BREAKING NEWS / ಶಿವಮೊಗ್ಗದಲ್ಲಿ ಆಪರೇಷನ್​ ಜೆಡಿಎಸ್​/ ಬಿಜೆಪಿ-ಕಾಂಗ್ರೆಸ್​ನಿಂದ ಮುಖಂಡರ ಪಕ್ಷಾಂತರ

BREAKING NEWS / Operation JD(S) in Shimoga / Leaders from THE BJP-Congress joined the JD(S)

BREAKING NEWS /  ಶಿವಮೊಗ್ಗದಲ್ಲಿ ಆಪರೇಷನ್​ ಜೆಡಿಎಸ್​/ ಬಿಜೆಪಿ-ಕಾಂಗ್ರೆಸ್​ನಿಂದ  ಮುಖಂಡರ ಪಕ್ಷಾಂತರ

KARNATAKA NEWS/ ONLINE / Malenadu today/ Apr 24, 2023 GOOGLE NEWS


ಶಿವಮೊಗ್ಗ/  ಇತ್ತೀಚೆಗೆ ಜೆಡಿಎಸ್ ಪಕ್ಷಕ್ಕೆ ಸೇರಿದ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ನಾಯಕತ್ವದಲ್ಲಿ ಇಂದು ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಜೆಡಿಎಸ್‌ ಸೇರ್ಪಡೆಗೊಂಡರು. 

ಜೊತೆಯಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ದೀರರಾಜ್ ಹೊನ್ನವಿಲೆ ರವರು ಇಂದು ಬಿಜೆಪಿ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಇವರು ಶಿವಮೊಗ್ಗ ಗ್ರಾಮಾಂತರ ಕ್ಷೆತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷರ ಆಗಮನದ ವೇಳೆ ಅವರ ಪ್ಲೆಕ್ಸ್ ಹರಿದು ಹಾಕಿದ್ದ ಘಟನೆ ನಡೆದಿತ್ತು. ಈ  ಘಟನೆಯ ನಂತರ ದೀರರಾಜ್ ಹೊನ್ನವಿಲೆ ಹೆಸರು ಮುನ್ನೆಲೆಗೆ ಬಂದಿತ್ತು. 

ಪ್ರಸನ್ನಕುಮಾರ್ ಬೆಂಬಲಿಗರ ಸೇರ್ಪಡೆ

ಜಿಲ್ಲಾ ಜೆಡಿಎಸ್ ಕಚೇರಿ ಸಭಾಂಗ ಣದಲ್ಲಿ ನಡೆದ ಸಮಾರಂಭದಲ್ಲಿ ಉತ್ತರ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ದೀಪಕ್ ಸಿಂಗ್, ಉತ್ತರ ಬ್ಲಾಕ್ ಕಾಂಗ್ರೆಸ್‌ ಉಪಾಧ್ಯಕ್ಷ ದಯಾನಂದ್, 

ಸಾಮಾಜಿಕ ಜಾಲತಾಣದ ಮುಖ್ಯಸ್ಥ ಮಂಜುನಾಥ್‌, ಮುಜಿಬುಲ್ಲಾ ಜಿಲ್ಲಾ ಕಾಂಗ್ರೆಸ್‌ ಕಾರ್ಯದರ್ಶಿಗಳಾದ ಮೊದಲಿಯಾರ್, 

ಮಂಜುನಾಥ್, ಕೃಷ್ಣಪ್ಪ, ಡಿ. ಸುನಿಲ್, ಚಂದ್ರಶೇಖರ್, ವೆಂಕಟೇಶ್, ರಿಯಾಜ್, ಜಬೀ, ಶಾಂತಮ್ಮ, ಚೇತನ್ ನಾಯಕ್, ಶ್ರೀನಾಥ್, ಪ್ರದೀಪ್‌ ರಾಘವೇಂದ್ರ ಭಾರದ್ವಾಜ್, ಧನ೦ಜಯ ಸೇರಿದಂತೆ 

ವಿವಿಧವಾರ್ಡ್‌ಗಳ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಘಟಕಗಳ ಪದಾಧಿಕಾರಿಗಳು ಸೇರಿದಂತೆ ನೂರಾರು ಕಾರ್ಯಕರ್ತರು ಕಾಂಗ್ರೆಸ್ ತೊರೆದು ಜೆಡಿಎಸ್‌ ಸೇರ್ಪಡೆಗೊಂಡರು.

ಪಕ್ಷಕ್ಕೆ ಬಲ

ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಎಂ. ಶ್ರೀಕಾಂತ್‌ ಮಾತನಾಡಿ, ಕೆ.ಬಿ. ಪ್ರಸನ್ನಕುಮಾರ್ ನಾಯಕತ್ವದಲ್ಲಿ ಪಾಲಿಕೆ ಹಾಗೂ ನಗರಸಭೆ ಮಾಜಿ ಸದಸ್ಯರು, ಕಾಂಗ್ರೆಸ್‌ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಪಕ್ಷ ಸೇರ್ಪಡೆಯಾಗಿದ್ದಾರೆ. 

ವಿಧಾನಸಭಾ ಅಭ್ಯರ್ಥಿ ಆಯನೂರು ಮ೦ಜುನಾಥ್‌ ಅವರ ಬಲಪಡಿಸಲು, ಶಿವಮೊಗ್ಗದಲ್ಲಿ ಶಾಂತಿ ನೆಲೆಸಲು ಹಾಗೂ ಪಕ್ಷಕ್ಕೆ ಬಲ ತುಂಬಲು ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಅವರನ್ನು ಸ್ವಾಗತಿಸುತ್ತೇನೆ ಎಂದರು. 

ಆಯನೂರು ಮಂಜುನಾಥ್ ಶಾಸಕರಾಗುತ್ತಾರೆ.

ನಗರದ ಅಭ್ಯುದಯಕ್ಕಾಗಿ, ಶಾಂತಿ ಸ್ಥಾಪಿಸಲು ಆಯನೂರು ಮಂಜುನಾಥ್‌ರನ್ನು ಶಾಸಕರನ್ನಾಗಿ ಮಾಡಲು ಕಾಂಗ್ರೆಸ್‌ ಪಕ್ಷದ ವಿವಿಧ ಹುದ್ದೆಗಳನ್ನು ತೊರೆದು ಎಲ್ಲರ ಹಿತಕ್ಕಾಗಿ ಕಾಂಗ್ರೆಸ್ ಪಕ್ಷ ಜೆಡಿಎಸ್ ಪಕ್ಷಕ್ಕೆ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ ಎಂದು ಕೆ.ಬಿ. ಪ್ರಸನ್ನಕುಮಾರ್ ತಿಳಿಸಿದ್ರು. 

Malenadutoday.com Social media