ಸ್ಮಾರ್ಟ್‌ ಸಿಟಿ, ವಿಮಾನ ನಿಲ್ದಾಣ | ಬಿಡೋದಿಲ್ಲ ಎಂದಿದ್ದೇಕೆ ಮಧು ಬಂಗಾರಪ್ಪ | ಎಲೆಕ್ಷನ್‌ ಲಾಸ್ಟ್‌ ಮಾತು

Smart City, Airport | Madhu Bangarappa Reaction‌, Election lost talk. Madhu Bangarappa, Shimoga Elections, Geeta Sivarajakumar, Congress News,

ಸ್ಮಾರ್ಟ್‌ ಸಿಟಿ, ವಿಮಾನ ನಿಲ್ದಾಣ | ಬಿಡೋದಿಲ್ಲ ಎಂದಿದ್ದೇಕೆ ಮಧು ಬಂಗಾರಪ್ಪ | ಎಲೆಕ್ಷನ್‌ ಲಾಸ್ಟ್‌ ಮಾತು
Madhu Bangarappa Reaction‌, Election lost talk. Madhu Bangarappa, Shimoga Elections, Geeta Sivarajakumar, Congress News,

SHIVAMOGGA | MALENADUTODAY NEWS | May 5, 2024  

ಶಿವಮೊಗ್ಗ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರ ಕೊನೆಯಾಗುತ್ತಿರುವ ಹಿನ್ನೆಲೆಯಲ್ಲಿ ಇವತ್ತು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಮಧುಬಂಗಾರಪ್ಪಗೆ ಶಕ್ತಿ ಕೊಡುವುದಕ್ಕೆ ಗೀತಾಕ್ಕ ಜನ ಗೆಲ್ಲಿಸುತ್ತಾರೆ ಎಂದಿದ್ದಾರೆ. ಮನೆ ಬೇಕಾದಷ್ಟು ಮಾಡಬಹುದು, ಆದರೆ ಜನರ ಹೃದಯದಲ್ಲಿ ಮನೆ ಮಾಡಬೇಕು ಎಂದ ಮಧು ಬಂಗಾರಪ್ಪರವರು

ನಾನು ಅಧಿಕಾರ ಚಲಾಯಿಸುತ್ತಿದ್ದೇನೆ, ಗೀತಾ ಶಿವರಾಜಕುಮಾರ್‌ ಅಧಿಕಾರ ಬೇಡುತ್ತಿದ್ದಾರೆ. ಅವರು ಬಂಗಾರಪ್ಪರವರ ಮಗಳು, ಶಿವಣ್ಣರ ಪತ್ನಿ, ಅವರು ವಿಐಎಸ್‌ಎಲ್‌ನ್ನ ಮತ್ತೆ ಸ್ಥಾಪನೆ ಮಾಡುವ ಪ್ರಯತ್ನ ಮಾಡುತ್ತಾರೆ ಎಂದರು. ಮಧು ಬಂಗಾರಪ್ಪರರವರಿಗೆ ಶಕ್ತಿಕೊಡಲು ಗೀತಾ ಶಿವರಾಜ್‌ ಕುಮಾರ್‌ರವರನ್ನ ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

 

ಅಭಿವೃದ್ದಿ ಎಂದರೆ ಜನರ ಅಭವೃದ್ಧಿ,  ಆರ್ಥಿಕ ವಾಗಿ ಅಭಿವೃದ್ಧಿ ಮಾಡಬೇಕೆಂದು ಗೀತಕ್ಕರಿಗೆ ಕನಸಿದೆ , ಬಡವರಿಗೆ ಸಂತೆ ಮಾಡಲಿ ಅಂತಾ 2000 ಕೊಟ್ಟಿದ್ದೀವಿ. ಮೂಲಭೂತ ಸೌಲಭ್ಯ ಏನು ಮಾಡಿಲ್ಲ ಎನ್ನುವ ರಾಘವೇಂದ್ರರವರು ಅವರು ಇಷ್ಟು ದಿನ ಸಗಣಿ ತಿನ್ನುತ್ತಿದ್ರಾ ಎಂದು ಪ್ರಶ್ನಿಸಿದ್ರು. ಇಷ್ಟು ಇಷ್ಟು ದಿನ ಏನು ಕೆಲಸ ಮಾಡಿದ್ದೀರಾ ಎಂದು ಪ್ರಶ್ನಿಸಿದ ಶಿವಮೊಗ್ಗದ ರಸ್ತೆಗಳಲ್ಲಿ ಓಡಾಡುವಾಗ ಜನರು ಎಚ್ಚರ ವಹಿಸಬೇಕು, ಇದು ಅಭಿವೃದ್ಧಿನಾ ಎಂದ ಮಧು ಬಂಗಾರಪ್ಪ ರಬ್ಬೀಷ್ ಎಂದರು. 

 

ಶಿವಮೊಗ್ಗದಲ್ಲಿ ಸ್ಮಾರ್ಟ್‌ ಸಿಟಿ ಬಗ್ಗೆ ಕೇಳಿದರೆ ಜನರು ಕ್ಯಾಗರಿಸಿ ಉಗಿಯುತ್ತಿದ್ದಾರೆ. ಕೇಂದ್ರ ಸರ್ಕಾರದ ಪ್ರಾಜೆಕ್ಟ್‌ ಎನ್ನುತ್ತಾರೆ. ನಲವತ್ತು ಪರ್ಸೆಂಟ್‌ ಕಮಿಷನ್‌ ತಿಂದಿದ್ದಾರೆ. ರಾಜ್ಯ ಜನರ ಟ್ಯಾಕ್ಸ್‌ ದುಡ್ಡು ತಿಂದಿದ್ದಾರೆ.  ಸ್ಮಾರ್ಟ್‌ ಸಿಟಿ ಕಳಪೆ ಕಾಮಗಾರಿ ಬಗ್ಗೆ ತನಿಖೆಗೆ ಸಿಎಂ ರವರು ಈ ಸಂಬಂಧ ಲೆಟರ್‌ ಬರೆದಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣ ಹಾಗೂ ಗಾರ್ಮೆಂಟ್ಸ್‌ ವಿಚಾರವನ್ನು ಬಿಡುವುದಿಲ್ಲ ಎಂದರು. 

 

ಶಿವಮೊಗ್ಗದಲ್ಲಿ ರಾಗಿಗುಡ್ಡದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನ ಮಾಡಿದ್ರು. ಅಲ್ಲಿ ಹಚ್ಚಿದ ಬೆಂಕಿ ಆರಿಸುವ ಕೆಲಸವನ್ನು ಮಧು ಬಂಗಾರಪ್ಪರ ಮಾಡುತ್ತಾರೆ. ಕಿಡಿ ಹಚ್ಚುವ ಪ್ರಯತ್ನಮಾಡಿದ್ರು, ಹರ್ಷನ ವಿಷಯ ಈಗ ಮಾತನಾಡುತ್ತಿಲ್ಲ ಏಕೆ, ರಾಮನನ್ನ ದೇವರ ಮನೆಯಲ್ಲಿ  ಬೀಗ ಹಾಕಿಕೊಂಡು ಕೂತಿದ್ದಾರೆ. ಇವರ ಸಹವಾಸ ಬೇಡ ಅಂತಾ ರಾಮನೇ ಒಳಗಿನಿಂದ ಕೀ ಹಾಕಿಕೊಂಡು ಕುಳಿತಿದ್ದಾರೆ. ಎದುರಾಳಿಗಳು ಹಿಂದೂತ್ವದ ಹೆಸರಲ್ಲಿ ವೋಟು ಕೇಳುತ್ತಿದ್ದಾರೆ. ಶಿವಮೊಗ್ಗಕ್ಕೆ ಏನು ಮಾಡಿದ್ದೀರಾ ಅಂತಾ ಪ್ರಶ್ನಿಸಿದರು. 

 

ಇದೇ ವೇಳೆ ಕಾಂಗ್ರೆಸ್‌ಗೆ ವೋಟ್‌ ಹಾಕದಿದ್ದರೇ ಗ್ಯಾರಂಟಿ ನಿಲ್ಲಿಸ್ತೀವಿ ಎಂದು ಹೆದರಿಸ್ತಿರುವುವರನ್ನ ಸಸ್ಪೆಂಡ್‌ ಮಾಡುತ್ತೇವೆ ಎಂದ ಮಧು ಬಂಗಾರಪ್ಪರವರು, ಅಂತಹವರನ್ನ ಒದ್ದು ಹೊರಕ್ಕೆ ಹಾಕುತ್ತೇವೆ ಎಂದಿದ್ದಾರೆ. ಅಲ್ಲದೆ ಗ್ಯಾರಂಟಿಯನ್ನು ನಿಲ್ಲಿಸುವುದಿಲ್ಲ ಎಂದಿದ್ದಾರೆ.