ಟ್ರೈನ್‌ ಹತ್ತಿದ ಬಿ.ವೈ. ರಾಘವೇಂದ್ರ | ತಾಳಗುಪ್ಪ-ಬೆಂಗಳೂರು ಇಂಟರ್‌ ಸಿಟಿ ರೈಲಿನಲ್ಲಿ ಪ್ರಚಾರ

Boarding the train B.Y. Raghavendra | Promotion on Talaguppa-Bangalore inter city train

ಟ್ರೈನ್‌ ಹತ್ತಿದ ಬಿ.ವೈ. ರಾಘವೇಂದ್ರ  | ತಾಳಗುಪ್ಪ-ಬೆಂಗಳೂರು  ಇಂಟರ್‌ ಸಿಟಿ  ರೈಲಿನಲ್ಲಿ ಪ್ರಚಾರ
B.Y. Raghavendra, Talaguppa-Bangalore inter city train

SHIVAMOGGA | MALENADUTODAY NEWS |  Apr 22, 2024  

ಲೋಕಸಭಾ ಚುನಾವಣೆ  2024 ಹಿನ್ನೆಲೆಯಲ್ಲಿ  ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಿ ಸಂಸದ ಬಿ.ವೈ.ರಾಘವೇಂದ್ರ ರವರು ನಿನ್ನೆ ಇಂಟರ್‌ ಸಿಟಿ ರೈಲಿನಲ್ಲಿ ಪ್ರಚಾರ ನಡೆಸಿದ್ದಾರೆ. ನಿನ್ನೆ  ಭಾನುವಾರ ಬೆಳಿಗ್ಗೆ ತಾಳಗುಪ್ಪ- ಬೆಂಗಳೂರು  ಇಂಟರ್‌ಸಿಟಿ ರೈಲಿನಲ್ಲಿ ಪ್ರಯಾಣಿಕರನ್ನು ಭೇಟಿ ಮಾಡಿದ ಅವರು ತಮ್ಮ ಸಾಧನೆಯ ವಿವರ ನೀಡಿ ಮತಯಾಚನೆ ಮಾಡಿದ್ದಾರೆ. 

 

ಕೇಂದ್ರ ಸರ್ಕಾರದಿಂದ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ತರುವ ಗುರಿ ಹೊಂದಿದ್ದೇನೆ. ಇದು ಕೇವಲ ಟ್ರೈಲರ್ ಮಾತ್ರ ಇನ್ನೂ ಪಿಕ್ಚರ್ ಬಾಕಿ ಇದೆ. ಅದನ್ನು ನಿಮ್ಮೆಲ್ಲರ ಆಶೀರ್ವಾದದಿಂದ ಪೂರೈಸುತ್ತೇನೆ ಅಂತಾ ಇದೇ ವೇಳೆ ಹೇಳಿದ್ದಾರೆ. 

ಈ ಸಂದರ್ಭದಲ್ಲಿ ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ, ಪ್ರಶಾಂತ್ ಕುಕ್ಕೆ, ಭದ್ರಾವತಿ ಬಿಜೆಪಿ ಮುಖಂಡ ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ರಾಹುಲ್ ಬಿದರೆ, ಆನಂದ್ ಉಪಸ್ಥಿತರಿದ್ದರು.