ಕೆಎಸ್‌ ಈಶ್ವರಪ್ಪನವರದ್ದು ಪುಗಸಟ್ಟೆ ಮಾತಾ?| ಇದೇ ಮೊದಲ ಸಲ ಬಿವೈ ವಿಜಯೇಂದ್ರ ಮಾಜಿ ಡಿಸಿಎಂ ವಿರುದ್ಧ ವಾಗ್ದಾಳಿ

Eshwarappa's words are of no use | This is the first time that BY Vijayendra has reacted to the former Deputy CM

ಕೆಎಸ್‌ ಈಶ್ವರಪ್ಪನವರದ್ದು ಪುಗಸಟ್ಟೆ ಮಾತಾ?| ಇದೇ ಮೊದಲ ಸಲ ಬಿವೈ ವಿಜಯೇಂದ್ರ ಮಾಜಿ ಡಿಸಿಎಂ ವಿರುದ್ಧ ವಾಗ್ದಾಳಿ
t BY Vijayendra, Deputy CM Eshwarappa

Shivamogga  Apr 14, 2024   ಕೆಎಸ್‌ ಈಶ್ವರಪ್ಪನವರಿಗೆ ಬಂಪರ್‌ ಆಫರ್‌ ನೀಡಿರುವ ವಿಚಾರದ ಬಗ್ಗೆ ಹಿರಿಯ ರಾಜಕೀಯ ಸುದ್ದಿಗಳ ವರದಿಗಾರರಾರದ ಆರ್‌.ಟಿ. ವಿಠಲಮೂರ್ತಿ ಯವರು ತಮ್ಮ ಫೇಸ್‌ಬುಕ್‌ ವಾಲ್‌ನಲ್ಲಿ ಬರೆದುಕೊಂಡಿದ್ದರು. ಆದರೆ ಈ ವಿಚಾರವನ್ನ ಕೆಎಸ್‌ ಈಶ್ವರಪ್ಪನವರು ಅಲ್ಲಗಳೆದಿದ್ದಷ್ಟೆ ಅಲ್ಲದೆ ಇವತ್ತು ಮೂರನೇ ಸಲ ನಾಮಪತ್ರವನ್ನು ಸಲ್ಲಿಸಿದ್ದಾರೆ. 

ಇದರ ನಡುವೆ ಸಂಧಾನದ ಕಥೆ ಬಹುತೇಕ ಮುಗಿದಿದೆ ಎಂಬ ಸಂದೇಶವೊಂದು ಬಿವೈ ವಿಜಯೇಂದ್ರ ರವರಿಂದ ಹೊರಬಿದ್ದಿದೆ. ಇವತ್ತು ಈ ಬಗ್ಗೆ ಮಾತನಾಡಿದ ವಿಜಯೇಂದ್ರರವರು ಮೊದಲ ಸಲ ಈಶ್ವರಪ್ಪನವರ ವಿರುದ್ಧ ಕೌಂಟರ್‌ ಕೊಟ್ಟಿದ್ದಾರೆ. ಇದೇ ಮೊದಲ ಕೆಎಸ್‌ ಈಶ್ವರಪ್ಪನವರ ವಿರುದ್ಧ ಹೇಳಿಕೆ ನೀಡಿರುವ ವಿಜಯೇಂದ್ರ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. 

ಶಿವಮೊಗ್ಗ ಕ್ಷೇತ್ರದ ಜನರೇ ಈಶ್ವರಪ್ಪನವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ. ಅವರು ಮಾತನಾಡಿದಷ್ಟು ದುಪ್ಪಟ್ಟು ಮತಗಳು ರಾಘವೇಂದ್ರರವರಿಗೆ ಲಭ್ಯವಾಗುತ್ತದೆ ಎಂದ ವಿಜಯೇಂದ್ರರವರು ಪುಗಸಟ್ಟೆ ಮಾತುಗಳಿಂದ ಪ್ರಯೋಜನ ಇಲ್ಲ ಎಂದಿದ್ದಾರೆ. 

ಇಷ್ಟೆ ಅಲ್ಲದೆ ಡಿಸಿಎಂ ಆಗಿ ಸಚಿವರಾಗಿ ಶಿವಮೊಗ್ಗಕ್ಕೆ ಈ‍ಶ್ವರಪ್ಪನವರ ಕೊಡುಗೆ ಏನು? ಯಡಿಯೂರಪ್ಪನವರು, ಬಿವೈ ರಾಘವೇಂದ್ರರವರ ಕೊಡುಗೆ ಏನು ಎಂಬುದನ್ನ ಮನೆ ಮನೆಗಳಲ್ಲಿಯು ಮಾತನಾಡುತ್ತಾರೆ. ಹಾಗಾಗಿ ಅವರಿಂದ ಕಲಿಯುವ ಅವಶ್ಯಕತೆ ಇಲ್ಲ. ರಾಘವೇಂದ್ರರವರು ಎರಡು ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದುಬರುತ್ತಾರೆ. ಈ‍ಶ್ವರಪ್ಪನವರ ವಿರುದ್ಧ ಮತದಾರರೇ ಕ್ರಮ ಕೈಗೊಳ್ಳುತ್ತಾರೆ ಎಂದಿದ್ದಾರೆ.