ಹುಣಸೋಡು ಸ್ಫೋಟ ನೆನಪಿಸಿದ ಕಡೂರು ತಾಲ್ಲೂಕಿನಲ್ಲಿನ ನಡೆದ ಘಟನೆ | ರೈತನ ಕಾಲು ಕಟ್ |
The incident took place in Sevapur, Kadur taluk, Chikmagalur district
KARNATAKA NEWS/ ONLINE / Malenadu today/ Oct 20, 2023 SHIVAMOGGA NEWS
ಶಿವಮೊಗ್ಗ ಜಿಲ್ಲೆಯ ಹುಣಸೋಡುವಿನಲ್ಲಿ ಸಂಭವಿಸಿದ್ದ ಸ್ಫೋಟದ ನೆನಪು ಸುಲಭವಾಗಿ ಮರೆತುಹೋಗುವಂತದ್ದಲ್ಲ. ಇಡೀ ರಾಷ್ಟ್ರದ ಗಮನ ಸೆಳೆದಿದ್ದ ಘಟನೆಯ ನಂತರವೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ವಾ ಎಂಬ ಅನುಮಾನವೂ ಮೂಡುತ್ತಿದೆ. ಅಲ್ಲದೆ ಈ ಘಟನೆಯನ್ನ ಮತ್ತೆ ನೆನಪು ಮಾಡಿಕೊಟ್ಟಿದೆ ಚಿಕ್ಕಮಗಳೂರಿನ ಕಡೂರಲ್ಲಿ ನಡೆದ ಸ್ಫೋಟದ ಸನ್ನಿವೇಶ..
ಇಲ್ಲಿನ ಸೇವಾಪುರದ ಗ್ರಾಮದಲ್ಲಿ ಕ್ವಾರಿಯ ಡೈನಾಮೆಟ್ ಬ್ಲಾಸ್ಟ್ ಆಗಿದ್ದು ರೈತರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೆ ಅದರಿಂದ ಚೇತರಿಸಿಕೊಳ್ಳಲಾಗದೇ ಕ್ವಾರಿಯಲ್ಲೇ ಬಿದ್ದಿದ್ದರು. ಅವರನ್ನ ಚಿಕಿತ್ಸೆಗೆ ಕರೆದೊಯ್ಯಲು ಆಗಿರಲಿಲ್ಲ.
ಸಿದ್ದನಾಯ್ಕ್ ಎಂಬವರು ತಮ್ಮ ಜಮೀನಿನಿಂದ ವಾಪಸ್ ಬರುತ್ತಿದ್ದಾಗ ಗ್ರಾಮದ ಕ್ವಾರಿಯಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ಬಗ್ಗೆ ಮಾಹಿತಿ ನೀಡಿರಲಿಲ್ಲವಾ? ಅಥವಾ ಘಟನೆಯ ಹಿಂದೆ ಬೇರೆಯದ್ದೆ ಕಾರಣವಿತ್ತಾ ಇನ್ನಷ್ಟೆ ಗೊತ್ತಾಗಬೇಕಿದೆ. ಸ್ಫೋಟ ಸಂಭವಿಸಿದ ರಭಸಕ್ಕೆ ರೈತನ ಕಾಲು ಛಿದ್ರಗೊಂಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮನೆಗೆ ಬರಬೇಕಾದವರು ಬಂದಿಲ್ಲ ಎಂದು ಹುಡುಕಾಡಿದ ಬಳಿಕ ಕಲ್ಲಿನ ರಾಶಿಯ ನಡುವೆ ಸಿದ್ದನಾಯ್ಕ್ ಬಿದ್ದು ಒದ್ದಾಡುತ್ತಿರುವ ದೃಶ್ಯ ಕಂಡುಬಂದಿದ್ದು, ಊರಿನವರೆಲ್ಲಾ ಸೇರಿಕೊಂಡು ಅವರನ್ನ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಈ ಸಂಬಂಧ ಕಡೂರು ಪೊಲೀಸ್ ಸ್ಟೇಷನ್ನಲ್ಲಿ ದೂರು ದಾಖಲಾಗಿದೆ
ಇನ್ನಷ್ಟು ಸುದ್ದಿಗಳು
ಶೇ...ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL
ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ