ದೊಡ್ಡಸುದ್ದಿ / ನಾಮಪತ್ರ ವಾಪಸ್​ ಗಡುವು ಮುಗಿದ್ದ ಕೆಲವೇ ಕ್ಷಣದಲ್ಲಿ ಬಿಜೆಪಿ ಪಕ್ಷದಿಂದ ಕೆಎಸ್​ ಈಶ್ವರಪ್ಪ ಉಚ್ಚಾಟನೆ

Big News KS Eshwarappa expelled from the BJP just moments after the deadline for returning the nomination papers.

ದೊಡ್ಡಸುದ್ದಿ / ನಾಮಪತ್ರ ವಾಪಸ್​ ಗಡುವು ಮುಗಿದ್ದ ಕೆಲವೇ ಕ್ಷಣದಲ್ಲಿ ಬಿಜೆಪಿ ಪಕ್ಷದಿಂದ ಕೆಎಸ್​ ಈಶ್ವರಪ್ಪ ಉಚ್ಚಾಟನೆ
KS Eshwarappa expelled from BJP

SHIVAMOGGA | MALENADUTODAY NEWS | Apr 22, 2024  

ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತ್ತೊಂದು ದೊಡ್ಡಸುದ್ದಿ ಬಂದಿದೆ. ಇಲ್ಲಿವರೆಗೂ ನಾಮಪತ್ರ ವಾಪಸ್ ಪಡೆಯುತ್ತಾರೆ ಅಂತಾ ಕೆಎಸ್​ ಈಶ್ವರಪ್ಪನವರ ನಿಲುವನ್ನ ಕಾದು ನೋಡುತ್ತಿದ್ದ ಬಿಜೆಪಿ ಇದೀಗ ಅವರನ್ನ ಉಚ್ಚಾಟನೆ ಮಾಡಿದೆ. ಇವತ್ತು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕವಾಗಿತ್ತು.  ಗಡುವು ಮುಗಿದ ಬೆನ್ನಲ್ಲೆ ಚುನಾವಣಾಧಿಕಾರಿಗಳು ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳ ಹೆಸರನ್ನ ಪ್ರಕಟ ಮಾಡಿದ್ದರು. ಅದರ ಬೆನ್ನಲ್ಲೆ ರಾಜ್ಯ ಬಿಜೆಪಿ ಅಧಿಕೃತ ಲೆಟರ್ ಹೆಡ್​ನಲ್ಲಿ  ಕೆಎಸ್​ ಈಶ್ವರಪ್ಪನವರನ್ನು ಉಚ್ಚಾಟಿಸಿದ್ದಾರೆ. 

ಉಚ್ಚಾಟನೆ ಆದೇಶದಲ್ಲಿ ಏನಿದೆ? 

ವಿಷಯ : ಉಚ್ಚಾಟನಾ ಆದೇಶ

ಪಕ್ಷದ ಸೂಚನೆಯನ್ನು ಕಡೆಗಣಿಸಿ ಪ್ರಸಕ್ತ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪಕ್ಷದ ಮುಜುಗರಕ್ಕೆ ಕಾರಣರಾಗಿದ್ದೀರಿ. ಇದು ಪಕ್ಷದ ಶಿಸ್ತು ಉಲ್ಲಂಘನೆಯಾಗಿದೆ. ಆದ್ದರಿಂದ ತಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಜವಾಬ್ದಾರಿಗಳಿಂದ ಮುಕ್ತಗೊಳಿಸಿ ಆರು (6) ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ.

ವಂದನೆಗಳೊಂದಿಗೆ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್​ ಪಾಟೀಲ್​




KSE