ನಿಂತ ನೆಲವೇ ಕುಸಿದರೇ ಕಥೆ ಏನು? ವಿಡಿಯೋ ನೋಡಿ! ಜೀವ ಜಸ್ಟ್​ ಬಚಾವ್!

In a shocking incident, a man escaped unhurt in a land slide in NR Pura.

ನಿಂತ ನೆಲವೇ ಕುಸಿದರೇ ಕಥೆ ಏನು? ವಿಡಿಯೋ ನೋಡಿ! ಜೀವ ಜಸ್ಟ್​ ಬಚಾವ್!

KARNATAKA NEWS/ ONLINE / Malenadu today/ Jul 8, 2023 SHIVAMOGGA NEWS 

ಬಾರದ ಮಳೆ ಬಂದು ಬರದ ಆತಂಕವನ್ನೇನೋ ಕಳೆದಿದೆ. ಆದರೆ ಬಿಡುವಿಲ್ಲದ ಮಳೆರಾಯ ಧರೆ ಕುಸಿತದ ಭಯವನ್ನು ಮೂಡಿಸುತ್ತಿದ್ಧಾನೆ. ಇದಕ್ಕೆ ಸಾಕ್ಷಿಎಂಬಂತ ಘಟನೆಯೊಂದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ವ್ಯಕ್ತಿಯೊಬ್ಬ ಮನೆ ಮುಂದುಗಡೆ ನಿಂತುಕೊಂಡು ಕಾಡಿನ ಕಡೆ ನೋಡುತ್ತಿದ್ಧಾನೆ. ಈ ವೇಳೆ ಆತನಿಗೆ ಏನೋ ತನ್ನ ಕಾಲು ಅಲುಗಾಡಿದಂತಾಗಿದೆ. ತಕ್ಷಣವೆ ಚೇಳು ಕಚ್ಚಿದವರಂತೆ ಆತ ಎರಡು ಹೆಜ್ಜೆ ಹಿಂದಕ್ಕೆ ಹಾರುತ್ತಾನೆ. ಆತ ಹಿಂದಕ್ಕೆ ಹಾರುವ ಹೊತ್ತಿನಲ್ಲಿಯೇ ಆತ ನಿಂತಿದ್ದ ಧರೆ ಜರಿದಿದೆ. 

ಈ ದೃಶ್ಯ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೆಲವೇ ಸೆಕೆಂಡ್​ನಲ್ಲಿ ನಡೆಯುವ ಘಟನೆಯ ದೃಶ್ಯ, ತಾನಿಂತ ನೆಲವೇ ಕುಸಿದರೇ  ಮನುಷ್ಯ  ಯಕಶ್ಚಿತ್​ ಅಷ್ಟೆ ಎಂಬ ಸಂದೇಶವನ್ನು ಸಾರುತ್ತಿದೆ. ಅಂದಹಾಗೆ, ಈ ಘಟನೆ ನಡೆದಿರುವುದು ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್. ಪುರ ತಾಲೂಕಿನ ಮೇಲ್ಪಾಲ್ ಬಳಿಯಲ್ಲಿ . ಘಟನೆಯಲ್ಲಿ ಬಚಾವ್ ಆದವರು  ಶಶಿಕುಮಾರ್ .  ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ನೆಲ ಸಡಿಲಗೊಂಡಿದ್ದು ಮಲ್ನಾಡ್​ ಹಲವೆಡೆ ಸಣ್ಣಪುಟ್ಟ ಧರೆ ಕುಸಿತಗಳು ಸಂಭವಿಸುತ್ತಿದೆ. ಮೆಲ್ಪಾಲ್​ನಲ್ಲಿಯು ಅಂತಹುದ್ದೇ ಘಟನೆ ನಡೆದಿದ್ದು ಶಶಿಕುಮಾರ್ ಸ್ವಲ್ಪದರಲ್ಲಿಯೇ ಪಾರಾಗಿದ್ದಾರೆ.