ವಿಮಾನ ನಿಲ್ದಾಣದಲ್ಲಿ ಭೂಮಿ ಕೊಟ್ಟ ‘ರೈತ ‘ ರಿಗೆ ಸನ್ಮಾನ ಮಾಡಲು ಆಕ್ಷೇಪ ವ್ಯಕ್ತವಾಗಿದ್ದೇಕೆ? ಕಾರ್ಯಕ್ರಮದಲ್ಲಿ ಘೋಷಣೆ ಕೇಳಿಬಂದಿದ್ದೇಕೆ?
Why was there an objection to felicitating the 'farmer' who gave land at the airport? ವಿಮಾನ ನಿಲ್ದಾಣದಲ್ಲಿ ಭೂಮಿ ಕೊಟ್ಟ ‘ರೈತ ‘ ರಿಗೆ ಸನ್ಮಾನ ಮಾಡಲು ಆಕ್ಷೇಪ ವ್ಯಕ್ತವಾಗಿದ್ದೇಕೆ?
KARNATAKA NEWS/ ONLINE / Malenadu today/ Aug 31, 2023 SHIVAMOGGA NEWS
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ವಿಮಾನಯಾನ ಕಾರ್ಯಾಚರಣೆ ಹಾಗೂ ಸಾಮಾಜಿಕ ಜಾಲತಾಣ ಉದ್ಘಾಟನೆ ವೇಳೆಯಲ್ಲಿ ವಿಮಾನ ನಿಲ್ದಾಣಕ್ಕಾಗಿ ಭೂಮಿಕೊಟ್ಟ ರೈತರಿಗೆ ಸನ್ಮಾನ ಮಾಡುವ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ಕೂಡ ನಡೆಯಿತು.
ವಿಮಾನಯಾನ ಉದ್ಘಾಟನಾ ಕಾರ್ಯಕ್ರಮದಲ್ಲಿ , ಶಿವಮೊಗ್ಗ ಏರ್ಪೋರ್ಟ್ಗಾಗಿ ಭೂಮಿಕೊಟ್ಟ ರೈತರನ್ನು ಸನ್ಮಾನಿಸಲು ಮಾಜಿ ಸಿಎಂ ಯಡಿಯೂರಪ್ಪನವರು ಮುಂದಾದರು, ಈ ವೇಳೆ ಕಾಂಗ್ರೆಸ್ನ ವಿಜಯಕುಮಾರ್ ಸೇರಿದಂತೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ನೀವು ರೈತರಿಗಲ್ಲ, ಬ್ರೋಕರ್ಗಳಿಗೆ ಸನ್ಮಾನ ಮಾಡುತ್ತಿದ್ದೀರಾ ಎಂದು ಘೋಷಣೆ ಕೂಗಿದರು. ಅಲ್ಲದೆ ನಿಜವಾದ ರೈತರನ್ನು ಸನ್ಮಾನಿಸುವಂತೆ ಆಗ್ರಹಿಸಿದ್ರು. ಈ ವೇಳೆ ಮಧ್ಯಪ್ರವೇಶ ಮಾಡಿದ ಸಂಸದ ಬಿ.ವೈ.ರಾಘವೇಂದ್ರರವರು, ನಮಗೆ ಎಲ್ಲರೂ ಸಹ ರೈತರೇ, ಇದರಲ್ಲಿ ಭೇದಭಾವ ತೋರಲು ಆಗದು ಎಂದು ಅಸಮಾಧಾನಗೊಂಡವರನ್ನು ಸಮಾಧಾನಪಡಿಸಿದರು. ಇನ್ನೊಂದೆಡೆ ಸ್ಥಳದಲ್ಲಿದ್ದ ಪೊಲೀಸರು ಸನ್ನಿವೇಶವನ್ನು ತಿಳಿಗೊಳಿಸಿದರು.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರೈತರಿಗೆ ಸನ್ಮಾನದ ವೇಳೆ ಕಾಂಗ್ರೆಸ್ನ ಮುಖಂಡರಿಂದ ಆಕ್ಷೇಪ #shivamogga #shivamoggaairport pic.twitter.com/fNXUPnWFmt
— malenadutoday.com (@CMalenadutoday) August 31, 2023
ಇನ್ನಷ್ಟು ಸುದ್ದಿಗಳು
-
ಗುದ್ದಲಿ ಪೂಜೆಗೆಂದು ವಡ್ನಾಳ್ಗೆ ಹೋಗಿ ಮನೆಗೆ ವಾಪಸ್ ಬಂದಾಗ ಮಾಲೀಕರಿಗೆ ಎದುರಾಗಿತ್ತು ಶಾಕ್!
-
JOB NEWS / ಗೃಹರಕ್ಷಕ ದಳದಲ್ಲಿ ಖಾಲಿ ಇರುವ ಸ್ಥಾನಗಳನ್ನು ತುಂಬಲು ಅರ್ಜಿ ಆಹ್ವಾನ