ಶಿವಮೊಗ್ಗ ಬಸ್ ನಿಲ್ದಾಣ | ಬೆಂಗಳೂರಿನಿಂದ ಬಂದು ಆನವಟ್ಟಿ ಬಸ್ ಹತ್ತಿ ಕುಳಿತ ಪ್ರಯಾಣಿಕನಿಗೆ ಶಾಕ್​

A case of theft took place at the KSRTC bus station in Shimoga ಶಿವಮೊಗ್ಗದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಕಳ್ಳತನ ಪ್ರಕರಣ ನಡೆದಿದೆ

ಶಿವಮೊಗ್ಗ ಬಸ್ ನಿಲ್ದಾಣ | ಬೆಂಗಳೂರಿನಿಂದ ಬಂದು ಆನವಟ್ಟಿ ಬಸ್ ಹತ್ತಿ ಕುಳಿತ ಪ್ರಯಾಣಿಕನಿಗೆ ಶಾಕ್​

KARNATAKA NEWS/ ONLINE / Malenadu today/ Oct 22, 2023 SHIVAMOGGA NEWS

 

ಶಿವಮೊಗ್ಗ KSRTC ಬಸ್​ ಸ್ಟ್ಯಾಂಡ್​ನಲ್ಲಿ ಪ್ರಯಾಣಿಕರ ಅಮೂಲ್ಯವಸ್ತುಗಳಿಗೆ ರಕ್ಷಣೆ ಇಲ್ಲದಂತಾಗಿದೆಯಾ? ಇಂತಹದ್ದೊಂದು ಅನುಮಾನ ಮೂಡಲು ಕಾರಣ, ಬಸ್​ ನಿಲ್ದಾಣದಲ್ಲಿ ನಡೆಯುತ್ತಿರುವ ನಿರಂತರ ಕಳ್ಳತನ ಪ್ರಕರಣಳು. ಇದೀಗ ಮತ್ತೊಂದ ಕಳ್ಳತನ ಪ್ರಕರಣ ನಡೆದಿದ್ದು ಈ ಸಂಬಂಧ ನಿನ್ನೆಯಷ್ಟೆ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ (doddapete police station) ನಲ್ಲಿ ಎಫ್ಐಆರ್ ದಾಖಲಾಗಿದೆ. 



ನಡೆದಿದ್ದು ಏನು? 

ಆನವಟ್ಟಿ ನಿವಾಸಿಯೊಬ್ಬರು ಕೆಲಸದ ಮೇಲೆ ಬೆಂಗಳೂರು ತೆರಳಿದ್ದರು. ಅಲ್ಲಿಂದ ವಾಪಸ್ ಆನವಟ್ಟಿಗೆ ಹೋಗುವ ಸಲುವಾಗಿ ಬೆಂಗಳೂರಿನಿಂದ ಶಿವಮೊಗ್ಗ ಬಂದು, ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ಆನವಟ್ಟಿ ಬಸ್​ಗಾಗಿ ಕಾಯುತ್ತಾ ಇದ್ದರು. 

ರಾಗಿಗುಡ್ಡ ಕೇಸ್​ |DYSP ಯಿಂದಲೇ ದೂರು | ದಾಖಲಾಯ್ತು 150 ಮಂದಿ ವಿರುದ್ಧ ಕೇಸ್​ !

ಆನವಟ್ಟಿ ಕಡೆಗೆ ಹೋಗುವ ಬಸ್ ಬರುತ್ತಲೇ ಹಲವರು ಬಸ್​ ಹತ್ತಲು ಮುಂದಾಗಿದ್ದಾರೆ. ಈ ರಶ್​​ನಲ್ಲಿಯೇ ಸಂತ್ರಸ್ತರು ಸಹ ಬಸ್ ಹತ್ತಿ ಸೀಟು ಹಿಡಿದಿದ್ದಾರೆ. ಟಿಕೆಟ್ ಮಾಡಿಸಲು ಜೇಬಿಗೆ ಕೈ ಹಾಕಿದ್ದಾರೆ. ಆದರೆ ಅಷ್ಟೊತ್ತಿಗೆ ಅವರ ಪ್ಯಾಂಟ್​ ಜೇಬಿನಲ್ಲಿದ್ದ 20 ಸಾವಿರ ರೂಪಾಯಿ ಹಣವನ್ನು ಕಳ್ಳರು ಎಗರಿಸಿದ್ದರು. ಇದರಿಂದ ಆಘಾತಗೊಂಡು ಅಲ್ಲಿದ್ದವರ ಬಳಿ ವಿಚಾರಿಸಿದ್ದಾರೆ. ಆ ವೇಳೆ ಅವರ ಹಣ ಕಳ್ಳತನ ಆಗಿರುವುದು ಗೊತ್ತಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ. 


ಇನ್ನಷ್ಟು ಸುದ್ದಿಗಳು 

ಶೇ...ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗ ದಸರಾಕ್ಕೆ ಚಾಲನೆ | ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಪಾಲಿಕೆ ಸದಸ್ಯರು | ಕುಣಿದು ಸಂಭ್ರಮಿಸಿದ ಶಾಸಕ ಎಸ್​.ಎನ್​. ಚನ್ನಬಸಪ್ಪ