ಶಿವಮೊಗ್ಗ ಅಣ್ತಮ್ಮನ ಮಾತಿನ ಕದನ | ತಂಗಿ ಮನೆ ಬಗ್ಗೆ ಕೇಳಿದ್ದಕ್ಕೆ ಮೋದಿ ಮನೆ ಎಲ್ಲಿ ಎಂದ ಸಹೋದರ |
Battle of words of Shivamogga Anthamma Talk War Kumar Bangarappa, Madhu Bangarappa, Shimoga Lok Sabha Constituency, Shimoga Election News
SHIVAMOGGA | MALENADUTODAY NEWS | May 4, 2024
ಶಿವಮೊಗ್ಗ ಲೋಕಸಭಾ ಚುನಾವಣೆ ತಾರ್ಕಿಕ ಅಂತ್ಯ ಪಡೆದುಕೊಳ್ಳುವ ಘಟ್ಟ ತಲುಪಿದೆ. ಈ ನಡುವೆ ಒಂದೆ ಕುಟುಂಬದವರ ನಡುವಿನ ವಾಕ್ಸಮರ ತಾರಕ್ಕೇರಿದೆ. ಶಿವಮೊಗ್ಗದಲ್ಲಿ ಟೆಂಟ್ ಹಾಕಿ ಚುನಾವಣೆ ಪ್ರಚಾರಕ್ಕೆ ಬಂದಿದ್ದಾರೆ. ಎಲೆಕ್ಷನ್ ಮುಗಿದ ಬಳಿಕ ಅವರು ಇಲ್ಲಿಂದ ಬೆಂಗಳೂರಿಗೆ ಹೋಗುತ್ತಾರೆ ಎಂದು ಕುಮಾರ್ ಬಂಗಾರಪ್ಪ ತಮ್ಮ ತಂಗಿಯನ್ನು ಟೀಕಿಸಿದ್ದರು. ಇದಕ್ಕೆ ನಿನ್ನೆ ಉತ್ತರ ಕೊಟ್ಟ ಮಧು ಬಂಗಾರಪ್ಪ, ‘ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಕುರಿತು ಬಹಳ ಕೀಳುಮಟ್ಟದ ರಾಜಕೀಯವನ್ನು ಬಿಜೆಪಿ ಮಾಡುತ್ತಿದೆ. ಅವರು ಮನೆ ಮಾಡಿಲ್ಲ ಎನ್ನುತ್ತಾರೆ. ವಾರಣಾಸಿಯಲ್ಲಿ ಸ್ಪರ್ಧೆ ಮಾಡಿದ್ದ ಮೋದಿ ಅವರು ಅಲ್ಲಿ ಮನೆ ಮಾಡಿದ್ದರೇ ಎಂದು ಪ್ರಶ್ನೆ ಮಾಡಿದ್ದಾರೆ.
ನಟ ಶಿವರಾಜ ಕುಮಾರ್ ಬಗ್ಗೆಯೂ ಬಹಳ ಕೀಳಾಗಿ ಮಾತನಾಡುತ್ತಿದ್ದಾರೆ. ಚುನಾವಣೆಯಲ್ಲಿ ಅವರ ಅಭಿಮಾನಿಗಳು ತಕ್ಕಪಾಠ ಕಲಿಸಲಿದ್ದಾರೆ ಎಂದ ಮಧು ಸೊರಬದಿಂದ ಒಬ್ಬ ವ್ಯಕ್ತಿ ಬಂದಿದ್ದಾರೆ. ಅವರು ಇಷ್ಟು ದಿನ ಎಲ್ಲಿದ್ದರೋ ಗೊತ್ತಿಲ್ಲ. ಗೀತಾ ಅವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಅಂತಾ ಆಕ್ರೋಶ ಹೊರಹಾಕಿದ್ದಾರೆ.
ಯಾರು ಎಷ್ಟೇ ತಿಪ್ಪರಲಾಗ ಹಾಕಿದರೂ ಗೀತಾ ಗೆಲ್ಲುತ್ತಾರೆ. ಹಣ ಬಲದಿಂದ ಗೆಲ್ಲಬೇಕು ಎನ್ನುವವರಿಗೆ ಮತಾರರು ತಕ್ಕಪಾಠ ಕಲಿಸಲಿದ್ದಾರೆ. ನಾವು ನೀಡಿರುವ ಚೊಂಬು ಜಾಹೀರಾತು ಬಿಜೆಪಿಗೆ ಮಾಸ್ಟರ್ ಸ್ಟ್ರೋಕ್ ಆಗಲಿದೆ ಎಂದ ಅವರು, ರಾಹುಲ್ ಗಾಂಧಿ ಅವರು ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿರುವುದು ದೊಡ್ಡ ಹುಮ್ಮಸ್ಸು ನೀಡಿದೆ ಎಂದಿದ್ದಾರೆ.