ಇಂಟರ್ ಸಿಟಿ ರೈಲಿನಲ್ಲಿ ಬೆಂಗಳೂರಿನಿಂದ-ಶಿವಮೊಗ್ಗಕ್ಕೆ ಬಂತು ಬ್ಯಾಂಕ್ ಮ್ಯಾನೇಜರ್ ಶವ! ನಡೆದಿದ್ದೇನು? ಸಂಶಯ ಮೂಡಿಸಿತೆ ಪ್ರಕರಣ!
Bank manager's body arrives from Bengaluru to Shimoga in intercity train What happened? The case raised doubts!
ಶಿವಮೊಗ್ಗ ಯಶವಂತಪುರ-ಶಿವಮೊಗ್ಗದ ಇಂಟರ್ ಸಿಟಿ ರೈಲಿನ ಏಸಿ ಬೋಗಿಯಲ್ಲಿ (shimoga yeshwanthpur intercity train)ವ್ಯಕ್ತಿಯೋರ್ವನ ಶವ ಭಾನುವಾರ ಮಧ್ಯಾಹ್ನ ಪತ್ತೆಯಾಗಿದೆ. ಸದ್ಯ ಈ ಘಟನೆ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದ್ದು, ಘಟನೆಯ ಬಗ್ಗೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ.
ಇಂಟರ್ ಸಿಟಿ ರೈಲಿನ ಟಾಯ್ಲೆಟ್ನಲ್ಲಿ ಶವ ಪತ್ತೆ
ಭಾನುವಾರ ಶಿವಮೊಗ್ಗಕ್ಕೆ ವಾಪಸ್ಸಾದ ಇಂಟರ್ ಸಿಟಿ ರೈಲಿನ ಎಸಿ ಬೋಗಿಗಳಿರುವ ಕಂಪಾರ್ಟ್ಮೆಂಟ್ನ ಟಾಯ್ಲೆಟ್ನಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಶಿವಮೊಗ್ಗಕ್ಕೆ ಬಂದ ಇಂಟರ್ ಸಿಟಿ ರೈಲನ್ನ ಕ್ಲೀನ್ ಮಾಡುವ ಸಂದರ್ಭದಲ್ಲಿ, ಶೌಚಾಲಯವು ಒಳಗಿನಿಂದ ಲಾಕ್ ಆಗಿರುವುದು ಕಂಡು , ಸ್ವಚ್ಚತಾ ಸಿಬ್ಬಂದಿ ರೈಲು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಪೊಲೀಸರಿಗೆ ವಿಷಯ ತಿಳಿಸಿ ಲಾಕ್ ಓಪನ್ ಮಾಡಿದಾಗ , ಶೌಚಾಲಯದಲ್ಲಿ ಮೃತದೇಹ ಪತ್ತೆಯಾಗಿದೆ.
ಬ್ಯಾಂಕ್ ಅಧಿಕಾರಿಯ ಮೃತದೇಹ
ಇನ್ನೂ ಸಾವನ್ನಪ್ಪಿದ ವ್ಯಕ್ತಿಯನ್ನು ಶಿವಮೊಗ್ಗದ ಯೂನಿಯನ್ ಬ್ಯಾಂಕ್ ಶಾಖೆಯೊಂದರ ವ್ಯವಸ್ಥಾಪಕ ಅಶೋಕ್ ಚೌಧರಿ ಎಂದು ಗುರುತಿಸಲಾಗಿದೆ. ಈ ವ್ಯಕ್ತಿ ಬೆಂಗಳೂರಿಗೆ ತೆರಳಿದ್ದ. ಅಸ್ಸಾಂನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಚೌಧರಿ ಅವರ ಕುಟುಂಬ ಬಂದಿದ್ದರಂತೆ. , ಅವರನ್ನು ರಿಸೀವ್ ಮಾಡಿಕೊಂಡು ಶಿವಮೊಗ್ಗಕ್ಕೆ ಕರೆತರಲು ರೈಲಿನಲ್ಲಿಅಶೋಕ್ ಬೆಂಗಳೂರಿಗೆ ತೆರಳಿದ್ದರು.
ಟಾಯ್ಲೆಟ್ನಲ್ಲಿ ಸಾವು
ಅಶೋಕ್ ಚೌದರಿಯು ಟಾಯ್ಲೆಟ್ಗೆ ಹೋಗಿದ್ದಾಗ ಹೃದಯಾಘಾತದಿಂದ ಅವರ ಸಾವು ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಆದರೆ ಟ್ರೈನ್ ಬೆಂಗಳೂರಿಗೆ ತೆರಳಿದಾಗ ಈ ವಿಚಾರ ಯಾರಿಗೂ ಗೊತ್ತಾಗಿರಲಿಲ್ಲ. ಬಳಿಕ ಟ್ರೈನ್ ಯಶವಂತ ಪುರದಿಂದ ಶಿವಮೊಗ್ಗಕ್ಕೆ ಬೋಗಿಯ ಶೌಚಾಲಯದಲ್ಲಿಯೇ ಬಂದಿದೆ. ಮಧ್ಯಾಹ್ನ 2-20 ರ ವೇಳೆಗೆ ರೈಲಿನ ಸ್ವಚ್ಛಗೊಳಿಸಲು ಸಿಬ್ಬಂದಿಗಳು ಮುಂದಾದಾಗ ಟಾಯ್ಲೆಟ್ನಲ್ಲಿ ಶವ ಇರುವುದು ಗೊತ್ತಾಗಿದೆ.
ಸ್ಚಚ್ಚತೆಯ ಬಗ್ಗೆ ಅನುಮಾನ
ಬ್ಯಾಂಕ್ ಮ್ಯಾನೇಜರ್ ಅಶೋಕ್ ಚೌದರಿ ಶನಿವಾರ ಬೆಂಗಳೂರಿಗೆ ಹೋಗಿ ಬೆಂಗಳೂರಿನಿಂದ ಶವವಾಗಿ ಶಿವನಮೊಗ್ಗಕ್ಕೆ ಬಂದಿದ್ದಾರೆ.ಇದರ ಅವರ ಕಾಣೆಯಾದ ಬಗ್ಗೆ ನಾಪತ್ತೆ ಕಂಪ್ಲೆಂಟ್ ಸಹ ದಾಖಲಾಗಿದೆ. ಬೆಂಗಳೂರಿಗೆ ತಮ್ಮ ಕುಟುಂಬವನ್ನು ರಿಸೀವ್ ಮಾಡಲು ಬರುತ್ತಿದ್ದವರು ಕಾಣೆಯಾದ ಬಗ್ಗೆ ಬ್ಯಾಂಕ್ ಸಿಬ್ಬಂದಿ ಸಹ ಆತಂಕಗೊಂಡು ಬೆಂಗಳೂರಿನವರೆಗೂ ಎಲ್ಲಾ ಸ್ಟೇಷನ್ನಗಳಲ್ಲಿಯು ಹುಡುಕಾಡಿದ್ದಾರೆ. ಇನ್ನೂ ಬೆಂಗಳೂರಿಗೆ ಹೋಗಿ ಹಾಲ್ಟ್ ಆದ ಟ್ರೈನ್ನನ್ನ ಅಲ್ಲಿ ಸ್ಚಚ್ಚಗೊಳಿಸಿಲ್ಲವೇ? ಕ್ಲೀನ್ ಮಾಡಲಾಗಿದ್ದಾರೆ, ಅಲ್ಲಿಯೇ ಮೃತದೇಹ ಪತ್ತೆಯಾಗಬೇಕಿತ್ತಲ್ಲವೇ? ಇದರ ವ್ಯಕ್ತಿಯೊಬ್ಬರು ಮೃತಪಟ್ಟು , ಅವರ ಶವ ಬೆಂಗಳೂರಿನಿಂದ-ಶಿವಮೊಗ್ಗದವರೆಗೂ ಟ್ರಾವೆಲ್ ಆಗಿದೆ ಎಂಬುದು ಹಲವು ಪ್ರಶ್ನೆ ಹಾಗೂ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಮೆಗ್ಗಾನ್ ನಲ್ಲಿ ಮೃತದೇಹ
ಸದ್ಯ ಅಶೋಕ್ ಚೌದರಿಯವರ ಮೃತದೇಹವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಕುಟುಂಬಸ್ಥರು ಸ್ಥಳಕ್ಕೆ ಬಂದ ಬಳಿಕ, ಮರಣೋತ್ತರ ಪರೀಕ್ಷೆ ನಡೆಯಲಿದೆ. ಇನ್ನೂ ಘಟನೆ ಸಂಬಂಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ಧಾರೆ.
ಇನ್ನೊಂದು ವಾರದಲ್ಲಿ ವಿಮಾನ ಹಾರಾಟ! ಟಿಕೆಟ್ಗೆ ₹500 ಸಬ್ಸಿಡಿ! ಏಕೆಗೊತ್ತಾ?
MALENADUTODAY.COM |SHIVAMOGGA| #KANNADANEWSWEB
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today,Shivamogga Crime News ,Shivamogga Crime News , ಶಿವಮೊಗ್ಗ ಕ್ರೈಂ ರಿಪೋರ್ಟ್, ಶಿವಮೊಗ್ಗ ಪೊಲೀಸ್, ಶಿವಮೊಗ್ಗ ಎಸ್ಪಿ, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್, ಶಿವಮೊಗ್ಗ ಕುಂಸಿ ಪೊಲೀಸರು