ಶಿವಮೊಗ್ಗ ಬಸ್ ನಿಲ್ದಾಣ | ಬೆಂಗಳೂರಿನಿಂದ ಬಂದು ಆನವಟ್ಟಿ ಬಸ್ ಹತ್ತಿ ಕುಳಿತ ಪ್ರಯಾಣಿಕನಿಗೆ ಶಾಕ್
A case of theft took place at the KSRTC bus station in Shimoga ಶಿವಮೊಗ್ಗದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಕಳ್ಳತನ ಪ್ರಕರಣ ನಡೆದಿದೆ
KARNATAKA NEWS/ ONLINE / Malenadu today/ Oct 22, 2023 SHIVAMOGGA NEWS
ಶಿವಮೊಗ್ಗ KSRTC ಬಸ್ ಸ್ಟ್ಯಾಂಡ್ನಲ್ಲಿ ಪ್ರಯಾಣಿಕರ ಅಮೂಲ್ಯವಸ್ತುಗಳಿಗೆ ರಕ್ಷಣೆ ಇಲ್ಲದಂತಾಗಿದೆಯಾ? ಇಂತಹದ್ದೊಂದು ಅನುಮಾನ ಮೂಡಲು ಕಾರಣ, ಬಸ್ ನಿಲ್ದಾಣದಲ್ಲಿ ನಡೆಯುತ್ತಿರುವ ನಿರಂತರ ಕಳ್ಳತನ ಪ್ರಕರಣಳು. ಇದೀಗ ಮತ್ತೊಂದ ಕಳ್ಳತನ ಪ್ರಕರಣ ನಡೆದಿದ್ದು ಈ ಸಂಬಂಧ ನಿನ್ನೆಯಷ್ಟೆ ದೊಡ್ಡಪೇಟೆ ಪೊಲೀಸ್ ಸ್ಟೇಷನ್ (doddapete police station) ನಲ್ಲಿ ಎಫ್ಐಆರ್ ದಾಖಲಾಗಿದೆ.
ನಡೆದಿದ್ದು ಏನು?
ಆನವಟ್ಟಿ ನಿವಾಸಿಯೊಬ್ಬರು ಕೆಲಸದ ಮೇಲೆ ಬೆಂಗಳೂರು ತೆರಳಿದ್ದರು. ಅಲ್ಲಿಂದ ವಾಪಸ್ ಆನವಟ್ಟಿಗೆ ಹೋಗುವ ಸಲುವಾಗಿ ಬೆಂಗಳೂರಿನಿಂದ ಶಿವಮೊಗ್ಗ ಬಂದು, ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಆನವಟ್ಟಿ ಬಸ್ಗಾಗಿ ಕಾಯುತ್ತಾ ಇದ್ದರು.
ರಾಗಿಗುಡ್ಡ ಕೇಸ್ |DYSP ಯಿಂದಲೇ ದೂರು | ದಾಖಲಾಯ್ತು 150 ಮಂದಿ ವಿರುದ್ಧ ಕೇಸ್ !
ಆನವಟ್ಟಿ ಕಡೆಗೆ ಹೋಗುವ ಬಸ್ ಬರುತ್ತಲೇ ಹಲವರು ಬಸ್ ಹತ್ತಲು ಮುಂದಾಗಿದ್ದಾರೆ. ಈ ರಶ್ನಲ್ಲಿಯೇ ಸಂತ್ರಸ್ತರು ಸಹ ಬಸ್ ಹತ್ತಿ ಸೀಟು ಹಿಡಿದಿದ್ದಾರೆ. ಟಿಕೆಟ್ ಮಾಡಿಸಲು ಜೇಬಿಗೆ ಕೈ ಹಾಕಿದ್ದಾರೆ. ಆದರೆ ಅಷ್ಟೊತ್ತಿಗೆ ಅವರ ಪ್ಯಾಂಟ್ ಜೇಬಿನಲ್ಲಿದ್ದ 20 ಸಾವಿರ ರೂಪಾಯಿ ಹಣವನ್ನು ಕಳ್ಳರು ಎಗರಿಸಿದ್ದರು. ಇದರಿಂದ ಆಘಾತಗೊಂಡು ಅಲ್ಲಿದ್ದವರ ಬಳಿ ವಿಚಾರಿಸಿದ್ದಾರೆ. ಆ ವೇಳೆ ಅವರ ಹಣ ಕಳ್ಳತನ ಆಗಿರುವುದು ಗೊತ್ತಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ.
ಇನ್ನಷ್ಟು ಸುದ್ದಿಗಳು
ಶೇ...ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL
ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ