ಶಿವಮೊಗ್ಗ ಪ್ರೆಸ್​ ಟ್ರಸ್ಟ್​ನಲ್ಲಿ ಕರೋಕೆ ಕಲರವ! ಶಿವಣ್ಣನ ಹುಟ್ಟುಹಬ್ಬಕ್ಕೆ ವಿಶಿಷ್ಟ ಉಡುಗೊರೆ !

Karaoke Kalarava at Shivamogga Press Trust! Special gift for Shivanna's birthday!

ಶಿವಮೊಗ್ಗ ಪ್ರೆಸ್​ ಟ್ರಸ್ಟ್​ನಲ್ಲಿ ಕರೋಕೆ ಕಲರವ! ಶಿವಣ್ಣನ ಹುಟ್ಟುಹಬ್ಬಕ್ಕೆ  ವಿಶಿಷ್ಟ ಉಡುಗೊರೆ !

KARNATAKA NEWS/ ONLINE / Malenadu today/ Jul 13, 2023 SHIVAMOGGA NEWS

ಶಿವಮೊಗ್ಗ: ಹ್ಯಾಟ್ರಿಕ್‌ ಹೀರೋ ನಟ ಶಿವರಾಜ್‌ ಕುಮಾರ್ ಅವರ 61ನೇ ಜನ್ಮದಿನಾಚರಣೆ ಅಂಗವಾಗಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಹಾಗೂ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದದಿಂದ ನಡೆದ ಶಿವರಾಜ್‌ ಕುಮಾರ್ ಗಾಯನ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರು ಶಿವರಾಜ್ ಕುಮಾರ್ ಅವರ ನಟನೆಯ ಚಿತ್ರಗಳ ಹಾಡುಗಳನ್ನು ಹಾಡಿ ನೆರದಿದ್ದ ಪ್ರೇಕ್ಷಕರನ್ನು ರಂಜಿಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಮಾತನಾಡಿ, ಹಿರಿಯ ಕಲಾವಿದರು ಸ೦ಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದರು. ಕಲಾವಿದರ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಶಿವಮೊಗ್ಗದಲ್ಲಿ ವಿಭಿನ್ನ ಕಾರ್ಯಕ್ರಮಕ್ಕೆ ನಾಂದಿ ಹಾಡಿದೆ.

ಮುಂದೆ ಇದೇ ರೀತಿ ಪ್ರತಿ ನಟ- ನಟಿಯರು, ಸಂಗೀತಗಾರರು ಹಾಗೂ ಸಿ.ಅಶ್ವತ್ಥ, ಡಾ.ರಾಜ್ ಕುಮಾ‌ರ್​ ಸೇರಿದಂತೆ ವಿವಿಧ  ಹಿನ್ನೆಲೆ ಗಾಯಕರ ಜನ್ಮದಿನಾಚರಣೆಯಂದು ವಿಭಿನ್ನ ಕಾರ್ಯಕ್ರಮ ಆಚರಿಸಲಾಗುವುದು ಎಂದು ತಿಳಿಸಿದರು. ಡಾ.ಶಿವರಾಜ್‌ ಉತ್ತಮ ಕಲಾವಿದ, ಅವರ ತಂದೆ ಡಾ. ರಾಜ್ ಕುಮಾರ್ ಅವರು ನಟನೆ ಮೂಲಕವೇ ಕೋಟ್ಯಾಂತರ ಜನರ ಮನಸು ಗೆದ್ದವರು. ಅವರ ಮಗ ಶಿವರಾಜ್ ಕುಮಾರ್ ಅವರು ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪ್ರೆಸ್ ಟ್ರಸ್ಟ್ ಖಜಾಂಚಿ ಜೇಸುದಾಸ್, ಹೊನ್ನಾಳಿ ಚಂದ್ರಶೇಖರ್ ಇದರು.


ದಿನ ಬೀಳುವ ಕನಸಿನ ಹಿಂದೆ ಶಿವಮೊಗ್ಗ ಬಾಯ್ಸ್! ಸಿನಿಮಾಗೆ ಸಿಕ್ಕಿದೆ 6000 ಒಕೆ! ನಾಳೆ ರಿಲೀಸ್​ ಆಗ್ತಿರೋ ಈ ಚಿತ್ರದ ಸಸ್ಪೆನ್ಸ್​ ಇಲ್ಲಿದೆ ನೋಡಿ

ಚಿರಾಯು ಕ್ರಿಯೇಟಿವ್‌ ಸಿನಿಮಾಸ್ (ರಿ) ಅಡಿಯಲ್ಲಿ ರಮೇಶ್‌ಕುಮಾರ್ ನಿರ್ಮಾಣದ ಭರತ್‌ ನಂದ ನಿರ್ದೇಶನದ ನಮಸ್ತೆ ಗೋಸ್ಟ್ ಸಿನಿಮಾ ಇದೇ ಜುಲೈ 14 ಶುಕ್ರವಾರದಂದು ಬೆಂಗಳೂರಿನಲ್ಲಿ ಹಾಗೂ ಶಿವಮೊಗ್ಗದ ಸಿಟಿ ಸೆಂಟರ್ ಮಾಲ್‌ನ ಭಾರತ್ ಸಿನಿಮಾಸ್‌ನಲ್ಲಿ ಬಿಡುಗಡೆಯಾಗುತ್ತಿದೆ. 

ಮಧ್ಯಾಹ್ನ 2.00 ಗಂಟೆಗೆ ಶೋ ಇರುತ್ತದೆ. ಚಿತ್ರ ತಂಡವು ವಿಭನ್ನ ರೀತಿಯಲ್ಲಿ ಪ್ರಚಾರ ಮಾಡುವುದರ ಮೂಲಕ ಎಲ್ಲರ ಗಮನ ಸೆಳೆದಿದೆ. ಈವರೆಗೂ ಚಿತ್ರ ತಂಡಗಳು ಪ್ರೀಮಿಯರ್ ಶೋ ಮಾಡಿ ಸಿನಿಮಾ ತೋರಿಸುತ್ತಿದ್ದವು. ಆದರೆ ನಮ್ಮ ಚಿತ್ರ ತಂಡ ಸಿನಿಮಾ ಬಿಡುಗಡೆಗೂ ಮೊದಲೇ ಸುಮಾರು 6000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಿನಿಮಾ ತೊರಿಸಿ ಅವರ ಅಭಿಪ್ರಾಯ ಪಡೆದಿದೆ. ಈ ರೀತಿ ವಿದ್ಯಾರ್ಥಿಗಳಿಗೆ ಸಿನಿಮಾ ತೋರಿಸಿದರೆ ಅವರು ಮತ್ತೊಂದಷ್ಟು ಜನರಿಗೆ ಹೇಳಿದರೆ ಚಿತ್ರಕ್ಕೆ ಪ್ರಚಾರ ಸಿಗುತ್ತದೆ ಎಂಬುದು ನಮ್ಮ ತಂಡದ ನಂಬಿಕೆ.

ತಾರಾಗಣದಲ್ಲಿ ಮುಖ್ಯ ಪಾತ್ರದಲ್ಲಿ ನಿರ್ದೇಶಕರಾದ ಭರತ್ ನಂದರವರೇ ನಾಯಕ ನಟನಾಗಿ ಅಭಿನಯಿಸಿದ್ದಾರೆ. ನಾಯಕಿಯಾಗಿ ವಿದ್ಯಾರಾಜ್ ಕಾಣಿಸಿಕೊಂಡಿದ್ದಾರೆ. ಇನ್ನುಳಿದ ಮುಖ್ಯಪಾತ್ರಗಳಲ್ಲಿ ಬಾಲರಾಜ್‌ವಾಡಿ, ಶಿವಮೊಗ್ಗ ಹರೀಶ್, ಶಿವಕುಮಾರ್ ಆರಾಧ್ಯ, ಅಖಿಲೇಶ್ ಮುಂತಾದವರು ನಟಿಸಿದ್ದಾರೆ. ಇನ್ನೂ ವಿಶೇಷವೆನೆಂದರೆ ನಮ್ಮ ಶಿವಮೊಗ್ಗದವರೇ ಆದ ಮಧುಸೂದನ್ ರವರ ಕ್ಯಾಮರಾ ಕೈ ಚಳಕದಲ್ಲಿ ಚಿತ್ರ ಮೂಡಿಬಂದಿದೆ. ಜೊತೆಗೆ ರೂಪ ಹರೀಶ್ ರವರು ಪ್ರಸಾದನದಲ್ಲಿ ಕೆಲಸ ಮಾಡಿದ್ದಾರೆ. ಸಿನಿಮಾದಲ್ಲಿ 80% ನಮ್ಮ ಶಿವಮೊಗ್ಗದವರೇ ಕೆಲಸ ಮಾಡಿದ್ದಾರೆ 


ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಬಾರ್ಡ್​ ಫೌಂಡೇಶನ್​ ದಿನಾಚರಣೆ

ನಬಾರ್ಡ್​ ಮತ್ತು ಚೈತನ್ಯ ರೂರಲ್ ಡೆವೆಲಪ್ ಮೆಂಟ್ ಸೊಸೈಟಿ , ಶಿವಮೊಗ್ಗ ಇವರ ಸಹಯೋಗದೊಂದಿಗೆ ನಬಾಡ೯ ಫೌಂಡೇಶನ್ ದಿನಾಚರಣೆಯ ನ್ನು ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ದಿನಾಂಕ 12/07/2023 ರಂದು ಆಚರಿಸಲಾಯಿತುನಬಾಡ೯ ಡಿ ಡಿ ಎಂ ಶರತ್ ಗೌಡ ರವರು ಉದ್ಫಾಟಿಸಿ ಮಾತನಾಡುತ್ತಾ ನಬಾರ್ಡ್​ ಪ್ರಾರಂಭವಾಗಿ 42 ವಷ೯ ಕಳೆದಿದ್ದು ದೇಶದಾದ್ಯಂತ ರೈತರಿಗಾಗಿ ಹಣಕಾಸಿನ ಸಹಾಯ ಮಾಡುತ್ತಾ ಬಂದಿದೆ ಮುಂದೆಯೂ ಸಹ ಹೆಚ್ಚಿನ ಸವಲತ್ತುಗಳನ್ನು ನೀಡಲಿದೆ ರೈತರು ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು ಈ ಕಾಯ೯ಕ್ರಮದಲ್ಲಿ  ಅಮರ್ ನಾಥ್  ಶೆಟ್ಟಿ Lead bank Manager ,, Canara bank shimoga, ಬಿ. ಟಿ ಭದ್ರೀಶ್ CEO , ಚೈತನ್ಯ ರೂರಲ್ ಡೆವೆಲಪ್ ಮೆಂಟ್ ಸೊಸೈಟಿ , ಶಿವಮೊಗ್ಗ,  ವಾಸುದೇವ್ DCC bank assistant director,  ಸಣ್ಣತಿಮ್ಮಪ್ಪ ಯೋಜನಾ ಸಂಯೋಜಕರು ಕೃಷಿ ವಿಜ್ಞಾನ ಕೇಂದ್ರ ಶಿವಮೊಗ್ಗ ಮತ್ತು ದಿನಕರ ಜಾದವ್ , ಇವರು ಬಾಗವಹಿಸಿದ್ದರು