BREAKING NEWS ಭದ್ರಾವತಿಯಲ್ಲಿ ಕೈಕೊಟ್ಟು ನಿಂತ ಬೆಂಗಳೂರು-ತಾಳಗುಪ್ಪ ಇಂಟರ್​ಸಿಟಿ ರೈಲು

ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೈಲು ಕಡದಕಟ್ಟೆಯಲ್ಲಿ ನಿಂತು ಬಿಟ್ಟಿತ್ತು. ಹೀಗಾಗಿ ರೈಲಿನಲ್ಲಿ ಬಂದಿದ್ದ ಪ್ರಯಾಣಿಕರು ಗೊಂದಲಕ್ಕೀಡಾದರು.

BREAKING NEWS ಭದ್ರಾವತಿಯಲ್ಲಿ  ಕೈಕೊಟ್ಟು ನಿಂತ ಬೆಂಗಳೂರು-ತಾಳಗುಪ್ಪ  ಇಂಟರ್​ಸಿಟಿ ರೈಲು

ಬೆಂಗಳೂರು- ತಾಳಗುಪ್ಪ ಇಂಟರ್​ ಸಿಟಿ ರೈಲು  (bangalore to talguppa train)ಇವತ್ತು ಭದ್ರಾವತಿಯಿಂದ ತುಸು ಮುಂದಕ್ಕೆ ಬಂದು ನಿಂತಿದೆ. ಇಂಜಿನ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೈಲು ಕಡದಕಟ್ಟೆಯಲ್ಲಿ ನಿಂತು ಬಿಟ್ಟಿತ್ತು. ಹೀಗಾಗಿ ರೈಲಿನಲ್ಲಿ ಬಂದಿದ್ದ ಪ್ರಯಾಣಿಕರು ಗೊಂದಲಕ್ಕೀಡಾದರು. ಸುಮಾರು ಒಂದು ಗಂಟೆಗೂ ಅಧಿಕ ಕಾಲ  ಕಡದಕಟ್ಟೆಯ ಬಳಿ ಟ್ರೈನ್​​ ನಿಂತಿದ್ದರಿಂದ ಸಾಕಷ್ಟು ಸಮಸ್ಯೆ ಉಂಟಾಗಿತ್ತು.

ಇದನ್ನು ಸಹ ಓದಿ :ಅಡಿಕೆ ದರ ಕ್ವಿಂಟಾಲ್​ಗೆ 20 ಸಾವಿರ ಕಡಿಮೆಯಾಗಲು ಬಿಜೆಪಿ ಕಾರಣ? | ಗುಟ್ಕಾ ವ್ಯಾಪಾರಸ್ಥರ ಪರ ನಿಂತ ಮೋದಿ ಸರ್ಕಾರ | ಕಾಂಗ್ರೆಸ್​ ಆರೋಪವೇನು

ಭದ್ರಾವತಿ ನಿಲ್ದಾಣಕ್ಕೆ ಏಳುವರೆ ಸುಮಾರಿಗೆ ಬಂದ ಟ್ರೈನ್​ ಬಳಿಕ ಅಲ್ಲಿಂದ ಒಂದು ನಿಮಿಷದ ಬಳಿಕ ಹೊರಟಿತ್ತು. ಆದರೆ ಕಡದಕಟ್ಟೆಯ ಬಳಿ ಇಂಜಿನ್​ ಫೇಲ್​ ಆಗಿದ್ದರಿಂದ ಟ್ರೈನ್​ ನಿಂತಿತ್ತು. ಹೀಗಾಗಿ ಪ್ರಯಾಣಿಕರಲ್ಲಿ ಗೊಂದಲ ಮೂಡಿತ್ತು. ಬಳಿಕ ಒಂದು ಗಂಟೆಯ ನಂತರ ಟ್ರೈನ್​ ಮತ್ತೆ ಹೊರಟಿದೆ. ಹೀಗಾಗಿ ಶಿವಮೊಗ್ಗ ನಿಲ್ದಾಣಕ್ಕೆ ಒಂದುವರೆ ಗಂಟೆ ಕಾಲ ತಡವಾಗಿ ರೈಲು ಆಗಮಿಸಿದೆ ಎಂಬ ಮಾಹಿತಿ ಸಿಕ್ಕಿದೆ. 

ಇದನ್ನು ಸಹ ಕ್ಲಿಕ್ ಮಾಡಿ : ಜಿ20 ಸಭೆಗಾಗಿ ಬೆಂಗಳೂರಿನಲ್ಲಿ ಬೀಡುಬಿಟ್ಟ ಸಕ್ರೆಬೈಲ್​ನ ಜೋಡಿ ಆನೆಗಳು | ಏನಿದು ವಿಶೇಷ ಗೊತ್ತಾ | Exclusive

ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ವಾಟ್ಸ್ಯಾಪ್​ ಗ್ರೂಪ್​ನ ಲಿಂಕ್​ಗೆ ಕ್ಲಿಕ್ ಮಾಡಿ :  Whatsapp link