BREAKING NEWS ಭದ್ರಾವತಿಯಲ್ಲಿ ಕೈಕೊಟ್ಟು ನಿಂತ ಬೆಂಗಳೂರು-ತಾಳಗುಪ್ಪ ಇಂಟರ್ಸಿಟಿ ರೈಲು
ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೈಲು ಕಡದಕಟ್ಟೆಯಲ್ಲಿ ನಿಂತು ಬಿಟ್ಟಿತ್ತು. ಹೀಗಾಗಿ ರೈಲಿನಲ್ಲಿ ಬಂದಿದ್ದ ಪ್ರಯಾಣಿಕರು ಗೊಂದಲಕ್ಕೀಡಾದರು.
ಬೆಂಗಳೂರು- ತಾಳಗುಪ್ಪ ಇಂಟರ್ ಸಿಟಿ ರೈಲು (bangalore to talguppa train)ಇವತ್ತು ಭದ್ರಾವತಿಯಿಂದ ತುಸು ಮುಂದಕ್ಕೆ ಬಂದು ನಿಂತಿದೆ. ಇಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೈಲು ಕಡದಕಟ್ಟೆಯಲ್ಲಿ ನಿಂತು ಬಿಟ್ಟಿತ್ತು. ಹೀಗಾಗಿ ರೈಲಿನಲ್ಲಿ ಬಂದಿದ್ದ ಪ್ರಯಾಣಿಕರು ಗೊಂದಲಕ್ಕೀಡಾದರು. ಸುಮಾರು ಒಂದು ಗಂಟೆಗೂ ಅಧಿಕ ಕಾಲ ಕಡದಕಟ್ಟೆಯ ಬಳಿ ಟ್ರೈನ್ ನಿಂತಿದ್ದರಿಂದ ಸಾಕಷ್ಟು ಸಮಸ್ಯೆ ಉಂಟಾಗಿತ್ತು.
ಇದನ್ನು ಸಹ ಓದಿ :ಅಡಿಕೆ ದರ ಕ್ವಿಂಟಾಲ್ಗೆ 20 ಸಾವಿರ ಕಡಿಮೆಯಾಗಲು ಬಿಜೆಪಿ ಕಾರಣ? | ಗುಟ್ಕಾ ವ್ಯಾಪಾರಸ್ಥರ ಪರ ನಿಂತ ಮೋದಿ ಸರ್ಕಾರ | ಕಾಂಗ್ರೆಸ್ ಆರೋಪವೇನು
ಭದ್ರಾವತಿ ನಿಲ್ದಾಣಕ್ಕೆ ಏಳುವರೆ ಸುಮಾರಿಗೆ ಬಂದ ಟ್ರೈನ್ ಬಳಿಕ ಅಲ್ಲಿಂದ ಒಂದು ನಿಮಿಷದ ಬಳಿಕ ಹೊರಟಿತ್ತು. ಆದರೆ ಕಡದಕಟ್ಟೆಯ ಬಳಿ ಇಂಜಿನ್ ಫೇಲ್ ಆಗಿದ್ದರಿಂದ ಟ್ರೈನ್ ನಿಂತಿತ್ತು. ಹೀಗಾಗಿ ಪ್ರಯಾಣಿಕರಲ್ಲಿ ಗೊಂದಲ ಮೂಡಿತ್ತು. ಬಳಿಕ ಒಂದು ಗಂಟೆಯ ನಂತರ ಟ್ರೈನ್ ಮತ್ತೆ ಹೊರಟಿದೆ. ಹೀಗಾಗಿ ಶಿವಮೊಗ್ಗ ನಿಲ್ದಾಣಕ್ಕೆ ಒಂದುವರೆ ಗಂಟೆ ಕಾಲ ತಡವಾಗಿ ರೈಲು ಆಗಮಿಸಿದೆ ಎಂಬ ಮಾಹಿತಿ ಸಿಕ್ಕಿದೆ.
ಇದನ್ನು ಸಹ ಕ್ಲಿಕ್ ಮಾಡಿ : ಜಿ20 ಸಭೆಗಾಗಿ ಬೆಂಗಳೂರಿನಲ್ಲಿ ಬೀಡುಬಿಟ್ಟ ಸಕ್ರೆಬೈಲ್ನ ಜೋಡಿ ಆನೆಗಳು | ಏನಿದು ವಿಶೇಷ ಗೊತ್ತಾ | Exclusive
ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ವಾಟ್ಸ್ಯಾಪ್ ಗ್ರೂಪ್ನ ಲಿಂಕ್ಗೆ ಕ್ಲಿಕ್ ಮಾಡಿ : Whatsapp link