ದುಡ್ಡು..ದುಡ್ಡು..ದುಡ್ಡು..! ಕೊಟ್ಟ ಹಣ ವಾಪಸ್ ಕೇಳುತ್ತಿರುವ ಪರಾಚಿತ ಅಭ್ಯರ್ಥಿಗಳು!
Money.. Money.. Money..! Candidates asking for money back!
KARNATAKA NEWS/ ONLINE / Malenadu today/ May 20, 2023 SHIVAMOGGA NEWS
ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ 2023 ಮುಗಿದು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಇದರ ನಡುವೆ ಚುನಾವಣೆಯಲ್ಲಿ ಮತದಾರರಿಗೆ ಕೋಟ್ಯಾಂತರ ರೂಪಾಯಿಯನ್ನು ಹಂಚಲಾಗಿದೆ ಎಂಬುದು ಅಂತರಂಗ ಸತ್ಯ. ಈ ಸಲ ವಿಶೇಷ ಅಂದರೆ, ಮತದಾರನಿಗೆ ಕೊಟ್ಟ ದುಡ್ಡನ್ನು ಅಭ್ಯರ್ಥಿಗಳು ವಾಪಸ್ ಕೇಳುತ್ತಿದ್ದಾರೆ.
ಯಾರೇನು ಪುಗಸಟ್ಟೆ ಕೊಡಲ್ಲ , ಬಂದಷ್ಟು ಬರಲಿ ಎಂಬಂತಹ ಧೋರಣೆಗಳು ಈ ಸಲು ತುಸು ಜಾಸ್ತಿಯೇ ಇದ್ದವು! ಆಯ್ದ ಸ್ಲಂಗಳಲ್ಲಷ್ಟೆ ಅಲ್ಲದೆ, ಘನಂದಾರಿ ವ್ಯಕ್ತಿಗಳು ಸಹ ರಾತ್ರಿ ಖರ್ಚಿಗಾಗುತ್ತೆ ಎಂದು ಹಣ ಪಡೆದುಕೊಂಡಿದ್ದರು. ಇದೀಗ ಚುನಾವಣೆ ಮುಗಿದಿದೆ. ಸೋತ ಅಭ್ಯರ್ಥಿಗಳು ಕೊಟ್ಟ ಹಣ ವಾಪಸ್ ಕೊಡಿ ಎಂದು ಕೇಳುತ್ತಿದ್ದಾರೆ.
ಕಾರು-ಒಮಿನಿ ಡಿಕ್ಕಿ! ತಲೆಕೆಳಗಾಗಿ ಬಿದ್ದ ವಾಹನ! ಘಟನೆ ತಡವಾಗಿ ಬೆಳಕಿಗೆ
ಇದಕ್ಕೆ ಸಾಕ್ಷಿ ಎಂಬಂಥೆ, ಚುನಾವಣೆಯಲ್ಲಿ ಕೊಟ್ಟಿದ್ದ ಹಣವನ್ನು ಜನರಿಗೆ ಹಂಚದಿದ್ದರೆ ವಾಪಸ್ ತಂದುಕೊಡಬೇಕು ಎಂದು ಶಿವಮೊಗ್ಗ ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ ಮನವಿ ಮಾಡಿದ್ದಾರಂತೆ.
ಈ ಬಗ್ಗೆ ಮಾಧ್ಯಮವೊಂದರಲ್ಲಿ ವರದಿ ಪ್ರಕಟವಾಗಿದ್ದು, ಕೆ.ಆರ್.ಪೇಟೆಯಲ್ಲಿ ಚುನಾವಣೆಯಲ್ಲಿ ಯಾರು ಯಾರು ಹಣ ಹಂಚಿಲ್ಲವೋ ಅವರೆಲ್ಲಾ ವಾಪಸ್ ತಂದು ಕೊಡಿ ಎಂದು ಕೆಳಿದ್ದಾರೆ ಎನ್ನಲಾಗಿದೆ.
ಇನ್ನೊಂದು ಕಡೆ, ಅಬ್ಬರದ ಸದ್ದು ಮಾಡಿದ್ದ ಕೆಜಿಎಫ್ ಬಾಬು ಸಹ ತಾವು ಕೊಟ್ಟ ಚಕ್ಗಳನ್ನು ವಾಪಸ್ ಕೊಡಿ ಎಂದು ಮಸೀದಿಗಳಿಗೆ ಜಾಹಿರಾತು ಮೂಲಕ ತಿಳಿಸಿದ್ದಾರಂತೆ. ಚುನಾವಣೆ ಹಿನ್ನೆಲೆಯಲ್ಲಿ ಅವು 17 ಕೋಟಿಗೂ ಅಧಿಕ ಮೌಲ್ಯದ ಹಣವನ್ನು ವಿವಿಧ ಮಸೀದಿಗಳಿಗೆ ನೀಡಿದ್ದರು ಎನ್ನಲಾಗಿದೆ. ಇದೀಗ ಚುನಾವಣೆಯಲ್ಲಿ ಸೋತಿದ್ದರಿಂದ ಅವರು ನನ್ನ ಹಣ ಸ್ವೀಕಾರ್ಹವಲ್ಲದ ಹಣವಾಗಿದ್ದು, ಚೆಕ್ಗಳನ್ನು ವಾಪಸ್ ಕೊಡಿ ಎಂದು ಕೇಳಿದ್ದಾರೆ.