ಕದ್ದ ಚಿನ್ನದಿಂದಲೇ ಕಳ್ಳರಿಗೆ ಮೋಸ/ ಮಹಿಳೆ ಎದುರು ಯಾಮಾರಿದ ಸರಗಳ್ಳರು

ಹೀಗಾಗಿ ತಾಳಿಸರವನ್ನು ಪೇಪರ್​ನಲ್ಲಿ ಬಚ್ಚಿಟ್ಟುಕೊಳ್ಳಿ ಎಂದಿದ್ದಾರೆ. ಅವರು ಮಾಡಿದ ಗಾಬರಿಗೆ ಮಹಿಳೆಯು ಸಹ ತಾಳಿ ಸರ ತೆಗೆದಿದ್ದಾರೆ

ಕದ್ದ ಚಿನ್ನದಿಂದಲೇ ಕಳ್ಳರಿಗೆ ಮೋಸ/ ಮಹಿಳೆ ಎದುರು ಯಾಮಾರಿದ ಸರಗಳ್ಳರು

ಶಿವವಮೊಗ್ಗ ನಗರ ಜಯನಗರ ಪೊಲೀಸ್​ ಲಿಮಿಟ್ನಲ್ಲಿ ಚಿನ್ನದ ಸರ ಕಳ್ಳತನ ಆಗಿರುವ ಬಗ್ಗೆ ಮಾಹಿತಿಯೊಂದು ಲಭ್ಯವಾಗಿತ್ತು. ಈ ಬಗ್ಗೆ ಇದೀಗ ಬೇರೆಯದ್ದೆ ಸುದ್ದಿಯೊಂದು ಹೊರಬಿದ್ದಿದೆ. 

ಇದನ್ನು ಸಹ ಓದಿ: ಬೈಕ್​ ಓಡಿಸುವ ಮಕ್ಕಳ ಪೋಷಕರಿಗೆ ಎಸ್​ಪಿ ಮಿಥುನ್​ ಕುಮಾರ್ ಹೇಳಿದ್ದೇನು? ಹೆತ್ತವರಿಗೆ ಎಚ್ಚರಿಕೆ ಸಂದೇಶ

ಇವತ್ತು ಗ್ಯಾಸ್ ಏಜೆನ್ಸಿಯೊಂದರ ಪಕ್ಕ ಮಹಿಳೆಯೊಬ್ಬರನ್ನು ತಡೆದು, ರಸ್ತೆ ದೂರದಲ್ಲಿ ಮರ್ಡರ್ ಆಗಿದೆ, ಚಿನ್ನಕೋಸ್ಕರ ಕೊಲೆಯಾಗಿದೆ. ಹೀಗಾಗಿ ತಾಳಿಸರವನ್ನು ಪೇಪರ್​ನಲ್ಲಿ ಬಚ್ಚಿಟ್ಟುಕೊಳ್ಳಿ ಎಂದಿದ್ದಾರೆ. ಅವರು ಮಾಡಿದ ಗಾಬರಿಗೆ ಮಹಿಳೆಯು ಸಹ ತಾಳಿ ಸರ ತೆಗೆದಿದ್ದಾರೆ. ಕೊಡಿ ಮಡಚಿಕೊಡುತ್ತೇವೆ ಎಂದು ಅದನ್ನು ಮಡಚಿ , ಅದಾಗಲೇ ಮಡಚಿಟ್ಟುಕೊಂಡಿದ್ದ ಇನ್ನೊಂದು ಪೇಪರ್ ಪಿಂಡಿ ಕೊಟ್ಟಿದ್ಧಾರೆ. ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. 

ಕೆಲವೆಡೆ 60 ಸೆಕೆಂಡ್, ಕೆಲವಡೆ 15 ಸೆಕೆಂಡ್/ ಸರ್ಕಲ್​​ಗಳಲ್ಲಿ ಟ್ರಾಫಿಕ್ ಸಿಗ್ನಲ್​ ಗೊಂದಲಗಳಿಗೆ ಎಸ್​ಪಿ ಮಿಥುನ್ ಕುಮಾರ್​ ಕೊಟ್ಟ ಉತ್ತರ ಇಲ್ಲಿದೆ

ಆದರೆ ಸಿಕ್ಕಿರುವ ಮಾಹಿತಿ ಪ್ರಕಾರ, ಮಹಿಳೆ ರೋಲ್ಡ್​ ಗೋಲ್ಡ್​ ಚಿನ್ನದ ಸರ ಹಾಕಿಕೊಂಡಿದ್ದರು. ಹಾಗಾಗಿ ಅವರಿಗೆ ನಡೆದ ಘಟನೆಯಿಂದ ನುಕ್ಸಾನ್ ಆಗಿಲ್ಲ. ಆದಾಗ್ಯು ಅವರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ಧಾರೆ. ಇನ್ನೂ ಇದೇ ರೀತಿಯ ಘಟನೆ ಇತ್ತೀಚೆಗೆ ವಿದ್ಯಾನಗರದ ಬಳಿಯಲ್ಲಿ ನಡೆದಿತ್ತು. ಹೀಗಾಗಿ ಪೊಲೀಸರು ಪ್ರಕರಣದ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ