mudbath/ ಮಣ್ಣಲ್ಲಿ ಮಿಂದು ಮನಸ್ಸು ಪೂರ್ತಿಯಾಗಿ ಖುಷಿಪಟ್ಟರು! ಏನಿದು ಮಡ್ ಬಾತ್ ಶಿವಮೊಗ್ಗದಲ್ಲಿ?
mudbath/ A unique workshop on Madbath was held in Shimoga
ನಿನ್ನೆ ಶಿವಮೊಗ್ಗದ ದುಮ್ಮಳ್ಳಿಯಲ್ಲಿ ಮಣ್ಣಿನ ಸ್ನಾನವನ್ನು (mudbath) ಹಮ್ಮಿಕೊಳ್ಳಲಾಗಿತ್ತು. ಅಲ್ಲದೆ ಮಣ್ಣಿನ ಸ್ನಾನದ ಬಗ್ಗ ಪ್ರಾತ್ಯಕ್ಷಿಕೆಯನ್ನ ಕೈಗೊಳ್ಳಲಾಗಿತ್ತು. ಮಣ್ಣಿನ ಸ್ನಾನದಲ್ಲಿರುವ ಔಷಧಿಯ ಗುಣಗಳು ಹಾಗೂ ಅದು ನೀಡುವ ಆಹ್ಲಾದತೆ ಮತ್ತು ಖುಷಿಯ ಬಗ್ಗೆ ವಿವರಿಸಲಾಯ್ತು, ದೇಹದ ಉಷ್ಣತೆಯನ್ನು ಸಹ ಮಣ್ಣಿನ ಸ್ನಾನ ನಿಯಂತ್ರಿಸುತ್ತದೆ. ಮಣ್ಣಿನ ಸ್ನಾನದಿಂದ ಆರೋಗ್ಯ ಸಂರಕ್ಷಣೆ ಸಾಧ್ಯ ಎಂದು ಡಾ|| ಆರ್. ಮಾಲತೇಶ್ ಅಭಿಪ್ರಾಯ ಪಟ್ಟರು.
ಮನುಷ್ಯನ ಹುಟ್ಟಿನಿಂದ ಸಾವಿನವರೆಗೂ ಮಣ್ಣಿನ ಜೊತೆಗೆ ಇರುತ್ತಾನೆ, ಆದರೆ ಮಣ್ಣೀನಿಂದ ಅಂತರ ಕಾಪಾಡಿಕೊಳ್ತಾನೆ. ಮಣ್ಣಿನಿಂದ ಬಂದ ಬೇಳಕಾಳು ತಿನ್ನುವ ಮನುಷ್ಯ, ಕೊನೆಗೆ ಮಣ್ಣನ್ನೇ ಸೇರುತ್ತಾನೆ, ಮಣ್ಣಿಗಾಗಿಯೇ ಹೋರಾಡುತ್ತಾನೆ. ಹಾಗಿದ್ದರು, ಮಣ್ಣಿನೊಂದಿಗೆ ತನ್ನ ದೇಹ ಕೊಳೇಯಾಗದಂತೆ ಕಾಪಾಡಿಕೊಂಡು ಅಂತರ ಕಾಯ್ದುಕೊಳ್ಳುತ್ತಾನೆ, ಅದರ ಬದಲು ಮಣ್ಣಿನೊಂದಿಗೆ ಬೆರೆತಾಗ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳಿಗೆ ನಿವೃತ್ತ ಪರಿಹಾರ ಇದೆ ಎಂದದು ಡಾ.ಮಾಲತೇಶ್ ತಿಳಿಸಿದ್ರು.
ಜಗತ್ತಿನ 164 ದೇಶಗಳಲ್ಲಿ ಮಣ್ಣಿನ ಸ್ನಾನ ಪ್ರಚಲಿತದಲ್ಲಿದೆ. ಮಣ್ಣಿನ ಸ್ನಾನದ ಮೂಲ ಭಾರತ ಎಂಬುವುದು ಹೆಮ್ಮೆಯ ಸಂಗತಿ ಎಂದು ಪ್ರಾತ್ಯಕ್ಷಿಕೆಯಲ್ಲಿ ತಿಳಿಸಲಾಯ್ತು, ಇನ್ನೂ ಕಾರ್ಯಕ್ರಮದಲ್ಲಿ ಮಕ್ಕಳು ಸೇರಿದಂತೆ ವಿವಿದೆಡೆಯಿಂದ ಬಂದಿದ್ದ ಹಿರಿಯರು ಮಣ್ಣಿನ ಸ್ನಾನವನ್ನು ಮಾಡಿ ಖುಷಿಪಟ್ಟರು. ಅಲ್ಲದೆ ಮಡ್ಬಾತ್ನ ಅನುಭವವನ್ನು ಹಂಚಿಕೊಂಡರು.
Read / ಇನ್ನೊಂದು ವಾರದಲ್ಲಿ ವಿಮಾನ ಹಾರಾಟ! ಟಿಕೆಟ್ಗೆ ₹500 ಸಬ್ಸಿಡಿ! ಏಕೆಗೊತ್ತಾ?
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
MALENADUTODAY.COM/ SHIVAMOGGA / KARNATAKA WEB NEWS/
HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar