ಶಿವಮೊಗ್ಗ ಜಿಲ್ಲೆಗೆ ಪಂಚರತ್ನ ಯಾತ್ರೆ ಪ್ರವೇಶ! ಹೆಚ್ಡಿಕೆಗೆ ಅಡಿಕೆ ತಟ್ಟೆಯ ಹಾರ!
Jd(S)'s Pancharatna Yatra has entered Shivamogga district. The yatra will begin at Bhadravathi today.
MALENADUTODAY.COM | SHIVAMOGGA | #KANNADANEWSWEB
ಶಿವಮೊಗ್ಗ ಜಿಲ್ಲೆಗೆ ಜೆಡಿಎಸ್ನ ಪಂಚರತ್ನ ಯಾತ್ರೆ ಆಗಮಿಸಿದೆ. ಭದ್ರಾವತಿಯ ಕಾರೆಹಳ್ಳದ ಮೂಲಕ ತಾಲ್ಲೂಕನ್ನಪ್ರವೇಶಿಸಿದ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿಯವರಿಗೆ ಅದ್ದೂರಿ ಸ್ವಾಗತವೇ ವ್ಯಕ್ತವಾಯಿತು
#SHIVAMOGGAAIRPORT : ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮೊದಲ ವಿಮಾನ! ವಾಯುಸೇನೆ ವಿಮಾನ ಲ್ಯಾಂಡಿಂಗ್ ವಿಡಿಯೋ
69 ನೇ ದಿನದ ಪಂಚರತ್ನ ರಥಯಾತ್ರೆ ಕಾರೇಹಳ್ಳಿ, ಕೆಂಪೇಗೌಡ ನಗರ, ಬಾರಂದೂರು ಕೆಂಚೇನಹಳ್ಳಿ, ಮಾವಿನಕೆರೆ, ತಾಸ್ಕೆಂಟ್ ನಗರ, ಹೇರೇಹಳ್ಳಿ, ಮಾರುತಿ ನಗರ, ಶಿವಾನಿ ಕ್ರಾಸ್, ಗೌರಾಪುರ, ಅಂತರಗಂಗೆ, ಕಾಚಗೋಂಡನಹಳ್ಳಿ, ಅಶ್ವಥ್ ನಗರ, ಶಿವಾಜಿ ಸರ್ಕಲ್, ರಂಗಪ್ಪ ವೃತ್ತ, ಮಾಧವಾಚಾರ್ ಸರ್ಕಲ್, ಹಾಲಪ್ಪ ವೃತ್ತ, ಅಂಡರ್ ಬ್ರಿಡ್ಜ್ ಮೂಲಕ ಕೆಎಸ್ಆರ್ ಟಿ ಸಿ ಡಿಪೋ, ಅಂಬೇಡ್ಕರ್ ವೃತ್ತದಿಂದ ಕನಕ ಮಂಟಪ ತಲುಪಲಿದೆ. ಅಲ್ಲಿಂದ ಬಳಿಕ ನವುಲೆ ಬಸಾಪೂರಕ್ಕೆ ತೆರಳಿ ಗ್ರಾಮವಾಸ್ಯವ್ಯ ಕೈಗೊಳ್ಳಲಿದ್ಧಾರೆ ಜೆಡಿಎಸ್ ವರಿಷ್ಟ ಹೆಚ್ಡಿ ಕುಮಾರಸ್ವಾಮಿ.
#SHIVAMOGGAAIRPORT : ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮೊದಲ ವಿಮಾನ! ವಾಯುಸೇನೆ ವಿಮಾನ ಲ್ಯಾಂಡಿಂಗ್ ವಿಡಿಯೋ
ಇನ್ನೂ ಪಂಚರತ್ನ ಯಾತ್ರೆಯಲ್ಲಿ ಮಾಜಿ ಸಿಎಂಗೆ ಹಾಕುತ್ತಿರುವ ಹಾರಗಳೇ ವಿಶೇಷವಾಗಿ ಸುದ್ದಿಯಾಗುತ್ತಿದ್ದು, ಭದ್ರಾವತಿಯಲ್ಲಿಯು ಹೆಚ್ಡಿಕೆ ಅಭಿಮಾನಿಗಳು, ಅಡಿಕೆ ತಟ್ಟೆಯಿಂದ ಮಾಡಿ ಹಾರವನ್ನು ವಿಶೇಷವಾಗಿ ಹಾಕಿ ಸ್ವಾಗತಿಸಿದರು, ಇನ್ನೂ ಜೆಡಿಎಸ್ ಕಾರ್ಯಕರ್ತರು ಬೃಹತ್ ಹೂವಿನ ಹಾರವನ್ನು ಸಹ ಹಾಕಿದರು. ಕುಮಾರಸ್ವಾಮಿಯವರ ಜೊತೆ ಭದ್ರಾವತಿ ಜೆಡಿಎಸ್ ಅಭ್ಯರ್ಥಿ ಶಾರದಾ ಅಪ್ಪಾಜಿಗೌಡ, ಎಂಎಲ್ ಸಿ ಬೋಜೇಗೌಡ, ಶಿವಮೊಗ್ಗ ಜೆಡಿಎಸ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದಾರೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com