ಬಿರಿಯಾನಿ ತಿಂದು 17 ಮಂದಿ ಅಸ್ವಸ್ಥ! ಏನಿದು ಘಟನೆ! ಹೇಗಾಯ್ತು! ವಿವರ ಇಲ್ಲಿದೆ

At least 17 people fell ill after consuming biryani at a family function at Maravanji in Kadur taluk. Chikkamagaluru News, Kadur Taluk, Malnad Today,

ಬಿರಿಯಾನಿ ತಿಂದು 17 ಮಂದಿ ಅಸ್ವಸ್ಥ! ಏನಿದು ಘಟನೆ! ಹೇಗಾಯ್ತು! ವಿವರ ಇಲ್ಲಿದೆ

SHIVAMOGGA NEWS / ONLINE / Malenadu today/ Nov 21, 2023 NEWS KANNADA

Chikkamagaluru |  Malnenadutoday.com |   ಕೌಟುಂಬಿಕ ಕಾರ್ಯಕ್ರಮವೊಂದರಲ್ಲಿ ಮಾಂಸಾಹಾರ ಸೇವಿಸಿದ ಬಳಿಕ 17 ಮಂದಿ ಅಸ್ವಸ್ಥರಾದ ಘಟನೆಯು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕು ಮರವಂಜಿ ಗ್ರಾಮದಲ್ಲಿ ಸಂಭವಿಸಿದೆ. ಘಟನೆಯಲ್ಲಿ ಅಸ್ವಸ್ಥರಾದವರಿಗೆ ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. 

READ :ಶಿವಮೊಗ್ಗ ಜಿಲ್ಲೆಯಿಂದ ಮತ್ತೊಂದು ಪಲ್ಲಕ್ಕಿ ಬಸ್ ಸೇವೆ ಆರಂಭ! ಸಾಗರ-ಶಿವಮೊಗ್ಗ-ವಿಜಯಪುರ!

ಮರವಂಜಿ ಗ್ರಾಮದಲ್ಲಿ ಭಾನುವಾರ ಬಾಡೂಟದ ಕಾರ್ಯಕ್ರಮ ನಡೆದಿತ್ತು. ಇಲ್ಲಿ ಊಟ ಮಾಡಿದವರಲ್ಲಿ ನಿನ್ನೆ  ವಾಂತಿ-ಭೇಧಿ ಕಾಣಿಸಿಕೊಂಡಿದೆ. ಬಿರಿಯಾನಿ ತಿಂದ ಹಲವರು ಅಸ್ವಸ್ಥಗೊಂಡಿದ್ದು, ತಕ್ಷಣವೇ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. 

READ :ಶಿವಮೊಗ್ಗ ವಿಮಾನ ನಿಲ್ಧಾಣದಲ್ಲಿ ಸ್ಟಾರ್​ ಏರ್​ ಲೈನ್ಸ್ ಹಾರಾಟ ಆರಂಭ! ಸಂಚಾರದ ವಿವರ ಇಲ್ಲಿದೆ !

8 ಪುರುಷರು, 9 ಮಹಿಳೆಯರು ಆಸ್ಪತ್ರೆಗೆ ದಾಖಲಾಗಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ