ಶರಾವತಿ ಮುಳುಗಡೆ ಸಂತ್ರಸ್ಥರ ಬೇಡಿಕೆ ಈಡೇರಿಸದಿದ್ದರೆ ಲೋಕಸಭಾ ಚುನಾವಣೆ ಭಹಿಷ್ಕಾರ- ತೀ ನಾ ಶ್ರಿನಿವಾಸ್ ಎಚ್ಚರಿಕೆ
Will boycott Lok Sabha elections if demands of Sharavathi flood victims are not met: Ti Na Shrinivas
ಶರಾವತಿ ಮುಳುಗಡೆ ಸಂತ್ರಸ್ಥರ ಬೇಡಿಕೆ ಈಡೇರಿಸದಿದ್ದರೆ ಲೋಕಸಭಾ ಚುನಾವಣೆ ಭಹಿಷ್ಕಾರ- ತೀ ನಾ ಶ್ರಿನಿವಾಸ್
ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಇಂದು ಮಲ್ನಾಡ್ ರೈತ ಹೋರಾಟ ಸಮಿತಿ ಹಾಗೂ ಅಂಬೇಡ್ಕರ್ ಕ್ರಾಂತಿ ಸೇನೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶರಾವತಿ ಮುಳುಗಡೆ ಸಂತ್ರಸ್ತರ ಭೂ ಹಕ್ಕಿನ ಸಮಸ್ಯೆ ಪರಿಹರಿಸುವಲ್ಲಿ ಬಿಜೆಪಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಈ ಹಿಂದೆ ಬೊಮ್ಮಾಯಿ ಮುಖ್ಯಮಂತ್ರಿ ಆದಾಗ ಸಂಸದರು ಹಾಗೂ ಸಚಿವರನ್ನು ಇಟ್ಕೊಂಡು ಸಭೆ ಮಾಡಿದ್ರು ಆದರೆ ಯಾವುದೇ ನಿರ್ಣಯ ಮಾಡಲಿಲ್ಲ, ಬಿಜೆಪಿ ಮತ್ತು ಕಾಂಗ್ರೆಸ್ ಸೇರಿ ಶರಾವತಿ ಸಂತ್ರಸ್ತರ ಸಮಸ್ಯೆಯ ಸಲುವಾಗಿ ನಗರದ ಈಡಿಗರ ಭವನದಲ್ಲಿ ಸರಣಿ ಸಭೆ ನಡೆಸಿದ್ದರು ಆದ್ರೆ ಅವ್ರು ಕೂಡ ಯಾವುದೇ ತೀರ್ಮಾನಕ್ಕೂ ಬಂದಿಲ್ಲ ಎಂದು ಹೇಳಿದರು.