ಸೆಖೆ ಸಾವನ್ನು ಸೆಳೆಯುತ್ತೆ ಹುಷಾರ್! ನಮಾಜ್ ಮುಗಿಸಿ ತುಂಗಾನದಿಯಲ್ಲಿ ಈಜಲು ತೆರಳಿದ್ದ sslc ವಿದ್ಯಾರ್ಥಿಗಳು ಸಾವು! ನಡೆದಿದ್ದೇನು?
Beware of the heat drawing death! SSLC students, who had gone for a swim in tunga river after offering namaz in Theerthahalli taluk, died. What happened?
Shivamogga Apr 2, 2024 ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕುನಲ್ಲಿ ನಿನ್ನೆ ಭೀಕರ ಘಟನೆಯೊಂದು ನಡೆದಿದೆ. ರೋಜಾ ಮುಗಿಸಿ ನಮಾಜ್ ಮಾಡಿಕೊಂಡು ಮನೆಗೆ ಹೋಗಬೇಕಿದ್ದ ಹದಿಹರೆಯದ ಮಕ್ಕಳು ತುಂಗಾ ನದಿಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದಾರೆ
ಬೇಸಿಗೆಯ ನಿಗಿನಿಗಿ ಸೆಖೆ ನೀರಿನ ಸಾಂಗತ್ಯವನ್ನು ಕೈ ಬೀಸಿ ಕರೆಯುತ್ತದೆ. ಹಾಗಂತ ನೀರಿನ ಅಪಾಯ ಅರಿಯದೇ ಅದರೊಳಗೆ ಇಳಿಯುವುದು ದುರಂತವನ್ನು ಮೈಮೇಲೆ ಆಹ್ವಾನ ಮಾಡಿಕೊಂಡಂತೆ. ನಿನ್ನೆ ತೀರ್ಥಹಳ್ಳಿಯಲ್ಲಿ ಆದದ್ದು ಅದೆ. ನೀರಿನ ಆಳ ಅರಿಯದ ಹುಡುಗರು ರಾಮಮಂಟಪದ ಸಮೀಪ ಈಜಲು ತೆರಳಿದ್ದಾರೆ. ಬೇಸಿಗೆಯ ಸೆಖೆಗೆ ಇಷ್ಟೆ ನೀರಿರೋದು ಎಂದು ಕಣ್ಣೋಟಕ್ಕೆ ಅಳೆದು ನೀರಿಗಿಳಿದ ಹುಡುಗರಿಗೆ, ಗುಂಡಿಯ ಆಳ ಅಂದಾಜಿಗೆ ಸಿಗಲಿಲ್ಲ. ಹೀಗಾಗಿ ಒಬ್ಬರಾದ ಮೇಲೆ ಒಬ್ಬರು ಎಂಬಂತೆ ನೀರಲ್ಲಿ ಕಾಲು ಅಲ್ಲಾಡಿಸಲಾಗದೇ ಮುಳುಗಿದ್ದಾರೆ.
ರಫನ್, ಇಯಾನ್ ಹಾಗೂ ಸಮ್ಮರ್ ಎಂಬ ಮೂವರು ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಮೂವರು sslc ವಿದ್ಯಾರ್ಥಿಗಳು. ನಿನ್ನೆ ರೋಜಾ ಮುಗಿಸಿ ರಾಮಮಂಟಪದ ಪಕ್ಕದಲ್ಲಿ ಈಜಲು ತೆರಳಿದ್ದಾರೆ. ಈ ವೇಳೆ ನೀರಲ್ಲಿ ಮುಳುಗಿ ಮೂವರು ಸಾವನ್ನಪ್ಪಿದ್ದಾರೆ.
ಇನ್ನೂ ಮೂವರು ನೀರಿನಲ್ಲಿ ನಾಪತ್ತೆಯಾದ ಬೆನ್ನಲ್ಲೆ , ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಮೂವರ ಮೃತದೇಹವನ್ನು ಹೊರಕ್ಕೆ ತೆಗೆದಿದೆ. ಘಟನೆ ಬೆನ್ನಲ್ಲಿಯೇ ತುಂಗಾನದಿ ತೀರದಲ್ಲಿ ಸಾವಿರಾರು ಜನರು ಜಮಾಯಿಸಿದ್ದರು. ಕುಟುಂಬಸ್ಥರ ದುಃಖ ಮುಗಿಲು ಮುಟ್ಟಿತ್ತು.