SHIVAMOGGA KSRTC BUS ನಿಲ್ದಾಣದಲ್ಲಿ ದಾವಣಗೆರೆ ಜಿಲ್ಲೆ ಹೊನ್ನಾಳಿ ಮೂಲದ ವ್ಯಕ್ತಿಗೆ ಶಾಕ್! ಚಡ್ಡಿ ಜೇಬಿನಲ್ಲಿಟ್ಟಿದ್ದ ಆರವತ್ತು ಸಾವಿರ ರೂಪಾಯಿ ಕಳವು
Sixty thousand rupees belonging to a person hailing from Honnali in Davangere district was stolen from Shimoga KSRTC BUS station ಶಿವಮೊಗ್ಗ KSRTC BUS ನಿಲ್ದಾಣದಲ್ಲಿ ದಾವಣಗೆರೆ ಜಿಲ್ಲೆ ಹೊನ್ನಾಳಿ ಮೂಲದ ವ್ಯಕ್ತಿಗೆ ಸೇರಿದ ಆರವತ್ತು ಸಾವಿರ ರೂಪಾಯಿ ಕಳ್ಳತನವಾಗಿದೆ

KARNATAKA NEWS/ ONLINE / Malenadu today/ Sep 19, 2023 SHIVAMOGGA NEWS
ಶಿವಮೊಗ್ಗ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಮತ್ತೊಂದು ಕಳ್ಳತನ ನಡೆದಿದ್ದು ವ್ಯಕ್ತಿಯೊಬ್ಬರು ಚಡ್ಡಿ ಜೇಬಿನಲ್ಲಿ ಇಟ್ಟು ಕೊಂಡು ಬಂದಿದ್ದ ಆರವತ್ತು ಸಾವಿರ ರೂಪಾಯಿ ಕಳ್ಳತನ ಮಾಡಲಾಗಿದೆ.
ನಡೆದಿದ್ದೇಗೆ ಘಟನೆ
ಶಿವಮೊಗ್ಗದ ಶಾಲೆಯೊಂದರಲ್ಲಿ ಓದುತ್ತಿರುವ ತಮ್ಮ ಮರಿಮೊಮ್ಮಗನ ಫೀಜ್ ಕಟ್ಟಲು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನಿಂದ ಶಿವಮೊಗ್ಗಕ್ಕೆ ಬಂದಿದ್ದರು. ಬಳಿಕ ತಮ್ಮ ಮೊಮ್ಮಗಳ ಜೊತೆ ಶಾಲೆಗೆ ಹೋಗಿದ್ದಾರೆ. ಅಲ್ಲಿ ಹಬ್ಬ ಇದ್ದು, ಹಬ್ಬ ಮುಗಿದ ಬಳಿಕ ಬಂದು ಫಿಸ್ ಕಟ್ಟಲು ತಿಳಿಸಿದ್ದಾರೆ.
ಅದರಂತೆ ಫೀಜ್ ಕಟ್ಟಲು ತಂದಿದ್ದ ಆರವತ್ತು ಸಾವಿರ ರೂಪಾಯಿಯನ್ನು ದೂರುದಾರರು ವಾಪಸ್ ತಮ್ಮ ಚಡ್ಡಿ ಜೇಬಿನಲ್ಲಿ ಹಾಕಿಕೊಂಡಿದ್ದಾರೆ. ಬಳಿಕ ಶಿವಮೊಗ್ಗದ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ತೆರಳಿ ತಮ್ಮೂರಿನ ಬಸ್ಗಾಗಿ ಕಾದಿದ್ದಾರೆ.
ಈ ಮಧ್ಯೆ ಸಾಸ್ವೆಹಳ್ಳಿ ಕಡೆಗೆ ಹೋಗುವ ಬಸ್ ಬಂದಿದೆ. ಬಸ್ ನ್ನ ಹತ್ತಲು ಹೋದಾಗ ದೂರುದಾರರ ಜೇಬಿನಿಂದ ಕೀ ಬಂದಿದೆ. ಬಿದ್ದಿದ್ದ ಕೀಯನ್ನು ತೆಗೆದು ಅನುಮಾನ ಬಂದು ಚಡ್ಡಿ ಜೇಬಿನಲ್ಲಿ ಇರುವ ದುಡ್ಡನ್ನ ಹುಡುಕಾಡಿದ್ದಾರೆ. ಆದರೆ ಜೇಬಿನಲ್ಲಿದ್ದ ದುಡ್ಡನ್ನು ಯಾರೋ ಕಳ್ಳತನ ಮಾಡಿದ್ದರು. ವಿಷಯ ಗೊತ್ತಾಗುತ್ತಲೇ ಸಮೀಪದ ದೊಡ್ಡಪೇಟೆ ಪೊಲೀಸ್ ಸ್ಠೇಷನ್ಗೆ ಬಂದು ಸಂತ್ರಸ್ತರು ದೂರು ದಾಖಲಿಸಿದ್ದು , ಪ್ರಕರಣ ದಾಖಲಾಗಿದೆ.
ಇನ್ನಷ್ಟು ಸುದ್ದಿಗಳು
-
ಶಿವಮೊಗ್ಗ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ! ಯಾವಾಗ ಸಂಚರಿಸಲಿದೆ ಬಹುನಿರೀಕ್ಷಿತ ಟ್ರೈನ್?
-
ಗಣೇಶೋತ್ಸವ ಹಾಗೂ ಈದ್ ಮಿಲಾದ್ ! ಸೌಹಾರ್ದ ಸಭೆಯಲ್ಲಿ ಸಚಿವರು & ಶಾಸಕರ ಒಂದೇ ಮಾತು! ಏನೇನು ನಡೀತು ವಿವರ ಇಲ್ಲಿದೆ