ಹುಂಚದಲ್ಲಿ ಕಲ್ಲಿನ ಕೆತ್ತನೆ ಮಾಡುತ್ತಿದ್ದಾಗ, ಮಷಿನ್ಗೆ ತಾಗಿ ಕಾರ್ಕಳ ಮೂಲದ ಕಾರ್ಮಿಕನ ಕಾಲಿಗೆ ಗಾಯ
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಹುಂಚದಲ್ಲಿ ಕಲ್ಲು ಕೆತ್ತುವಾಗ ಅವಘಡವೊಂದು ಸಂಭವಿಸಿದೆ. ಹುಂಚದಲ್ಲಿ ಕೆಲಸ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬನ ಕಾಲಿಗೆ ಮಷಿನ್ ತಾಗಿ ಗಂಭೀರವಾದ ಗಾಯವಾಗಿದೆ.
ಇದನ್ನು ಸಹ ಓದಿ : ವಾಹನ ಸವಾರರಿಗೆ ಸೂಚನೆ / ಈ ಪ್ರಮುಖ ರೈಲ್ವೆ ಕ್ರಾಸಿಂಗ್ 12 ಗಂಟೆ ಬಂದ್ ಆಗಲಿದೆ
ಕಾರ್ಕಳ ಮೂಲದ ಸುಂದರ್ ಎಂಬವರು ಗಾಯಗೊಂಡವರು. ಘಟನೆ ಬೆನ್ನಲ್ಲೆ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಹುಂಚ ಮಠದ ಸಮೀಪ ಕಲ್ಲು ಕೆತ್ತನೆಯ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ, ಮಷಿನ್ ಬಡಿದು ಬಲಗಾಲಿನಲ್ಲಿ ದೊಡ್ಡ ಪೆಟ್ಟಾಗಿದೆ. ತಕ್ಷಣ ಆತನನ್ನು ಸ್ಥಳೀಯರು ಹಾಗೂ ಸಹೋಧ್ಯೋಗಿಗಳು ಆಸ್ಪತ್ರೆ ಕರೆದೊಯ್ದಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link