SUMALATHA : ಬಿಜೆಪಿಗೆ ಸಂಸದೆ ಸುಮಲತಾ! ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪನವರು ಹೇಳಿದ್ದೇನು!? ವಿವರ ಇಲ್ಲಿದೆ

SUMALATHA TO BJP What did former CM BS Yediyurappa say? Here's the details

SUMALATHA  : ಬಿಜೆಪಿಗೆ ಸಂಸದೆ ಸುಮಲತಾ! ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪನವರು ಹೇಳಿದ್ದೇನು!? ವಿವರ ಇಲ್ಲಿದೆ

ಇತ್ತೀಚೆಗೆ ಶಿವಮೊಗ್ಗದಲ್ಲಿ ಉಸ್ತುವಾರಿ ಸಚಿವ ನಾರಾಯಣ ಗೌಡರು ಮಂಡ್ಯ ಸಂಸದೆ ಸುಮಲತಾ ಹಾಗೂ ಅವರ ಪುತ್ರ ಅಭಿಷೇಕ್​ ಬಿಜೆಪಿಗೆ ಬರುವ ಸುಳಿವುಕೊಟ್ಟಿದ್ದರು. ಈ ಮಧ್ಯೆ ನಿನ್ನೆ ಇದೇ ವಿಚಾರದಲ್ಲಿ ಕೇಳಿಬಂದ ಪ್ರಶ್ನೆಗೆ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಈ ಸಂಬಂಧ ಚರ್ಚೆಯಾಗಿಲ್ಲವೆಂದಿದ್ಧಾರೆ. ನಮ್ಮೆಲ್ಲ ನಾಯಕರು ರಾಜ್ಯಾಧ್ಯಂತ ಪ್ರವಾಸ ಆರಂಭ ಮಾಡಿದ್ದಾರೆ. ಅಧಿವೇಶನ ನಂತರ ಮತ್ತೆ ಪ್ರವಾಸ ಶುರು ಮಾಡ್ತೇವೆ. ಕಾಂಗ್ರೆಸ್ ನವರು ಅಧಿಕಾರದ  ಹಗಲುಗನಸು ಕಾಣುತ್ತಿದ್ದಾರೆ. ನಿಶ್ಚಿತವಾಗಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದ ಬಿಎಸ್​ವೈ ರವರು ಮಂಡ್ಯ ಭಾಗದಲ್ಲಿ ಅಮಿತ್ ಶಾರವರು ಹೋಗಿ ಬಂದಿದ್ದಾರೆ, ಈ ವೇಳೆ ಅನೇಕರು ಬಿಜೆಪಿ ಬರಲು ರೆಡಿಯಾಗಿದ್ದಾರೆ ಅದು ಸಹ ನಮಗೆ ಬಹಳಷ್ಟು ಅನುಕೂಲ ಆಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

*shivamogga airport news : ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಡಾ.ಬಿ.ಆರ್​. ಅಂಬೇಡ್ಕರ್​ರವರ ಹೆಸರಿಡಿ!*

ಸುಮಲತಾ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಸಂಬಂಧಪಟ್ಟಂತೆ, ಆ ಬಗ್ಗೆ ಚರ್ಚೆ ಮಾಡಿಲ್ಲ, ಅವರ ಮನಸ್ಸಿನಲ್ಲಿ ಏನಿದೆ ಗೊತ್ತಿಲ್ಲ, ಅವರ ಬೆಂಬಲಿಗರು ಬಿಜೆಪಿಗೆ ಬರ್ತಾ ಇದ್ದಾರೆ, ಇದರ ಮುನ್ಸೂಚನೆ ಅರ್ಥಮಾಡಿಕೊಳ್ಳಿ ಎಂದಿದ್ಧಾರೆ. ಇನ್ನೂ ಭಾರತ ಜೋಡೊ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ, ಅದರಿಂದ ಯಾವುದೇ ಲಾಭ ಇಲ್ಲ,ಅವರಲ್ಲಿ ನಾಯಕರೇ ಇಲ್ಲ , ರಾಹುಲ್ ಗಾಂಧಿಯನ್ನು ಯಾರು ನಾಯಕರು ಅಂತಾರೆ ಅಂತಾ ಪ್ರಶ್ನಿಸಿದ್ದಾರೆ. 

*hosanagara news : ಕೋರ್ಟ್​ ವ್ಯಾಜ್ಯದ ನಡುವೆ ಪಂಜುರ್ಲಿ ದೈವಕ್ಕಾಗಿ ನಿರ್ಮಿಸಿದ್ದ ಹೊಸ ದೇಗುಲ ಕಟ್ಟಡ ಧ್ವಂಸ*

VISL ಗೇ ಶಾಹಿ ಗಾರ್ಮೆಂಟ್ಸ್​ ಪರ್ಯಾಯವೇ? ಅಪ್ಪ ಕಳ್ಳ-ಮಗ ಸುಳ್ಳ! ಭದ್ರಾವತಿಯಲ್ಲಿ ಸಂಸದರಿಗೆ ಘೇರಾವ್​! ಬಿಜೆಪಿಗೆ ಮುಖಭಂಗ! ಫೆ.3 ಕ್ಕೆ ಹೆಚ್​​ಡಿಕೆ ಎಂಟ್ರಿ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com