ತೀರ್ಥಹಳ್ಳಿಯಲ್ಲಿ ಒಂದೇ ದಿನ 2 ಘಟನೆ | ಕುಪ್ಪಳ್ಳಿಯ ಹತ್ತಿರ ಮರಕ್ಕೆ ಕಾರು ಡಿಕ್ಕಿ
A car coming from Koppa to Thirthahalli collided with a tree near Kuppalli in Theerthahalli taluk. Thirthahalli News
![ತೀರ್ಥಹಳ್ಳಿಯಲ್ಲಿ ಒಂದೇ ದಿನ 2 ಘಟನೆ | ಕುಪ್ಪಳ್ಳಿಯ ಹತ್ತಿರ ಮರಕ್ಕೆ ಕಾರು ಡಿಕ್ಕಿ](https://malenadutoday.com/uploads/images/202311/image_870x_655c0cb0c444a.webp)
SHIVAMOGGA NEWS / ONLINE / Malenadu today/ Nov 21, 2023 NEWS KANNADA
Shivamogga | Malnenadutoday.com | ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಒಂದೇ ದಿನ ಎರಡು ಅಪಘಾತಗಳು ಸಂಭವಿಸಿದೆ. ಮೂಕಾಂಬಿಕಾ ಬಸ್ನ ಪುಟ್ ಬೋರ್ಡ್ನಲ್ಲಿ ನಿಂತಿದ್ದ ಯುವಕ ಬ್ಯಾರಿಕೆಡ್ಗೆ ತಗುಲಿ ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ನಿನ್ನೆ ವರದಿಯಾಗಿತ್ತು.
READ :ಶಿವಮೊಗ್ಗ ಜಿಲ್ಲೆಯಿಂದ ಮತ್ತೊಂದು ಪಲ್ಲಕ್ಕಿ ಬಸ್ ಸೇವೆ ಆರಂಭ! ಸಾಗರ-ಶಿವಮೊಗ್ಗ-ವಿಜಯಪುರ!
ಇದರ ಬೆನ್ನಲ್ಲೆ ತಾಲ್ಲೂಕಿನ ಕುಪ್ಪಳ್ಳಿ ಸಮೀಪ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದು ನುಜ್ಜುಗುಜ್ಜಾದ ಘಟನೆ ಸಂಭವಿಸಿದೆ. ಕೊಪ್ಪ ಮೂಲದವರು ಐ 20 ಕಾರಿನಲ್ಲಿ ತೀರ್ಥಹಳ್ಳಿಗೆ ಬರುತ್ತಿದ್ದರು.
READ : ಬಿರಿಯಾನಿ ತಿಂದು 17 ಮಂದಿ ಅಸ್ವಸ್ಥ! ಏನಿದು ಘಟನೆ! ಹೇಗಾಯ್ತು! ವಿವರ ಇಲ್ಲಿದೆ
ಈ ವೇಳೆ ಚಾಲಕ ನಿಯಂತ್ರಣದ ತಪ್ಪಿದ ಕಾರು ನೇರವಾಗಿ ರಸ್ತೆಬದಿಯ ಮರಕ್ಕೆ ಡಿಕ್ಕಿ ಹೊಡೆದು ಅಲ್ಲಿಯೇ ಪಕ್ಕದಲ್ಲಿದ್ದ ಚರಂಡಿಗೆ ಬಿದ್ದಿದೆ.
ಘಟನೆಯಲ್ಲಿ ಚಾಲಕನಿಗೆ ಸ್ವಲ್ಪ ಗಾಯವಾಗಿದ್ದು, ಅವರನ್ನ ಸ್ಥಳೀಯ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿ ಚಿಕಿತ್ಸೆ ಒದಗಿಸಿದ್ದಾರೆ.