ಕಮಿಟಿ ವಿಚಾರದಲ್ಲಿ ಗಲಾಟೆ! ಮಾತು ಮಾತಲ್ಲೆ ಯುವಕನಿಗೆ ಚಾಕುವಿನಿಂದ ಇರಿತ!

A youth was found murdered in Shikaripura town of Shivamogga districtಶಿವಮೊಗ್ಗ ಜಿಲ್ಲೆ ಶಿಕಾರಿಪುರ ಪಟ್ಟಣದಲ್ಲಿ ಯುವಕನ ಕೊಲೆಯಾಗಿದೆ

ಕಮಿಟಿ ವಿಚಾರದಲ್ಲಿ ಗಲಾಟೆ! ಮಾತು ಮಾತಲ್ಲೆ ಯುವಕನಿಗೆ ಚಾಕುವಿನಿಂದ ಇರಿತ!

KARNATAKA NEWS/ ONLINE / Malenadu today/ Aug 21, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನಲ್ಲಿ ವ್ಯಕ್ತಿಯೊಬ್ಬನನ್ನ ಇರಿದು ಕೊಲೆ ಮಾಡಲಾಗಿದೆ. ಇಲ್ಲಿನ  ಕೆಹೆಚ್​ಪಿ ಕಾಲೋನಿಯಲ್ಲಿ ಈ ಘಟನೆ ಸಂಭವಿಸಿದೆ. 

ನಡೆದಿದ್ದೇನು? 

ಈದ್ ಮಿಲಾದ್ ಹಬ್ಬ ಆಚರಣೆ ಕಮಿಟಿ ರಚನೆ ವಿಚಾರವಾಗಿ ಮುಸ್ಲಿಂ ಸಮುದಾಯದ ಸಭೆ ನಡೆಯುತ್ತಿತ್ತು. ಈ ವೇಳೆ ಎರಡು ಗುಂಪುಗಳ ನಡುವೆ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಎದುರಾಗಿದೆ. ಅಲ್ಲದೆ ಇದೇ ವಿಚಾಋಕ್ಕೆ ಪರಸ್ಪರ ಗಲಾಟೆಯಾಗಿದ್ದು, ಗಲಾಟೆಯಲ್ಲಿ ಯುವಕನೊಬ್ಬನಿಗೆ ಚಾಕುವಿನಿಂದ ಇರಿಯಲಾಗಿದೆ. 32 ವರ್ಷದ ಜಾಫರ್​ ಎಂಬವರು ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಶಿಕಾರಿಪುರ ಪೊಲೀಸ್ ಸ್ಟೇಷನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸ್ತಿದ್ದಾರೆ.  

ಕಾರಿಗೆ ಕೈ ಅಡ್ಡಹಾಕಿ ಡ್ರಾಪ್​ ಕೇಳಿದ ಸ್ವೀಟಿ ಮಾಡಿದ್ದೇನು ಗೊತ್ತಾ? 24 ಗಂಟೆಯಲ್ಲಿ NT ROAD ಕ್ರೈಂ ಕೇಸ್ ಬಯಲು!

ಶಿವಮೊಗ್ಗ ಸಿಟಿಯಲ್ಲಿ ಬೆಂಗಳೂರು ಸ್ಟೈಲ್​ನಲ್ಲಿ ನಡೆದಿದ್ದ ರಾಬರಿ ಪ್ರಕರಣವನ್ನು ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಪೊಲೀಸರು ಭೇದಿಸಿದ್ದಾರೆ. ಪ್ರಕರಣ ಸಂಬಂಧ ಓರ್ವ ಮಂಗಳಮುಖಿಯನ್ನು ಅರೆಸ್ಟ್ ಮಾಡಿದ್ದು, ಈ ಸಂಬಂಧ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆಗೊಳಿಸಿದ್ದಾರೆ. 



ನಡೆದಿದ್ದೇನು? 

ಇವತ್ತಿಗೆ ಎರಡು ದಿನಗಳ ಹಿಂದೆ, ಅಂದರೆ ದಿನಾಂಕ: 19-08-2023 ರ ಮಧ್ಯರಾತ್ರಿ 01-15 ಸುಮಾರಿಗೆ ವ್ಯಕ್ತಿಯೊಬ್ಬರು  ಶಿವಮೊಗ್ಗ ಎನ್.ಟಿ ರಸ್ತೆಯಲ್ಲಿ ಕಾರಿನಲ್ಲಿ ಬರುತ್ತಿದ್ದರು. ಈ ವೇಳೇ ಕಾರಿಗೆ ಕೈ ಅಡ್ಡ ಹಾಕಿ ಮಹಿಳೆಯೊಬ್ಬರು ಡ್ರಾಫ್ ಕೇಳಿದ್ಧಾರೆ. ಆನಂತರ ಕಾರನ್ನು ಹತ್ತಿಕೊಂಡ ಆಕೆ, ಕಾರ್ ಡ್ರೈವರ್​ಗೆ ಚಾಕು ತೋರಿಸಿ ಹೆದರಿಸಿ ಕಾರನ್ನು ವಾಪಾಸ್ ಎನ್.ಟಿ ರಸ್ತೆ ಕಡೆ ತಿರುಗಿಸಲು ಹೇಳಿದ್ದಾಳೆ. ಅಲ್ಲದೆ,  ಮ್ಯಾಕ್ಸ್ ಆಸ್ಪತ್ರೆಯ ಎದುರುಗಡೆ ಕಾರ್ ನ್ನು ನಿಲ್ಲಿಸಿ ಡ್ರೈವರ್​ನಿಂದ  ಸುಮಾರು 92,000/-ರೂ ಬೆಲೆಬಾಳುವ 23 ಗ್ರಾಂ ತೂಕದ ಬಂಗಾರದ ಸರವನ್ನು ಕಿತ್ತುಕೊಂಡು ಅಲ್ಲಿಂದ ಪರಾರಿಯಾಗಿದ್ದಾಳೆ. 

ಈ ಪ್ರಕರಣವನ್ನು ಇದೀಗ ದೊಡ್ಡಪೇಟೆ ಪೊಲೀಸರು ಭೇದಿಸಿದ್ದಾರೆ. ಮಂಗಳಮುಖಿ ಮಹಿಳೆಯಾದ ರವಿ @ ಸ್ವೀಟಿಯನ್ನ ಪೊಲೀಸರು ಬಂಧಿಸಿದ್ದಾರೆ. ಈಕೆಯಿಂದ  92,000/-ರೂ ಬೆಲೆಬಾಳುವ 23 ಗ್ರಾಂ ತೂಕದಬಂಗಾರದ ಸರವನ್ನು  ಜಪ್ತಿ ಮಾಡಿದ್ದಾರೆ.ಈ ತನಿಖಾ ತಂಡದಲ್ಲಿ ಇನ್ಸ್ ಪೆಕ್ಟರ್  ಅಂಜನ್ ಕುಮಾರ್,  ವಸಂತ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್,   ಮಂಜುನಾಥ ಪ್ರೋ.ಡಿವೈಎಸ್ಪಿ, ಚಂದ್ರಶೇಖರ್, ಎಎಸ್‌ಐ, ಹೆಚ್ ಸಿ-288 ಲಚ್ಚಾನಾಯ್ಕ, ಪಿಸಿ-1321 ಚಂದ್ರನಾಯ್ಕ, ಪಿಸಿ-1503 ನಿತಿನ್, ಪಿಸಿ-1484 ರಮೇಶ್ ರವರು ಪಾಲ್ಗೊಂಡಿದ್ದರು. 

  

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು