ನರೇಂದ್ರ ಮೋದಿ ಸಮಾವೇಶದಲ್ಲಿ ಅಚ್ಚರಿ ಮೂಡಿಸಿದ ಕುಮಾರ್‌ ಬಂಗಾರಪ್ಪ ಹಾಜರಾತಿ!?

Kumar Bangarappa's surprise attendance at the Narendra Modi convention!?

ನರೇಂದ್ರ ಮೋದಿ ಸಮಾವೇಶದಲ್ಲಿ ಅಚ್ಚರಿ ಮೂಡಿಸಿದ ಕುಮಾರ್‌ ಬಂಗಾರಪ್ಪ ಹಾಜರಾತಿ!?
Narendra Modi ,Kumar Bangarappa

Shivamogga Mar 18, 2024  ಶಿವಮೊಗ್ಗ ನಗರದ ಅಲ್ಲಮ ಪ್ರಭು ಮೈದಾನದಲ್ಲಿ ನರೇಂದ್ರ ಮೋದಿಯವರ ಸಮಾವೇಶ ನಡೆಯುತ್ತಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ  ನರೇಂದ್ರ ಮೋದಿ ಶಿವಮೊಕ್ಕೆ ಆಗಮಿಸಲಿದ್ದಾರೆ. ಅವರು ಆಗಮಿಸುವುದಕ್ಕೂ ಕೆಲಹೊತ್ತಿಗೂ ಮೊದಲು ಸಮಾವೇಶ ಆರಂಭಗೊಂಡಿದ್ದು, ಸಂಸದ ಬಿ.ವೈ.ರಾಘವೇಂದ್ರ ಹಾಗೂ ಮಾಜಿ ಶಾಸಕ ಹರತಾಳು ಹಾಲಪ್ಪ, ಶಿವಮೊಗ್ಗ ಶಾಸಕ ಎಸ್‌ಎನ್‌ ಚನ್ನಬಸಪ್ಪ, ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್‌  ಮಾತನಾಡಿದ್ದಾರೆ. 

ಸಿಟಿ ರವಿ, ರಾದಾ ಮೋಹನ್‌ ದಾಸ್‌ ಅಗರವಾಲ್‌ ಸೇರಿದಂತೆ ಕೇಂದ್ರದ ನಾಯಕರು ಪಾಲ್ಗೊಂಡಿರುವ ಸಮಾವೇಶದಲ್ಲಿ ಅಚ್ಚರಿ ಮೂಡಿಸಿದ್ದು ಕುಮಾರ್‌ ಬಂಗಾರಪ್ಪನವರ ಹಾಜರಾತಿ. ವಿಧಾನಸಭಾ ಚುನಾವಣೆಯ ಬಳಿಕ ಮುನ್ನೆಲೆಯಿಂದ ಹಿನ್ನೆಲೆಗೆ ಸರಿದಿದ್ದ ಕುಮಾರ್‌ ಬಂಗಾರಪ್ಪ ಎಲ್ಲಿಯು ಸಹ ಕಾಣಿಸಿಕೊಂಡಿರಲಿಲ್ಲ. ಮಾಧ್ಯಮಗಳ ಎದುರು ಮಾತನಾಡಿರಲಿಲ್ಲ. ತಮ್ಮ ಸಹೋದರ ಸಚಿವರಾದ ನಂತರ ಕುಮಾರ್‌ ಬಂಗಾರಪ್ಪನವರ ನಡೆ ಸಾಕಷ್ಟು ಕುತೂಹಲ ಮೂಡಿಸಿತ್ತು. ಅಲ್ಲದೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಕುಮಾರ್‌ ಬಂಗಾರಪ್ಪನವರಿಗೆ ನೀಡಿ ಅವರನ್ನ ಪಕ್ಷಕ್ಕೆ ಕರೆಸಿಕೊಳ್ಳುವ ಮಾತುಕತೆ ನಡೆದಿತ್ತು ಎನ್ನಲಾಗಿತ್ತು.

ಮೌನಕ್ಕೆ ಶರಣಾಗಿದ್ದ ಕುಮಾರ್‌ ಬಂಗಾರಪ್ಪನವರ ನಡೆ ಯಾವ ಕಡೆ ಎಂಬಷ್ಟು ಕುತೂಹಲ ಮೂಡಿಸಿತ್ತು. ಇನ್ನೂ ಲೋಕಸಭಾ ಚುನಾವಣೆ ಹಿನ್ನೆಲೆ ಶಿವಮೊಗ್ಗ ಕ್ಷೇತ್ರದ ಟಿಕೆಟ್‌ ನ್ನ ಕಾಂಗ್ರೆಸ್‌ ಗೀತಾ ಶಿವರಾಜ್‌ ಕುಮಾರ್‌ರವರಿಗೆ ನೀಡಿತ್ತು. ಅದೇ ಸಂದರ್ಭದಲ್ಲಿ ಕುಮಾರ್‌ ಬಂಗಾರಪ್ಪರವರು ಅವರಿಗೆ ಬೆಂಬಲ ನೀಡುತ್ತಾರಾ? ಅಥವಾ ಸಂಸದ ರಾಘವೇಂದ್ರ ಪರ ಪ್ರಚಾರಕ್ಕೆ ಬರುತ್ತಾರಾ ಎಂಬ ಕತೂಹಲ ಮೂಡಿತ್ತು. 

ಇದೆಲ್ಲದರ ನಡುವೆ ಕಳೆದ ವಿಧಾನಸಭಾ ಚುನಾವಣೆಯ ಬಳಿಕ ಇದೇ ಮೊದಲ ಸಲ ಶಿವಮೊಗ್ಗದಲ್ಲಿ ಕುಮಾರ್‌ ಬಂಗಾರಪ್ಪ ಬಿಜೆಪಿ ಸಮಾವೇಶವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವೇದಿಕೆಗೆ ಕೇಸರಿ ಶಾಲು ಧರಿಸಿ ಬಂದ ಕುಮಾರ್‌ ಬಂಗಾರಪ್ಪ ವೇದಿಕೆ ಮೇಲಿದ್ದ ಮುಖಂಡರಿಗೆ ನಮಸ್ಕರಿಸಿದರು. ಬಿಎಸ್‌ ಯಡಿಯೂರಪ್ಪ ಕುಮಾರ್‌ ಬಂಗಾರಪ್ಪರವರ ಕೈ ಕುಲುಕಿ ಸ್ವಾಗತಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಉಭಯ ಕುಶೋಲಚರಿ ವಿಚಾರಿಸಿದ್ರೆ, ಅತ್ತ ಸಂಸದ ಬಿ.ವೈ.ರಾಘವೇಂದ್ರರವರು ಆತ್ಮೀಯವಾಗಿ ಕುಮಾರ್‌ ಬಂಗಾರಪ್ಪರವರನ್ನ ಬರಮಾಡಿಕೊಂಡು ನೆರೆದವರ ಮುಂದೆ ಕೈ ಬೀಸಿದರು..