ದೀವರ ಸಾಂಸ್ಕೃತಿಕ ವೈಭವ ಹೇಗಿತ್ತು ನೋಡಿ! ಅರಮನೆ ಮೈದಾನದಲ್ಲಿ ಮುಂದಿನ ಸಮಾವೇಶ ! ಸಚಿವರು ಹೇಳಿದ್ದೇನು?

This Article Written by / Malenadu Today / ನವೆಂಬರ್ 27, 2023

ದೀವರ ಸಾಂಸ್ಕೃತಿಕ ವೈಭವ ಹೇಗಿತ್ತು ನೋಡಿ! ಅರಮನೆ ಮೈದಾನದಲ್ಲಿ ಮುಂದಿನ ಸಮಾವೇಶ ! ಸಚಿವರು ಹೇಳಿದ್ದೇನು?

SHIVAMOGGA NEWS / Malenadu today/ Nov 27, 2023 | Malenadutoday.com  

SHIVAMOGGA | ಸಂಸ್ಕೃತಿ ತೇಲುಹೋಗುತ್ತಿರುವುದನ್ನ ಹಿಡಿದು ದೀವರ ಸಂಸ್ಕೃತಿಯನ್ನು ನೆನಪಿಸಲಾಗಿದೆ. ಈ ಸಂಸ್ಕೃತಿ ಉಳಿಸಲು ಒಗ್ಗಟ್ಟಾಗಬೇಕು ಎಂದು ಯೋಗೇಂದ್ರ ಅವಧೂತ ಹೇಳಿದ್ದಾರೆ..

ಈಡಿಗರ ಭವನದಲ್ಲಿ ಸಾಂಸ್ಕೃತಿಕ ವೈಭವ 

ಶಿವಮೊಗ್ಗ ನಗರದಲ್ಲಿರುವ  ಈಡಿಗರ ಭವನದಲ್ಲಿ ಭಾನವಾರ ಧೀರ ಧಿವರ ಬಳಗ, ಹಾಗೂ ಹಳೇಪೈಕ ದೀವರ ಸಂಸ್ಕೃತಿ ಸಂವಾದ ಬಳಗದಿಂದ ಆಯೋಜಿಸಿದ್ದ ದೀವರ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ  ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

Malenadu Today Shivamogga

ಯೂಟ್ಯೂಬ್​ ಮತ್ತು ಫೇಸ್​ಬುಕ್ 

ಯೂಟ್ಯೂಬ್ ಫೇಸ್‌ಬುಕ್‌ನಲ್ಲಿ ಸಂಸ್ಕೃತಿ ಹರಿದುಹೋಗ್ತಾ ಇದೆ. ಇದಕ್ಕಾಗಿ ದೀವರ ಸಾಂಸ್ಕೃತಿಕ ವೈಭವ ದೊಡ್ಡದಾಗಿ ಬಿಂಬಿಸಬೇಕಿದೆ. ಲಕ್ಷ್ಮೀ ಪೂಜೆ ಮಾಡುವುದು ಸಹ ಒಂದು ಸಂಸ್ಕೃತಿಯನ್ನ ಬಿಂಬಿಸುತ್ತದೆ. ಪೂಜೆ, ಪುನಸ್ಕಾರದಲ್ಲಿ ದೀವರ ಸಮಾಜ ಹಿಂದುಳಿದಿದೆ. ಕಳಶ ಇಡಲಾಗುತ್ತದೆ, ಅದಕ್ಕೆ ಹೆಸರೇನು ಇಡಬೇಕು ಗೊತ್ತಿಲ್ಲ. ಯಾವ ರೀತಿಯ ದೇವರನ್ನ ಕರೆಯಬೇಕು ಗೊತ್ತಿಲ್ಲ ಎಂದರು.

Malenadu Today Shivamogga

ತೆಂಗಿನಕಾಯಿ ದೇವರ ತಲೆ, ವೀಳ್ಯವನು ಮೂರು ಎಲೆ ಇಡಬೇಕು.ಇದು ದೇವರ ಸಂಕೇತವಾಗಿದೆ, ದೇವರ ಆರಾಧನೆ ಮಾಡಲಾಗುತ್ತಿದೆ. ಮಹಿಳೆಯರಿಗೆ ಮಂತ್ರ ಬಾರದ ಕಾರಣ ಮೂರು ಬಾರಿ ಅಕ್ಷತೆ ಹಾಕಿ ದೇವಿಯನ್ನು ಆಹ್ವಾನಿಸಲಾಗುತ್ತದೆ. ಹೀಗೆ ಲಕ್ಷ್ಮೀಪೂಜೆ ಮಾಡಲಾಗುತ್ತದೆ.

READ : ಇಂಜಿನಿಯರ್​ ವಿದ್ಯಾರ್ಥಿ ಮೇಲೆ ಹಲ್ಲೆ! ಮುಸ್ಸಂಜೆ ಹೊತ್ತಲ್ಲಿಯೇ ನಡೆಯುತ್ತಿದ್ಯಾ ರಾಬರಿ!?

ನಿಟ್ಟೂರು ನಾರಾಯಣಗುರು ಸಂಸ್ಥಾನದ ರೇಣುಕಾನಂದ ಸ್ವಾಮೀಜಿ

ನಿಟ್ಟೂರು ನಾರಾಯಣಗುರು ಸಂಸ್ಥಾನದ ರೇಣುಕಾನಂದ ಸ್ವಾಮೀಜಿ, ಸಂಸ್ಕೃತಿ ಉಳಿಯಬೇಕಿದೆ ಮತ್ತು ಬೆಳಸುವ ಮೂಲಕ ಪಾಲಿಸಿಕೊಂಡು ಹೋಗಬೇಕಿದೆ. ದೀವರ ಸಂಸ್ಕೃತಿ ನಮ್ಮಪೀಳಿಗೆಗೆ ಧಾರೆ ಎರೆಯುವ ಕೆಲಸವಾಗಲಿ ಆಶಿಸಿದರು. ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಕಾಗೋಡು ಚಳಿವಳಿಯೂ ಒಂದು ಸಾಂಸ್ಕೃತಿಕ ಹೋರಾಟ. ಆದ್ದರಿಂದ ಈ ಕಾರ್ಯಕ್ರಮದಲ್ಲಿ ಅದರ ಭಾಗವನ್ನು ಅಳವಡಿಸಿಕೊಳ್ಳಬೇಕಿತ್ತು. ಆಗ ಈ ಕಾರ್ಯಕ್ರಮ ಚರಿತ್ರೆಯಲ್ಲಿ ಶಾಶ್ವತವಾಗಿ ಉಳಿಯುತ್ತಿತ್ತು. ಮುಂದಿನ ದಿನದಲ್ಲಿ ಈ ಕುರಿತ ಚಿಂತನೆ ನಡೆಯಲಿ ಎಂದರು. 

Malenadu Today Shivamogga

ದೀವರ ಸಾಂಸ್ಕೃತಿಕ ವೈಭವ ಸಂಚಾಲಕ ನಾಗರಾಜ ನೇರಿಗೆ ಮಾತನಾಡಿ, ಸಂಸ್ಕೃತಿ, ಕಲೆಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಕೆಲಸ ಆಗಬೇಕಿದೆ. ದೀವರು ಎಂದರೆ, ಮಲೆನಾಡ ಸಂಸ್ಕೃತಿಯ ಬುಡಗಟ್ಟು ಈ ಬಳಗ ಜನರ ಮನದಲ್ಲಿ ನೋಂದಣಿ ಆಗಿದೆ. ಹಳ್ಳಿಯ ರೈತನಿಂದ ಗಡಿಯಲ್ಲಿನ ಯೋಧ ಕೂಡ ಈ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದರು.ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಎಸ್. ರಾಮಪ್ಪ, ಹಿರಿಯ ಹಸೆ ಚಿತ್ತಾರ ಕಲಾವಿದೆ ಲಕ್ಷ್ಮಮ್ಮ ಗಡೇಮನೆ, ಅಂತರ ರಾಷ್ಟ್ರೀಯ ಜಾನಪದ  (ಡೊಳ್ಳುಕುಣಿತ) ಕಲಾವಿದ ಬಿ.ಟಾಕಪ್ಪ ಕಣ್ಣೂರು ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ‘ಧೀರ ದೀವರು’ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು. 

Malenadu Today Shivamogga

ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿ.10ರಂದು ಸಮಾವೇಶ: ಮಧು ಬಂಗಾರಪ್ಪ 

ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿ.10 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಆರ್ಯ ಈಡಿಗ ಹಾಗೂ ಉಪ ಪಂಗಡಗಳ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಮಾಹಿತಿ ನೀಡಿದರು. ಈ ಸಭೆಯಲ್ಲಿ ಈಡಿಗ ಸಮಾಜದ ಅಹವಾಲು ಸ್ವೀಕರಿಸಲಿದ್ದಾರೆ. ಆದ್ದರಿಂದ ಆರ್ಯ ಈಡಿಗ ಸಂಘ ವತಿಯಿಂದ ನಗರದ ಸುವರ್ಣ ಸಂಸ್ಕೃತಿ ಭವನ ದಲ್ಲಿನ.30ರಂದು ಪೂರ್ವಭಾವಿ ಸಭೆ ಆಯೋಜಿಸಲಾಗಿದೆ. ಸಮಾಜದ ಮುಖಂಡರು ಸಭೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು.

Malenadu Today Shivamogga

READ :ನವೆಂಬರ್​ 26 ರಂದು ಶಿವಮೊಗ್ಗ ಈಡಿಗರ ಭವನದಲ್ಲಿ ದೀವರ ಸಾಂಸ್ಕೃತಿಕ ವೈಭವ ಕಾರ್ಯಕ್ರಮ!

ವಿವಿಧ ಜಿಲ್ಲೆಗಳಿಂದ ಆಗಮನ

Malenadu Today Shivamogga

ದೀವರ ಸಾಂಸ್ಕೃತಿಕ ವೈಭವ ಕಾರ್ಯಕ್ರಮಕ್ಕೆ ಬೆಳಗಾವಿ, ಹಾವೇರಿ, ತುಮಕೂರು, ಬೆಂಗಳೂರು, ಮಂಡ್ಯ, ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆ ಭಾಗಗಳಿಂದ ಈಡಿಗ ಸಮುದಾಯದವರು ಪಾಲ್ಗೊಂಡಿದ್ದರು. ದೀವರ ಸಾಂಸ್ಕೃತಿಕ ವೈಭವದ ಕುರುಹುಗಳಾದ ಡೊಳ್ಳು, ಕೋಲಾಟ, ಅಂಟಿಕೆ-ಪಿಂಟಿಕೆ, ಸಂಪ್ರದಾಯದ ಹಾಡುಗಳು, ಭರತನಾಟ್ಯ, ಇಡಕಲು ಪೂಜೆ ಸೇರಿದಂತೆ ಜನಪದ ಹಾಡಗಳಿಗೆ ನೆರೆದಿದ್ದ ಸಮುದಾಯ ದನಿಯಾದರು. 

ಮುಂದಿನ ಸುದ್ದಿ ಒದಿ

Leave a Comment