ಖುದ್ದು ಫಿಲ್ಡ್ಗೆ ಇಳಿದು, ಇಡೀ ರಾಜ್ಯದಲ್ಲಿ ಅಚ್ಚರಿ ಮೂಡಿಸಿದ ಶಿವಮೊಗ್ಗ ಎಸ್ಪಿ ! ಹ್ಯಾಟ್ಸಾಪ್ ಲಕ್ಷ್ಮೀಪ್ರಸಾದ್
Shimoga SP surprised the entire state by entering the field himself. Hatsapp Lakshmiprasad
Shimoga SP surprised / ಗುಪ್ತಚರ ಇಲಾಖೆಗೆ ಇರಲಿಲ್ಲ ಮಾಹಿತಿ, ಸಿಬ್ಬಂದಿಗೇ ಎನಂತನೇ ಗೊತ್ತಾಗ್ತಿರಲಿಲ್ಲ! ಅಷ್ಟರಲ್ಲೆ ಮುಗಿದಿದ್ದು ಆಪರೇಷನ್! ಖುದ್ದು ಫಿಲ್ಡ್ಗೆ ಇಳಿದು, ಇಡೀ ರಾಜ್ಯದಲ್ಲಿ ಅಚ್ಚರಿ ಮೂಡಿಸಿದ ಶಿವಮೊಗ್ಗ ಎಸ್ಪಿ ! ಹ್ಯಾಟ್ಸಾಪ್ ಲಕ್ಷ್ಮೀಪ್ರಸಾದ್ ಎನ್ನಲೇಬೇಕು!
ಶಿವಮೊಗ್ಗ ದೊಡ್ಡಪೇಟೆ ವ್ಯಾಪ್ತಿಯಲ್ಲಿ ಸಂಭವಿಸಬೇಕಿದ್ದ ಮರ್ಡರ್ ವೊಂದನ್ನ ಶಿವಮೊಗ್ಗ ಎಸ್ಪಿ ಲಕ್ಷ್ಮೀಪ್ರಸಾದ್ ತಪ್ಪಿಸಿದ್ದಾರೆ. ಈ ವಿಚಾರದಲ್ಲಿ ಅವರೇ ಒನ್ ಆಂಡ್ ಓನ್ಲಿ ಹೀರೋ..
ಈ ಮಾತನ್ನ ಸುಮ್ಮನೇ ಹೇಳುತ್ತಿಲ್ಲ ಇದಕ್ಕೆ ಕಾರಣವಿದೆ. ಶಿವಮೊಗ್ಗ ಎಸ್ಪಿ ಲಕ್ಷ್ಮೀಪ್ರಸಾದ್ಗೆ ಹೆಚ್ಚು ಒತ್ತಡವನ್ನು ಎದುರಿಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಇತ್ತೀಚೆಗೆ ಸಂಭವಿಸಿದ ಘಟನೆಗಳು, ಅವರಿಗೆ ಬೇಜಾನ್ ಕೆಲಸ ಕೊಟ್ಟಿದ್ದವು. ಇದರ ನಡುವೆ ಅವರು ಇಡೀ ರಾಜ್ಯದ ಪೊಲೀಸ್ ಇಲಾಖೆಯೇ ತಲ್ಲಣಗೊಳ್ಳುವಂತೆ ಮಾಡಿದ್ದಾರೆ. ರಾಜ್ಯ ರಾಜಕಾರಣ ವಲಯ ಬೆಕ್ಕಸ ಬೆರಗಾಗುವಂತೆ ಮಾಡಿದ್ದಾರೆ. ಅಷ್ಟೆಯೇಕೆ ಡಿಪಾರ್ಟ್ಮೆಂಟ್ನ ವಲಯದಲ್ಲಿಯೇ ಮೈಕ್ ಒನ್ ಇಷ್ಟೆಲ್ಲಾ ಮಾಡ್ತಾರೆ ಎಂದು ಹುಬ್ಬೇರಿಸುತ್ತಿದ್ದಾರೆ.
ಅಂದಹಾಗೆ ಎಸ್ಪಿ ಎಂದರೆ, ಅವರ ಆಫೀಸ್ನಲ್ಲಿ ಕುಳಿತು ತಮ್ಮ ಅಧೀನ ಅಧಿಕಾರಿಗಳಿಗೆ ಆದೇಶ ಕೊಡುತ್ತಾರೆ ಎಂದೇ ಎಲ್ಲರೂ ತಿಳಿಯುತ್ತಾರೆ. ಆದರೆ ಲಕ್ಷ್ಮೀಪ್ರಸಾದ್ ಬೆಳಗ್ಗೆ 10 ಗಂಟೆಗೆ ಎಸ್ಪಿ ಕಚೇರಿಗೆ ಬಂದರೆ ಸಂಜೆ ಏಳು ಗಂಟೆಯಾದರು ಕಚೇರಿಯಿಂದ ಹೊರಕ್ಕೆ ಹೋಗಲಾರರು. ಊಟದ ವಿರಾಮವನ್ನು ಪಡೆಯದ ಅವರ ಗಮನ ಈ ಮೊದಲು ಗಾಂಜಾ ಭೇಟೆಯ ಮೇಲಿತ್ತು. ಕಳ್ಳರ ಕಾಲ್ಗಳನ್ನ ಟ್ರೇಸ್ ಮಾಡ್ತಿದ್ದ ಅವರು ಖುದ್ದಾಗಿ ಆಂಧ್ರ ತೆಲಂಗಾಣ ಪೊಲೀಸರ ಸಂಪರ್ಕಿಸಿ ಅಲ್ಲಿಂದ ಶಿವಮೊಗ್ಗಕ್ಕೆ ಎಂಟ್ರಿಯಾಗುತ್ತಿದ್ದ ಗಾಂಜಾ ಮಾಲನ್ನ, ತಮ್ಮ ಟೀಂ ಮೂಲಕ ಹಿಡಿದುಹಾಕುತ್ತಿದ್ದರು. ಈ ಕಾರಣಕ್ಕೆ ಇತ್ತೀಚೆಗೆ ಶಿವಮೊಗ್ಗದಲ್ಲಿ ಅಕ್ರಮ ಗಾಂಜಾದ ದೊಡ್ಡ ಭೇಟೆಗಳು ಸುದ್ದಿಯಾಗುತ್ತಿದ್ದವು.
ಆದರೆ ಇತ್ತೀಚೆಗೆ ನಡೆದ ಕೋಮುಸಂಘರ್ಷದ ವಿಚಾರ, ಎಸ್ಪಿಯವರಿಗೆ ಹೊಸ ಸವಾಲನ್ನ ತಂದೊಡ್ಡಿತ್ತು. ಅದರ ಬೆನ್ನಲ್ಲೆ ಎಸ್ಪಿಯವರು ತಮ್ಮ ಇಲಾಖೆಯಲ್ಲಿಯೇ ಯಾರಿಗೂ ಗೊತ್ತಾಗದ ಹಾಗೆ ನಡೆಯಬಹುದಾಗಿದ್ದ ವ್ಯವಸ್ಥಿತ ಕೊಲೆಯ ಸಂಚನ್ನ ಬಯಲು ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಸದ್ಯದಲ್ಲಿಯೇ ಸೀಗೆಹಟ್ಟಿ ಸುತ್ತಮುತ್ತವೊಂದು ಕೊಲೆ ನಡೆಯಬೇಕಿತ್ತು. ಆತನ ಕೊಲೆಗಾಗಿ ವ್ಯವಸ್ಥಿತವಾಗಿ ಟೀಂವೊಂದು ಕೆಲಸ ಮಾಡಿತ್ತು. ಆದರೆ ಎಸ್ಪಿ ಖುದ್ದು ಫೀಲ್ಡ್ಗೆ ಇಳಿದು ಇಡೀ ಟೀಂನಲ್ಲಿ ಹಲವರನ್ನ ಬಂಧಿಸಿದ್ದಾರೆ.
ಎಸ್ಪಿ ಕಾರ್ಯಾಚರಣೆ ಹೇಗಿತ್ತು.
ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ತನಿಖಾಧಿಕಾರಿಯನ್ನ ನೇಮಿಸಲಾಗುತ್ತದೆ. ಆದರೆ, ತಮಗೆ ಬಂದ ಒಂದು ಸುದ್ದಿ ಕೇಳಿದ ಎಸ್ಪಿ ಅದರ ಬಗ್ಗೆ ಯಾರಲ್ಲಿಯು ಮಾಹಿತಿ ಹಂಚಿಕೊಳ್ಳುವುದಿಲ್ಲ.ತಮ್ಮದೇ ಒಂದು ಟೀಂ ಸಿದ್ದಪಡಿಸಿಕೊಂಡು ಅವರಿಗೂ, ಆಯ್ದ ಹೆಸರುಗಳನ್ನ ಹೇಳಿ, ಅವರನ್ನ ಲಿಫ್ಟ್ ಮಾಡುವಂತಷ್ಟೆ ಸೂಚಿಸುತ್ತಾರೆ.ಅದರಾಚೆಗೆ ಟೀಂನಲ್ಲಿಯು ಹೆಚ್ಚಿನ ಮಾಹಿತಿ ಇರೋದಿಲ್ಲ. ಇಷ್ಟೆಲ್ಲಾ ಆದರೂ ಗುಪ್ತಚರ ಇಲಾಖೆಗೆ ಯಾವೊಂದು ಮಾಹಿತಿ ಇದ್ದಿರಲಿಲ್ಲ.ಆಯಕಟ್ಟಿನ ಅಧಿಕಾರಿಗಳಿಗೂ ವಿಷಯ ಏನೂ ಅಂತಾ ಸ್ಪಷ್ಟವಿರಲಿಲ್ಲ.
ಇದೆಲ್ಲದರ ನಡುವೆ ಎಸ್ಪಿ ಲಕ್ಷ್ಮೀಪ್ರಸಾದ್ ಮಾತ್ರ ಒಬ್ಬೊಬ್ಬರೇ ಆರೋಪಿಗಳನ್ನ ಲಿಫ್ಟ್ ಮಾಡುತ್ತಿದ್ದರು. ಕಾಮತ್ ಪೆಟ್ರೋಲ್ ಬಂಕ್, ಭಾಠತೀ ಕಾಲೋನಿ ಸೇರಿದಂತೆ ಹಲವೆಡೆ ರಾತೋರಾತ್ರಿ ಆರೋಪಿಗಳನ್ನ ಎತ್ತಾಕ್ಕಿಕೊಂಡು ಬರಲಾಗಿತ್ತು. ಅವರನ್ನೆಲ್ಲಾ ವಿಚಾರಿಸಿದಾಗ, ನಡೆಸಿದ ಷಡ್ಯಂತ್ರ ಬಯಲಾಗಿದೆ. ಆಗ ಸ್ವತಃ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಶಾಕ್ ಆಗಿದ್ದಾರೆ. ಇದರ ನಡುವೆ, ಪ್ರಕರಣ ಹೊರಕ್ಕೆ ಹೋದರೆ ಅದರ ಮೇಲೆ ಸಾಕಷ್ಟು ಒತ್ತಡ ಎದುರಾಗುವ ಸಾದ್ಯತೆಯಿದ್ದರಿಂದ ತಕ್ಷಣ ಎಫ್ಐಆರ್ ದಾಖಲಿಸಿ ಆರೋಪಿಗಳನ್ನ ಅರೆಸ್ಟ್ ತೋರುವಂತೆ ಮಾಡಿದ್ದಾರೆ.
ಇದರ ನಡುವೆಯು ಸುದ್ದಿ ಲೀಕ್ ಆದ್ದರಿಂದ ಕೆಲವರು ತಪ್ಪಿಸಿಕೊಂಡಿದ್ದಾರೆ. ಒಟ್ಟಾರೆ ಅಕ್ರಮ ಕೂಟ ರಚಿಸಿ, ಕೊಲೆಗೆ ವ್ಯವಸ್ಥಿತ ಸಂಚು ರೂಪಿಸಿದ ಆರೋಪಿಗಳನ್ನ ಎಸ್ಪಿ ಲಕ್ಷ್ಮೀಪ್ರಸಾದ್ ಗುಪ್ತವಾಗಿಯೇ ಭೇದಿಸಿದ್ದಾರೆ. ಒಬ್ಬ ಎಸ್ಪಿ ಈ ರೀತಿ ಕಾರ್ಯಾಚರಣೆ ನಡೆಸಿದ್ದು ರಾಜ್ಯದಲ್ಲಿ ಇದೇ ಮೊದಲು ಎನ್ನಲು ಅಡ್ಡಿಯಲ್ಲ. ಈ ಕಾರಣಕ್ಕೆ ಲಕ್ಷ್ಮೀಪ್ರಸಾದ್ ಶ್ಲಾಘನಾರ್ಹರು.