ಬಡವರ ಬದುಕಿಗೂ ನಿರ್ಲಕ್ಷ್ಯ! ಸಾವಿಗೂ ನಿರ್ಲಕ್ಷ್ಯವೇ? ಶಿವಮೊಗ್ಗದಲ್ಲಿ ಮೂವರ ಆತ್ಮಹತ್ಯೆಯ ಹೊಣೆ ಯಾರು?

The lives of the poor are neglected! Is death neglected? Who is responsible for the suicides of three people in Shivamogga?

ಬಡವರ ಬದುಕಿಗೂ ನಿರ್ಲಕ್ಷ್ಯ! ಸಾವಿಗೂ ನಿರ್ಲಕ್ಷ್ಯವೇ? ಶಿವಮೊಗ್ಗದಲ್ಲಿ ಮೂವರ ಆತ್ಮಹತ್ಯೆಯ ಹೊಣೆ ಯಾರು?
ಬಡವರ ಬದುಕಿಗೂ ನಿರ್ಲಕ್ಷ್ಯ! ಸಾವಿಗೂ ನಿರ್ಲಕ್ಷ್ಯವೇ? ಶಿವಮೊಗ್ಗದಲ್ಲಿ ಮೂವರ ಆತ್ಮಹತ್ಯೆಯ ಹೊಣೆ ಯಾರು?

ಶಿವಮೊಗ್ಗದ ಅಣ್ಣಾನಗರದಲ್ಲಿ ವಾಸಿಸುತ್ತಿದ್ದ ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಸಾವನ್ನಪ್ಪಿದ್ದಾರೆ. ಹಾಗೂ ಹೀಗೂ ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದವರನ್ನು ಕಾಡಿದ್ದು ಬಡತನ ಹಾಗು ನಿರ್ಲಕ್ಷ್ಯ. 

Shivmogga : ಶಿವಮೊಗ್ಗದಲ್ಲಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ! ಕಾರಣವೇನು?

ಮಿಳಘಟ್ಟದಲ್ಲಿ ಕೂಲಿ ಮಾಡಿಕೊಂಡು ಜೀವನ ಮಾಡುತ್ತಿದ್ದ ಪರಂದಯ್ಯ ಹಾಗೂ ದಾನಮ್ಮ ಮತ್ತು ಮಂಜುನಾಥ್ ಎಂಬವರು ಸಾವನ್ನಪ್ಪಿದ್ದಾರೆ. ಅಕ್ಷರಶಃ ನಿರ್ಗತಿಕರಂತೆ  ಬದುಕಿದ್ದ ಕುಟುಂಬಕ್ಕೆ ಸಿಗಬೇಕಾಗಿದ್ದ ಯಾವೊಂದು ಸೌಲಭ್ಯಗಳು ಸಿಕ್ಕಿಲ್ಲ. 

GST : ಉದ್ಯಮಿಗಳೇ ನಿಮ್ಮ ದಾಖಲೆಗಳ ಬಗ್ಗೆ ಇರಲಿ ಎಚ್ಚರ: ನಿಮ್ಮ ರೆಕಾರ್ಡ್ಸ್​ನಲ್ಲಿ ಬೇರೆಯವರು ಜಿಎಸ್​ಟಿ ಪಡೆದುಕೊಳ್ತಾರೆ

ಈ ಕುಟುಂಬದವರಿಗೆ ಕನಿಷ್ಟ ಮನೆ ಬಾಡಿಗೆಯು ಸಹ ಕೊಡಲು ಸಾಧ್ಯವಾಗದೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಜುನಾಥ್​ಗೆ ಪಾರ್ಶುವಾಯು ಹೊಡೆದಿತ್ತು. ಅದರಲ್ಲಿಯೇ ಅಲ್ಲಿ ಇಲ್ಲಿ ಚೂರು ಪಾರು ಕೂಲಿ ಮಾಡುತ್ತಿದ್ದ. ಪರಂದಯ್ಯನಿಗೆ ಕಣ್ಣಿನ ಸಮಸ್ಯೆಯಿತ್ತು. ಕೆಲಸಕ್ಕೆ ಹೋಗಲು ಆಗುತ್ತಿರಲಿಲ್ಲ. ಪತ್ನಿಯೊಬ್ಬಳೇ ಹಗಲು ರಾತ್ರಿ ಕೆಲಸಕ್ಕೆ ಹೋಗಿ ಕೂಲಿ ಮಾಡುತ್ತಿದ್ದರಂತೆ. ರೇಷನ್​ ಕಾರ್ಡ್​ಗೆ ಅರ್ಜಿ ಹಾಕಿದ್ದರಂತೆ. ಆದರೆ ರೇಷನ್​ ಕಾರ್ಡ್​ ಕೂಡ ಕುಟುಂಬಸ್ಥರಿಗೆ ಸಿಕ್ಕಿಲ್ಲವಂತೆ. ಆಧಾರ್ ಕಾರ್ಡ್​, ರೇಷನ್​ ಕಾರ್ಡ್​ ಹೀಗೆ ಬದುಕಿನ ಗುರುತಿಗೆ ಬೇಕಿದ್ದ ಯಾವೊಂದು ಆಧಾರವೂ ಈ ಕುಟುಂಬಕ್ಕೆ ಇರಲಿಲ್ಲ. ಇತ್ತೀಚೆಗೆ ರೇಷನ್​ ಕಾರ್ಡ್​ಗಾಗಿ ವಾರದ ಹಿಂದೆ ಪರಿಚಯಿಸ್ತರಿಗೆ ಫೋಟೋ ಕೊಟ್ಟಿದ್ಧಾರೆ. ಇದಾಗಿ ವಾರ ಕಳೆಯುವಷ್ಟರಲ್ಲಿ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ. 

MESCOM : ಶಿವಮೊಗ್ಗ ನಾಗರಿಕರ ಗಮನಕ್ಕೆ: ಫ್ಯೂಸ್​​ ಕೀಳಲು ಬರುವ ಮೆಸ್ಕಾಂ ಸಿಬ್ಬಂದಿ ಕೈಯಲ್ಲಿ ಕರೆಂಟ್ ಬಿಲ್​ ಕಟ್ಟಬೇಡಿ

ಬಡ ಕುಟುಂಬವೊಂದಕ್ಕೆ ಸಿಗಬೇಕಿದ್ದ ಸರ್ಕಾರಿ ಸವಲತ್ತುಗಳು ಈ ಕುಟುಂಬಕ್ಕೆ ಸಿಕ್ಕಿರಲಿಲ್ಲ. ಅಡುಗೆ ಮಾಡಲು ಸಹ ಏನೂ ಇಲ್ಲದೆ, ಬಳಲಿದ್ದ ಕುಟುಂಬದ ಸಾವು ಕೂಡ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ. ಏಕೆಂದರೆ ನಿನ್ನೆ ಅಕ್ಕಪಕ್ಕದವರು ನೋಡಿ, ಹೀಗಾಗಿದೆ ಎಂದು ಆ್ಯಂಬುಲೆನ್ಸ್​ಗೆ ಬೆಳಗ್ಗೆ ಕರೆಮಾಡಿದರೆ, ಮಧ್ಯಾಹ್ನ ಆ್ಯಂಬುಲೆನ್ಸ್ ಬಂದಿದೆ. ಅಲ್ಲಿಯುವರೆಗೂ ಬದುಕಿದ್ದ ಮಂಜುನಾಥ್​ ನರಳಾಡುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇನ್ನೂ , ಮೃತದೇಹ ನೀಡುವುದರಲ್ಲಿಯು ತಡವಾಗಿದೆ ಎಂದು ದೂರಿದ್ದಾರೆ. ವ್ಯವಸ್ಥೆಯ ನಿರ್ಲಕ್ಷ್ಯದಡಿಯಲ್ಲಿ ಬಡವರು ಬದುಕುವುದು ಹೇಗೆ ಎಂದು ಅಕ್ಕಪಕ್ಕದವರು ಪ್ರಶ್ನಿಸಿದ್ಧಾರೆ. ಆದರೆ ಇದಕ್ಕೆ ಉತ್ತರ ಕೊಡುವವರು ಮಾತ್ರ ಯಾರು ಇಲ್ಲದಂತಾಗಿದೆ. 

thirthahalli | ಪೊಲೀಸರ ಹುಡುಕಾಟದ ನಡುವೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಗೆ ಬಂದು ಹೋಗಿದ್ದನಾ ಸ್ಯಾಂಟ್ರೋ ರವಿ!?

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com