ಪತ್ರಕರ್ತನ ಮಿತ್ರ ಆದರ್ಶನ ನೆನಪಿಗೆ ಒಂದು ವರ್ಷ!
A year in the memory of adarsh, a friend of the journalist!
ಶಿವಮೊಗ್ಗ ಪ್ರೆಸ್ ಟ್ರಸ್ಟ್ ಬ್ರಾಂಡ್ ಅಂಬಾಸಡರ್ ನಂತಿದ್ದ ಆದರ್ಶ ಸಾವನ್ನಪ್ಪಿದಾಗ ಕೇವಲ ಶಿವಮೊಗ್ಗ ಜಿಲ್ಲೆಯ ಪತ್ರಕರ್ತರಷ್ಟೆ ಅಲ್ಲದೆ ಸಂಘ-ಸಂಘಟನೆಗಳು, ರಾಜಕೀಯ ಮುಖಂಡರು, ಸಮಾಜದ ಗಣ್ಯರು ಸಹ ಸಂತಾಪ ವ್ಯಕ್ತಪಡಿಸಿದ್ದರು, ಆತನ ಸ್ನೇಹಿತರು ಎಲ್ಲೆಡೆ ಬ್ಯಾನರ್ ಹಾಕಿ ಮತ್ತೆ ಹುಟ್ಟಿ ಬಾ ಗೆಳೆಯ ಎಂದು ಬರೆಸಿ ಕಂಬನಿ ಮಿಡಿದಿದ್ದರು.
ಪತ್ರಿಕಾ ಭವನದ ಕಚೇರಿ ಸಹಾಯಕ ಆದರ್ಶ ಅಕಾಲಿಕವಾಗಿ ಸಾವನ್ನಪ್ಪಿದ್ದು, ಶಿವಮೊಗ್ಗ ನಗರದ ಪತ್ರಕರ್ತರಿಗೆ ಸಹಿಸಲಾಗದಷ್ಟು ದುಃಖ ತಂದಿತ್ತು. ಆತನಿಗೆ ಶ್ರದ್ಧಾಂಜಲಿ ಅರ್ಪಿಸುವ ಸಂದರ್ಭದಲ್ಲಿ ಹಿರಿಯ ಪತ್ರಕರ್ತರು ಕಣ್ಣೀರಿಟ್ಟು, ಆದರ್ಶನ ಗುಣವನ್ನು ಕೊಂಡಾಡಿದ್ದರು. ಪತ್ರಕರ್ತರ ಮಿತ್ರನೆನಿಸಿದ್ದ ಆತನ ಅಗಲಿಕೆ ಹಾಗೂ ಆತನ ನೆನಪಿಗೆ ಒಂದು ವರ್ಷ. ಈ ಒಂದು ವರ್ಷದಲ್ಲಿ ಹಲವು ಸಹ ಆದರ್ಶನ ಹೆಸರನ್ನು ಪತ್ರಕರ್ತರು ಬಿಕ್ಕಳಿಸಿದ್ದಾರೆ. ಪ್ರತಿ ಹೊತ್ತಿನಲ್ಲಿಯು ನೆನೆದಿದ್ದಾರೆ. ಅವನಿದಿದ್ದರೇ ಎಂದು ಸ್ಮರಿಸಿದ್ದಾರೆ. ಟುಡೆ ತಂಡವು ಸಹ ಆತನನ್ನು ನೆನಪಿಸಿಕೊಳ್ಳುತ್ತಿದೆ. ಆತನಿಗಾಗಿಯೆ ಈ ನೆನಪಿನಂಗಳದ ಸುದ್ದಿ ಪ್ರಕಟಿಸುತ್ತಿದೆ.
ಆದರ್ಶ ಅಗಲಿದ ದಿನ, ಆತನ ಬದುಕಿನ ಚಿತ್ರಣದ ಬಗ್ಗೆ ಬರೆದ ಬರಹ ಇಲ್ಲಿದೆ ಓದಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com