ಶಿವಮೊಗ್ಗ | ಆಯನೂರು ಮಂಜುನಾಥ್ ವೋಟು ಯಾರಿಗೆ ಹಾಕಿದ್ರು | ಈಶ್ವರಪ್ಪನವರಿಗೆ ಮತ ಹಾಕುವ ಬಗ್ಗೆ ಹೇಳಿದ್ದೇನು?
Ayanur Manjunath has commented on voting for Eshwarappa. Ayanur Manjunath, Shimoga Election News, KS Eshwarappa
SHIVAMOGGA | MALENADUTODAY NEWS | May 7, 2024
ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಕೆಎಸ್ ಈಶ್ವರಪ್ಪನವರು ಎಲೆಕ್ಷನ್ಗೆ ನಿಜವಾಗಿಯು ನಿಂತರೆ ನನ್ನ ವೋಟು ಅವರಿಗೆ ಹಾಕುತ್ತೇನೆ ಎಂದು ಕಾಂಗ್ರೆಸ್ ಮುಖಂಡ ಆಯನೂರು ಮಂಜುನಾಥ್ ರವರು ಹೇಳಿದ್ದರು. ಇವತ್ತು ಅವರು ಮತ ಚಲಾಯಿಸಿದ್ಧಾರೆ. ಬಳಿಕ ಮಾತನಾಡಿದ ಅವರು ನಾನು ನನ್ನ ಕುಟುಂಬಸ್ತರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದೇನೆ. ಎಲ್ಲೆಡೆ ಒಳ್ಳೆಯ ವಾತಾವರಣವಿದ್ದು ಗೀತಾ ಶಿವರಾಜಕುಮಾರ ಗೆಲ್ಲುತ್ತಾರೆ ಎಂದಿದ್ದಾರೆ.
ನಾನು ಮಾತುಕೊಟ್ಟಂತೆ ಈಶ್ವರಪ್ಪನವರಿಗೆ ಮತಹಾಕಬೇಕು ಎಂದುಕೊಂಡಿದ್ದೆ. ಆದರೆ ನಿನ್ನೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ ವಿಡಿಯೋ ನೋಡಿದ ಮೇಲೆ ಅವರಿಗೆ ಮತ ಹಾಕುವುದು ಬೇಡ ಅಂತಾ ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿದ್ದೇನೆ. ಆನಂತರ ಗೊತ್ತಾಯ್ತು ಅದು ಫೇಕ್ ವಿಡಿಯೋ ಎಂದು. ನನ್ನ ಮತವನ್ನು ಪಡೆಯುವ ಅದೃಷ್ಟ ಈಶ್ವರಪ್ಪನವರಿಗೆ ಇರಲಿಲ್ಲ ಎಂದರು.