ಅಗಲಿದ ಪ್ರಸನ್ನನಿಗೆ ಅಂತಿಮವಿದಾಯ/ ಹೊಸನಗರದಲ್ಲಿ ಅಂತಿಮ ಯಾತ್ರೆ/ ಜನರ ಕಂಬನಿ

ದಾರಿಯುದ್ದಕ್ಕೂ ಪ್ರಸನ್ನರ ಪರಿಚಯಸ್ಥರು, ಬಂದುಗಳು ಹಾಗೂ ಸ್ನೇಹಿತರು, ಮೆರವಣಿಗೆಯಲ್ಲಿ ಪಾಲ್ಗೊಂಡರು. ನಂತರ ಅವರ ಅಂತಿಮ ದರ್ಶನಕ್ಕೆ ಗೃಹಸಚಿವ ಆರಗ ಜ್ಞಾನೇಂದ್ರರವರು ಆಗಮಿಸಿ ಸಂತಾಪ ವ್ಯಕ್ತಪಡಿಸಿದರು. ಅಲ್ಲದೆ ಅಂತ್ಯಕ್ರಿಯೆ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದರು

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಪ್ರಸನ್ನ ಭಟ್, ನಿನ್ನೆ ರಾಮನಗರದ ಕನಕಪುರದ ತಾಲ್ಲೂಕಿನ ಮಾವತ್ತೂರು ಕೆರೆಯಲ್ಲಿ ಈಜಲು ಹೋಗಿದ್ದಾಗ, ಸಾವನ್ನಪ್ಪಿದ್ದರು. ಈ ಬಗ್ಗೆ ಮಲೆನಾಡು ಟುಡೆ ವರದಿ ಮಾಡಿತ್ತು, ಅದರ ಲಿಂಕ್ ಇಲ್ಲಿದೆ ಓದಿ : ಸಂಸದ ರಾಘವೇಂದ್ರರವರ ಸಾಮಾಜಿಕ ಜಾಲತಾಣ ನೋಡಿಕೊಳ್ತಿದ್ದ ಪ್ರಸನ್ನ ಭಟ್​ ಕೆರೆಯಲ್ಲಿ ಕಣ್ಮರೆ/ ಈಜಲು ಹೋದವರು ನಾಪತ್ತೆ

ಅವರ ಪಾರ್ಥೀವ ಶರೀರವನ್ನು ಇವತ್ತು ಶಿವಮೊಗ್ಗ ನಗರಕ್ಕೆ ತರಲಾಯ್ತು. ಬಿಜೆಪಿ ಕಚೇರಿಯಲ್ಲಿ ಅಂತಿಮ ದರ್ಶನದ ಮುಗಿದ ಬಳಿಕ, ವಿಶೇಷವಾಹನದಲ್ಲಿ ಹೊಸನಗರಕ್ಕೆ ಕೊಂಡೊಯ್ಯಲಾಯ್ತು. 

ಶಿವಮೊಗ್ಗಕ್ಕೆ ಪ್ರಸನ್ನ ಭಟ್ ಪಾರ್ಥಿವ ಶರೀರ/ ಹೊಸನಗರದಲ್ಲಿ ಅಂತಿಮ ವಿದಾಯಕ್ಕೆ ಸಿದ್ಧತೆ

ಅಲ್ಲಿ, ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನ ಬಳಿಯಿಂದ ಪಟ್ಟಣದಲ್ಲಿರುವ ಗಣಪತಿ ದೇವಸ್ಥಾನದ ಪಕ್ಕದಲ್ಲಿರುವ ಪ್ರಸನ್ನ ರವರ ಸ್ವಗೃಹದವರೆಗೆ  ಅಂತಿಮ ಯಾತ್ರೆ ಕೈಗೊಳ್ಳಲಾಗಿತ್ತು.

ದಾರಿಯುದ್ದಕ್ಕೂ ಪ್ರಸನ್ನರ ಪರಿಚಯಸ್ಥರು, ಬಂದುಗಳು ಹಾಗೂ ಸ್ನೇಹಿತರು, ಮೆರವಣಿಗೆಯಲ್ಲಿ ಪಾಲ್ಗೊಂಡರು. ನಂತರ ಅವರ ಅಂತಿಮ ದರ್ಶನಕ್ಕೆ ಗೃಹಸಚಿವ ಆರಗ ಜ್ಞಾನೇಂದ್ರರವರು ಆಗಮಿಸಿ ಸಂತಾಪ ವ್ಯಕ್ತಪಡಿಸಿದರು. ಅಲ್ಲದೆ ಅಂತ್ಯಕ್ರಿಯೆ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದರು

Train news: ಶಿವಮೊಗ್ಗ ಬೆಂಗಳೂರು ರೈಲ್ವೆ ಪ್ರಯಾಣಿಕರಿಗೆ ಗುಡ್​ ನ್ಯೂಸ್/ ಸುಖಕರ ಪ್ರಯಾಣಕ್ಕೆ ಸಿಗಲಿದೆ ಈ ಸೌಲಭ್ಯ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ.