ಶಿವಮೊಗ್ಗ ಗ್ರಾಮಾಂತರದಲ್ಲಿ ‘ಹರಿದ’ ಫ್ಲೆಕ್ಸ್ ರಾಜಕಾರಣ! ಕೇಸರಿ ಪಾಳಯದಲ್ಲಿ ಶೀತಲ ಸಮರವೇ?
Flex politics in Shimoga rural! Cold War in the bjp camp?
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಫ್ಲೆಕ್ಸ್ ಪಾಲಿಟಿಕ್ಸ್ ಜೋರಾಗಿ ನಡೆಯುತ್ತಿದೆ. ಅದು ಒಂದೇ ಪಕ್ಷದಲ್ಲಿನ ಸದಸ್ಯರ ನಡುವಿನ ಶೀತಲ ಸಮರಕ್ಕೆ ಸಾಕ್ಷಿಯಾಗಿದೆ.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಹಾಲಿ ಶಾಸಕ ಅಶೋಕ್ ನಾಯ್ಕ್ ಈ ಸಲವೂ ಮತ್ತೊಮ್ಮೆ ಸ್ಪರ್ಧೆ ಬಯಸಿದ್ದು, ಅಭ್ಯರ್ಥಿಯಾಗುವ ನಿರೀಕ್ಷೆಯಲ್ಲಿದ್ದಾರೆ. ಅದರೇ ರೀತಿಯಲ್ಲಿ ಪಾಲಿಕೆ ಸದಸ್ಯ ದೀರರಾಜ್ ಹೊನ್ನವಿಲೆ ಕೂಡ ಕ್ಷೇತ್ರದಲ್ಲಿ ಟಿಕೆಟ್ ಬಯಸಿದ್ದಾರೆ. ಈ ನಿಟ್ಟಿನಲ್ಲಿ ಪ್ರಯತ್ನವನ್ನು ಸಹ ನಡೆಸ್ತಿದ್ದಾರೆ. ಸದ್ಯ ಈ ಪೈಪೋಟಿ ರಾಜ್ಯಾಧ್ಯಕ್ಷರ ಭೇಟಿ ವೇಳೆ ಫ್ಲೆಕ್ಸ್ ಹರಿದ ಘಟನೆಗಳಿಗೆ ಸಾಕ್ಷಿಯಾಗಿದೆ.
ಮೀನು ಹಿಡಿಯಲು ಬಂದವರ ಮೇಲೆ ಜೇನುನೊಣಗಳ ದಾಳಿ! 6 ಜನರಿಗೆ ಗಂಭೀರ ಪೆಟ್ಟು!
ಬಿಜೆಪಿ ರಾಜ್ಯಾಧ್ಯಕ್ಷ ನಿನ್ನೆ ಹೊಳಲೂರಿನಲ್ಲಿ ಪೇಜ್ ಪ್ರಮುಖ್ ಸಮಾವೇಶಕ್ಕೆ ಬಂದಿದ್ದರು. ವಿಪಕ್ಷಗಳ ವಿರುದ್ಧ ಅಬ್ಬರದ ಮಾತುಗಳನ್ನ ಆಡಿ, ಕಾರ್ಯಕರ್ತರನ್ನು ಹುರಿದುಂಬಿಸಿ, ಚುನಾವಣೆಗೆ ಅಣಿಯಾಗುವಂತೆ ಅವರು ಪ್ರೇರಣೆ ನೀಡಿದರು. ಆದರೆ ಇದರ ನಡುವೆ ರಾಜ್ಯಾಧ್ಯಕ್ಷರ ಸ್ವಾಗತದ ಪ್ಲೆಕ್ಸ್ಗಳು ದೊಡ್ಡಮಟ್ಟಿಗೆ ಸದ್ದು ಮಾಡಿವೆ.
JP BIG EXCLUSIVE : ಸಕ್ರೆಬೈಲ್ ಅನೆ ಬಿಡಾರದಿಂದ ಮತ್ತೆ ಮೂರು ಆನೆಗಳ ಸ್ಥಳಾಂತರಕ್ಕೆ ಬೇಡಿಕೆ!
ಅಶೋಕ್ ನಾಯ್ಕ್ ಹಾಗೂ ದೀರರಾಜ್ ಹೊನ್ನವಿಲೆ ಇಬ್ಬರು ಸಹ ರಾಜ್ಯಾಧ್ಯಕ್ಷರ ಸ್ವಾಗತ ಕೋರಿ ಪ್ಲೇಕ್ಸ್ಗಳನ್ನು ಅಳವಡಿಸಿದ್ದರು. ಈ ನಡುವೆ ಹೊನ್ನವಿಲೆಯವರ ಭಾವಚಿತ್ರವಿದ್ದ ಫ್ಲೆಕ್ಸ್ಗಳನ್ನು ಕಿಡಿಗೇಡಿಗಳು ಹರಿದಿದ್ದಾರೆ. ಇದನ್ನ ಯಾರು ಮಾಡಿದ್ರು? ಏಕೆ ಮಾಡಿದ್ರು ? ಎಂಬುದು ಭಾವಚಿತ್ರಗಳನ್ನು ನೋಡಿಯೆ ಪಾಲಿಕೆ ಸದಸ್ಯರ ಬೆಂಬಲಿಗರಿಗೆ ಅರ್ಥವಾಗಿತ್ತು. ಹೀಗಾಗಿ, ಶಾಸಕರ ಬೆಂಬಲಿಗರ ವಿರುದ್ಧ ಆರೋಪ ಮಾಡಿ ಆಕ್ರೋಶ ಹೊರಹಾಕಿದ್ದರು. ಸದ್ಯ ಈ ಫ್ಲೆಕ್ಸ್ ರಾಜಕಾರಣ ಗ್ರಾಮಾಂತರ ಕ್ಷೇತ್ರದಲ್ಲಿನ ಬಿಜೆಪಿ ನಾಯಕರ ಶೀತಲಸಮರಕ್ಕೆ ಸಾಕ್ಷಿಯಾಗಿದ್ದು, ಟಿಕೆಟ್ ಘೋಷಣೆಯಾಗುವವರೆಗೂ ಈ ಪೈಪೋಟಿ ಮುಂದುವರಿಯುವ ಸಾಧ್ಯತೆ ಇದೆ.
ನಂದಿನಿ ಜಂಬೋ ಪಾಕೆಟ್ ಹಾಲಿನ ದರ 3 ರೂಪಾಯಿ ಹೆಚ್ಚಳ!
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com