BREAKING NEWS : ಶಿವಮೊಗ್ಗ ಪೊಲೀಸ್ಗೆ ರಾಷ್ಟ್ರಮಟ್ಟದ ಗರಿ/ ಇನ್ಸ್ಪೆಕ್ಟರ್ ಗುರುರಾಜ್ಗೆ ಸಿಕ್ಕಿತು India Cyber Cop Award
ಕಾನೂನು ಸುವ್ಯವಸ್ಥೆ ವಿಭಾಗದಲ್ಲಿ ನೀಡುವ ಇಂಡಿಯಾಸ್ ಸೈಬರ್ ಕಾಪ್ ದಿ ಇಯರ್ ಪ್ರಶಸ್ತಿಯು, ಇನ್ಸ್ಪೆಕ್ಟರ್ ಕೆ.ಟಿ.ಗುರುರಾಜ್ರಿಗೆ ಲಭಿಸಿದೆ.
ನಿರೀಕ್ಷೆಯಂತೆಯೇ ಶಿವಮೊಗ್ಗ ಪೊಲೀಸ್ ಇಲಾಖೆಗೆ ರಾಷ್ಟ್ರಮಟ್ಟದಲ್ಲಿ ಮತ್ತೊಂದು ಹೆಮ್ಮೆಯ ಗರಿ ಮೂಡಿದೆ. ಡೇಟಾ ಸೆಕ್ಯುರಿಟಿ ಕೌನ್ಸಿಲ್ ಆಫ್ ಇಂಡಿಯ, ಕಾನೂನು ಸುವ್ಯವಸ್ಥೆ ವಿಭಾಗದಲ್ಲಿ ನೀಡುವ ಇಂಡಿಯಾಸ್ ಸೈಬರ್ ಕಾಪ್ ದಿ ಇಯರ್ ಪ್ರಶಸ್ತಿಯು, ಇನ್ಸ್ಪೆಕ್ಟರ್ ಕೆ.ಟಿ.ಗುರುರಾಜ್ರಿಗೆ ಲಭಿಸಿದೆ.
ಶಿವಮೊಗ್ಗದ ಸಿಇಎನ್(ಸೈಬರ್, ಎಕಾನಿಮಿಕ್ ಅಫೆನ್ಸ್ ಹಾಗೂ ನಾರ್ಕೋಟಿಕ್) ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿದ್ದ ಕೆ.ಟಿ. ಗುರುರಾಜ್ ಕೈಗೊಂಡಿದ್ದ ತನಿಖಾ ಪ್ರಕರಣಕ್ಕೆ ಈ ಪ್ರಶಸ್ತಿ ಲಭ್ಯವಾಗಿದೆ. ಈ ಸಂಬಂಧ ಮಲೆನಾಡು ಟುಡೆ. ಕಾಂ ಈ ಮೊದಲು ಮಾಡಿದ್ದ ವರದಿಯು ಇಲ್ಲಿದೆ ಓದಿ BREAKING NEWS | India Cyber Cop Award ಪ್ರಶಸ್ತಿ ಪಟ್ಟಿಯಲ್ಲಿ ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸ್ ಠಾಣೆ ಕೇಸ್ & ತನಿಖಾಧಿಕಾರಿ ಕೆ.ಟಿ ಗುರುರಾಜ್
ಏನಿದು ಪ್ರಕರಣ
ಶಿವಮೊಗ್ಗದ ತಾಲ್ಲೂಕುವೊಂದರಲ್ಲಿ ಶಿಕ್ಷಕನೊಬ್ಬ ಮಕ್ಕಳ ಅಶ್ಲೀಲ ಚಿತ್ರಗಳನ್ನು ಇಂಟರ್ನೆಟ್ನಲ್ಲಿ ಅಪ್ಲೋಡ್ ಮಾಡುತ್ತಿದ್ದ ಕೇಸ್ವೊಂದರ ಜಾಡು ಹಿಡಿದು ತನಿಖೆ ಕೈಗೊಂಡಿದ್ದ ಗುರುರಾಜ್, ಆ ಸಂಬಂಧ ಆರೋಪಿಯನ್ನು ಅರೆಸ್ಟ್ ಮಾಡಿದ್ದಷ್ಟೆ ಅಲ್ಲದೆ ಆತನಿಗೆ 20 ವರ್ಷ ಸಜೆ ಆಗುವಂತೆ ಶ್ರಮಿಸಿದ್ದರು. ಈ ವೇಳೆ ಆರು ಅಪ್ರಾಪ್ತ ಮಕ್ಕಳನ್ನು ರಕ್ಷಿಸಿದ್ದರು.
ಇದನ್ನು ಸಹ ಓದಿ : ಮಕ್ಕಳ ಅಶ್ಲೀಲ ಚಿತ್ರ ತೆಗೆದು ಶಿಕ್ಷಕನ ಆಟ/ ಅಮೆರಿಕಾದಿಂದ ಬಂದಿತ್ತು ಸುಳಿವು/ ಗುರುರಾಜ್ ಭೇದಿಸಿದ ದೇಶದ ಟಾಪ್ಮೋಸ್ಟ್ ಪ್ರಕರಣ ಯಾವುದು ಗೊತ್ತಾ?
ಈ ಪ್ರಕರಣ ಈ ವರ್ಷದ ಇಂಡಿಯಾಸ್ ಸೈಬರ್ ಕಾಪ್ ಇಯರ್ ಪ್ರಶಸ್ತಿಯ ಫೈನಲ್ ತ್ರೀ ಲಿಸ್ಟ್ನಲ್ಲಿ ಆಯ್ಕೆಯಾಗಿತ್ತು. ಬೆಂಗಳೂರಿನ ಪೊಲೀಸ್ ಕಮಿಷನರ್, ಐಪಿಎಸ್ ಅಧಿಕಾರಿ ಪ್ರತಾಪ್ ರೆಡ್ಡಿ, ಸುಪ್ರೀಂಕೋರ್ಟ್ ವಕೀಲರಾದ ವಕುಲ್ ಶರ್ಮಾ, NTIPRIT ಯ ಟೆಲಿಕಾಂ ಸೆಕ್ಯುರಿಟಿ ವಿಭಾಗದ ಡೆಪ್ಯುಟಿ ಡೈರಕ್ಟರ್ ಜನರಲ್ ಮತ್ತುMHA DFSS ನ ಫಾರ್ಮರ್ ಸೈಂಟಿಸ್ಟ್ ಕೃಷ್ಣಶಾಸ್ತ್ರಿ ಪೆಂಡಾಲ್ಯರವರು ತೀರ್ಪುಗಾರರ ತಂಡ ಅಂತಿಮವಾಗಿ ಮೂವರ ಪೈಕಿ ಕೆ.ಟಿ ಗುರುರಾಜ್ರವರನ್ನು ಇಂಡಿಯಾಸ್ ಸೈಬರ್ ಕಾಪ್ ಆಫ್ ಇಯರ್ (India Cyber Cop of the Year) ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.
ಇದನ್ನು ಸಹ ಓದಿ : ಶಿವಮೊಗ್ಗಕ್ಕೆ ಭ್ರಷ್ಟರು ಎಸಿ ಆಗುವುದು ಬೇಡ/ ರಾಜ್ಯ ಸರ್ಕಾರಕ್ಕೆ ಒತ್ತಾಯ/ ಏನಿದು ಬೇಡಿಕೆ ವಿವರ ಇಲ್ಲಿದೆ ಓದಿ
ಇವತ್ತು ನಡೆದ ಕಾರ್ಯಕ್ರಮದಲ್ಲಿ ಗುರುರಾಜ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ಈ ಮೂಲಕ ಶಿವಮೊಗ್ಗ ಪೊಲಿಸ್ ವಿಭಾಗಕ್ಕೆ ಹೆಮ್ಮೆಯ ಗರಿ ಮೂಡಿಸಿದ್ಧಾರೆ.
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link