ ಸುಣ್ಣ… ಎಂದು ಪೋಸ್ಟರ್ ನಲ್ಲಿ ಬರೆಯಲಾಗಿದೆ. 

 ಕೊನೆದಾಗಿ ಸೊಸೆ ಹೆಸರು ಟಿಕೆಟ್ ಲಿಸ್ಟ್ ನಲ್ಲಿ

ಇನ್ನೊಂದೆಡೆ ಶಿವಮೊಗ್ಗ ಬಿಜೆಪಿ ಟಿಕೆಟ್ ಅವರಿಗೆ ಇವರಿಗೆ ಅಂತಾ ಸಾಲು ಸಾಲು ಹೆಸರುಗಳು ಕಳೆದೊಂದು ವಾರದಿಂದಲೂ ಟ್ರೋಲ್​ ಟ್ರೆಂಡ್​ ವೈರಲ್​ ಆಗುತ್ತಲೇ ಇವೆ. ಇನ್ನೇನು ನನಗೆ ಟಿಕೆಟ್ ಅಂತಿದ್ದವರಿಗೂ ಹೈಕಮಾಂಡ್​ನ ಮೌನ ಏದುಸಿರು ಬರುವಂತೆ ಮಾಡುತ್ತಿದೆ.

ಇದರ ನಡುವೆ ಬೆಂಗಳೂರಿನ ಮಾಧ್ಯಮವೊಂದು ಈಶ್ವರಪ್ಪನವರ ಸೊಸೆಗೂ ಟಿಕೆಟ್ ಎಂದು ಸುದ್ದಿಯೊಂದನ್ನ ಹರಿಬಿಟ್ಟಿದೆ. ಕೆ.ಇ.ಕಾಂತೇಶ್​ರ ಪತ್ನಿ ಶಾಲಿನಿಯವರಿಗೆ ಹೈಕಮಾಂಡ್ ಟಿಕೆಟ್ ಕೊಡುತ್ತೆ ಎಂಬ ಸುದ್ದಿ ಮಾಧ್ಯಮವೊಂದರಲ್ಲಿ ಬಂದಿದ್ದು, ಅದರ ಖಚಿತತೆ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ  

 

Read / #siddaramaiah #rcbfan ಸಿದ್ದರಾಮಯ್ಯ/ ಮ್ಯಾಚ್​ ನೋಡಿ ಬಂದ ವಿಪಕ್ಷ ನಾಯಕ ಈ ಸಲ ಕಪ್​ ಯಾರದ್ದು ಅಂದ್ರು ನೋಡಿ!

ಇದನ್ನು ಸಹ ಓದಿ

Read /BREAKING /  ಅಭ್ಯರ್ಥಿ ಕುತೂಹಲದ ನಡುವೆ ಶಿವಮೊಗ್ಗ ಕ್ಕೆ ಬಂದ ಬಿಎಸ್​ವೈ !   ಘೋಷಣೆಯಾಗುತ್ತಾ ಹೆಸರು!  ಹೆಲಿಪ್ಯಾಡ್​ಗೆ  ನೀತಿ ಸಂಹಿತೆಯ ಅಧಿಕಾರಿಗಳ  ಎಂಟ್ರಿ! ಕಾರಣ? 

Read /election interesting news/ ಜೋಡೆತ್ತಿನ ಗಾಡಿಯಲ್ಲಿ ಬಂದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿ

Read / Shivamogga police /  ಆನ್​ಲೈನ್​ ಕ್ರಿಕೆಟ್​ ಬೆಟ್ಟಿಂಗ್​ ಅಡ್ಡೆ ಮೇಲೆ ಶಿವಮೊಗ್ಗ ಪೊಲೀಸರ ರೇಡ್ ! ಹೊಸಮನೆ ಸತೀಶ್​ ಸೇರಿ ಮೂವರ ಅರೆಸ್ಟ್​! 25 ಲಕ್ಷ ರೂಪಾಯಿ ಸೀಜ್​ 

Read / Karnataka election/  ಸೊರಬದಲ್ಲಿ  ಅಣ್ತಮ್ಮರ ಆಸ್ತಿ ಏಷ್ಟು!? ಬೇಳೂರು ಗೋಪಾಲಕೃಷ್ಣರಿಗೆ ಸ್ವಂತ ಭೂಮಿಯಿಲ್ವಾ!? ಆಮ್​ ಆದ್ಮಿಯವರ ಆಸ್ತಿಯೆಷ್ಟು!



Read / ಶಿವಮೊಗ್ಗ ಬಿಜೆಪಿ ಟಿಕೆಟ್​! ಬರ್ತಿದೆ...ಬರ್ತಿದೆ..ಬರ್ತಿದೆ! ರೋಚಕ ಟ್ವಿಸ್ಟ್​ ಗೆ ಸಾಕ್ಷಿಯಾಗುತ್ತಾ ಕ್ಷೇತ್ರ! ಜೆಡಿಎಸ್​ ಟಿಕೆಟ್​ಗೆ​ ಇಬ್ಬಿಬ್ಬರ ಟವಲ್​! ಬರ್ತಾರಾ ಜೆಪಿ ನಡ್ಡಾ? 

Read / ಪತ್ನಿಗೆ ಸಾಲ, ಅಣ್ಣನಿಂದ ಲೋನ್/ ಸ್ವಂತ ಕಾರು ಹೊಂದಿಲ್ಲದ ಬಿ.ವೈ.ವಿಜಯೇಂದ್ರರ ಆಸ್ತಿ ಎಷ್ಟು ಗೊತ್ತಾ? 

Read / #siddaramaiah #rcbfan ಸಿದ್ದರಾಮಯ್ಯ/ ಮ್ಯಾಚ್​ ನೋಡಿ ಬಂದ ವಿಪಕ್ಷ ನಾಯಕ ಈ ಸಲ ಕಪ್​ ಯಾರದ್ದು ಅಂದ್ರು ನೋಡಿ!

Read/ Shivamogga bjp ticket/ಶಿವಮೊಗ್ಗ ಬಿಜೆಪಿ ಟಿಕೆಟ್​  ಅವರ್​ ಬಿಟ್ಟು ಇವರ್​ ಬಿಟ್ಟು ಇವರಿಗಾ? ಕತೂಹಲ ಮೂಡಿಸುತ್ತಿದೆ  ಕೆ.ಎಸ್​.ಈಶ್ವರಪ್ಪರವರ ನಡೆ!



ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS/ 

kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt,  firstnews kannada,  Shivamogga today,  shivamogga news, shivamogga live,  shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News  #karnatakaassemblyelection2023  #KarnatakaPolitics #KarnatakaLatestnews #Karanataka #election2023 #karnatakaelections2023 #BJPGovernment #bjpkarnatakanews #bjpvscongress #BYVijayendra #BasavarajBommai #Lakshmansavadi #JagadishShettar #Modi #AmitShah #JPNadda