SUMALATHA : ಬಿಜೆಪಿಗೆ ಸಂಸದೆ ಸುಮಲತಾ! ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರು ಹೇಳಿದ್ದೇನು!? ವಿವರ ಇಲ್ಲಿದೆ
SUMALATHA TO BJP What did former CM BS Yediyurappa say? Here's the details
ಇತ್ತೀಚೆಗೆ ಶಿವಮೊಗ್ಗದಲ್ಲಿ ಉಸ್ತುವಾರಿ ಸಚಿವ ನಾರಾಯಣ ಗೌಡರು ಮಂಡ್ಯ ಸಂಸದೆ ಸುಮಲತಾ ಹಾಗೂ ಅವರ ಪುತ್ರ ಅಭಿಷೇಕ್ ಬಿಜೆಪಿಗೆ ಬರುವ ಸುಳಿವುಕೊಟ್ಟಿದ್ದರು. ಈ ಮಧ್ಯೆ ನಿನ್ನೆ ಇದೇ ವಿಚಾರದಲ್ಲಿ ಕೇಳಿಬಂದ ಪ್ರಶ್ನೆಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಈ ಸಂಬಂಧ ಚರ್ಚೆಯಾಗಿಲ್ಲವೆಂದಿದ್ಧಾರೆ. ನಮ್ಮೆಲ್ಲ ನಾಯಕರು ರಾಜ್ಯಾಧ್ಯಂತ ಪ್ರವಾಸ ಆರಂಭ ಮಾಡಿದ್ದಾರೆ. ಅಧಿವೇಶನ ನಂತರ ಮತ್ತೆ ಪ್ರವಾಸ ಶುರು ಮಾಡ್ತೇವೆ. ಕಾಂಗ್ರೆಸ್ ನವರು ಅಧಿಕಾರದ ಹಗಲುಗನಸು ಕಾಣುತ್ತಿದ್ದಾರೆ. ನಿಶ್ಚಿತವಾಗಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದ ಬಿಎಸ್ವೈ ರವರು ಮಂಡ್ಯ ಭಾಗದಲ್ಲಿ ಅಮಿತ್ ಶಾರವರು ಹೋಗಿ ಬಂದಿದ್ದಾರೆ, ಈ ವೇಳೆ ಅನೇಕರು ಬಿಜೆಪಿ ಬರಲು ರೆಡಿಯಾಗಿದ್ದಾರೆ ಅದು ಸಹ ನಮಗೆ ಬಹಳಷ್ಟು ಅನುಕೂಲ ಆಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
*shivamogga airport news : ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಡಾ.ಬಿ.ಆರ್. ಅಂಬೇಡ್ಕರ್ರವರ ಹೆಸರಿಡಿ!*
ಸುಮಲತಾ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಸಂಬಂಧಪಟ್ಟಂತೆ, ಆ ಬಗ್ಗೆ ಚರ್ಚೆ ಮಾಡಿಲ್ಲ, ಅವರ ಮನಸ್ಸಿನಲ್ಲಿ ಏನಿದೆ ಗೊತ್ತಿಲ್ಲ, ಅವರ ಬೆಂಬಲಿಗರು ಬಿಜೆಪಿಗೆ ಬರ್ತಾ ಇದ್ದಾರೆ, ಇದರ ಮುನ್ಸೂಚನೆ ಅರ್ಥಮಾಡಿಕೊಳ್ಳಿ ಎಂದಿದ್ಧಾರೆ. ಇನ್ನೂ ಭಾರತ ಜೋಡೊ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ, ಅದರಿಂದ ಯಾವುದೇ ಲಾಭ ಇಲ್ಲ,ಅವರಲ್ಲಿ ನಾಯಕರೇ ಇಲ್ಲ , ರಾಹುಲ್ ಗಾಂಧಿಯನ್ನು ಯಾರು ನಾಯಕರು ಅಂತಾರೆ ಅಂತಾ ಪ್ರಶ್ನಿಸಿದ್ದಾರೆ.
*hosanagara news : ಕೋರ್ಟ್ ವ್ಯಾಜ್ಯದ ನಡುವೆ ಪಂಜುರ್ಲಿ ದೈವಕ್ಕಾಗಿ ನಿರ್ಮಿಸಿದ್ದ ಹೊಸ ದೇಗುಲ ಕಟ್ಟಡ ಧ್ವಂಸ*
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com